ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೆನಪುಗಳು

ನೆನಪುಗಳೇ ಹಾಗೆ ಸತ್ತವರ ಬದುಕಿಸುತ್ತಿವೆ
ಬದುಕಿದ್ದವರನ್ನು ನಿದ್ದೆಗೆಡಿಸಿ ಸಾಯಿಸುತ್ತಿವೆ
ಬಾಲ್ಯದಿಂದ ಯೌವನದ ಹಾದಿಯಲ್ಲಿ
ಹಿಂದೆ ಹಿಂದೆ ಬರುವುವು ನೆನಪುಗಳು
ನಾವು ಕಟ್ಟಿಕೊಂಡ ಕನಸು ಕೈಗೆ ಸಿಗದೆ ಸಾಗುತ್ತಿರಲು ನೆನಪಿನಂಗಳದಿಂದ ಉದಯಿಸಿವೆ ಮತ್ತೆ ಮತ್ತೆ ಕನಸುಗಳು

ನೆನಪುಗಳ ಸರಮಾಲೆಯಿಂದ ನಗುವು ಕಾಣದಾಗಿದೆ
ಕಾಣದ ದೇವರ ಹುಡುಕಾಟದಲ್ಲಿ ವಯಸ್ಸು ಕಳೆದಿದೆ
ದೇವರ ಹುಡುಕುವುದೆ ಒಂದು ಕಾಯಕವಾಗಿದೆ
ಈ ಜಗದಲಿ ಮಾಡಬೇಕು ಮೂಕಾಭಿನಯ
ಅಭಿನಯ ಮಾಡಿದ್ದರೆ ಯಾರು ಬರುವುದಿಲ್ಲ ಸನಿಹ

ತೋರಿಸಬೇಕು ಮೈಮೇಲಿನ ಚಿನ್ನ
ಚಿನ್ನವಿಲ್ಲದಿದ್ದರೆ ಮಾತನಾಡಿಸುವುದಿಲ್ಲ ಯಾರು ನಿನ್ನ
ಕೊಚ್ಚಿಕೊಂಡಷ್ಟು ಮೆಚ್ಚಿಕೊಳ್ಳುವರು ನಿನ್ನ
ಅವರ ಹಣದ ಮುಂದೆ ನಿನ್ನ ಗುಣ ತೃಣ ಸಮಾನ

ನೆನಪುಗಳು ಬರಗಾಲದಲ್ಲಿ ಮಳೆ ಬಿದ್ದು
ಕೆರೆ ತುಂಬಿ ಕೋಡಿ ಬಿದ್ದಂತೆ
ಎಲ್ಲೊ ಬಿದ್ದಿದ್ದ ನೆನಪು ಹೃದಯಕ್ಕೆ ಒದ್ದು
ಕಣ್ಣಿನಲ್ಲಿ ಕಂಬನಿ ತರಿಸಿ ತನಗೆ ತಿಳಿಯದಂತೆ
ಇನ್ನೊಂದು ಕಡೆಗೆ ಜಾರುತ್ತಿದೆ
ನೆನಪುಗಳೇ ಹೀಗೆ
-ವಿ.ಶ್ರೀನಿವಾಸ,ವಾಣಿಗರಹಳ್ಳಿ,
ದೊಡ್ಡಬಳ್ಳಾಪುರ (ತಾ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ