ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನರೇಗಾ ಕೂಲಿಯ ಹಣ ಪಾವತಿಸುವಂತೆ ಕೂಲಿ ಕಾರ್ಮಿಕರಿಂದ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ

ಗದಗ ಸಮೀಪದ ತಿಮ್ಮಾಪೂರ ಗ್ರಾಮದ ಹಿಂದಿನ ಕೆರೆ ಅಭಿವೃದ್ಧಿಪಡಿಸಿ ಹೂಳು ಎತ್ತುವ ಕಾಮಗಾರಿಗೆ ಸುಮಾರು 11 ಲಕ್ಷ ರೂಪಾಯಿಗಳು ಮತ್ತು ಗುಂಡಪ್ಪ ಗುಂಡಪ್ಪನವರು ಹೊಲದಿಂದ ಕುಡಿಯುವ ನೀರಿನ ಹಿಂದಿನ ಕೆರೆಗೆ ಬರುವ ನೀರಿನ ಕಾಲುವೆ ಹೊಳು ಎತ್ತುವು ಕಾಮಗಾರಿಗೆ 11 ಲಕ್ಷ ರೂಪಾಯಿಗಳು ಒಟ್ಟು 22 ಲಕ್ಷ ರೂಪಾಯಿಗಳು ಕಾಮಗಾರಿಯನ್ನು ಪ್ರಾರಂಭಿಸಿ ಈ ಎರಡು ಕಾಮಗಾರಿಯಲ್ಲಿ 7 ದಿನಗಳವರೆಗೆ ಕೆಲಸವಾಗಿದ್ದು ಅದರಲ್ಲಿ ನೂರಾರು ಕೂಲಿ ಕಾರ್ಮಿಕರಿಗೆ ಕೇವಲ 2 ರಿಂದ 3 ದಿನಗಳ ಕೂಲಿ ಹಣ ಬಂದಿದ್ದು ಇನ್ನೂ ಉಳಿದ 4 ದಿನದ ಲಕ್ಷಾಂತರ ರೂಪಾಯಿ ಕೂಲಿಯ ಹಣ ಕಾರ್ಮಿಕರಿಗೆ ಬಂದಿಲ್ಲ ಆದರೆ ಕೆಲಸಕ್ಕೆ ಹೋಗದೆ ಇರುವವರ ಹೆಸರಿನಲ್ಲಿ 7 ದಿನಗಳ ಕೂಲಿ ಹಣ ಪಾವತಿಸಿ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದಾರೆ
ಹೀಗಾದರೆ ಕೂಲಿ ಮಾಡಿ ಬದುಕುವವರ ಪಾಡು ಏನು ಈ ಎರಡೂ ಕಾಮಗಾರಿಯ 22 ಲಕ್ಷ ರೂಪಾಯಿ ಹಣ ಏನಾಯಿತು ಎಂದು ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿ ಮುಂದೆ ಗಾಂಧೀಜಿ ಭಾವಚಿತ್ರ ಇಟ್ಟು ಪ್ರತಿಭಟನೆ ಮಾಡಿ ಹಿರಿಯ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಕೂಲಿ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು ಪಿಡಿಒ,ಇಓ ಅವರನ್ನು ಎರಡು ಘಂಟೆಗಳ ಕಾಲ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ನಂತರ ಒಂದು ತಿಂಗಳ ನಂತರ ಈ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಕೂಲಿ ಹಣ ಪಾವತಿಸುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ,ಗ್ರಾಮ ಪಂಚಾಯಿತಿ ಸದಸ್ಯರಾದ ಹುಚ್ಚೀರಪ್ಪ ಜೋಗಿನ,ಮಹಾಂತೇಶ ಹಂಚಿನಾಳ, ಬಸವರಾಜ ಯಲಬುರ್ಗಿ,ಬಸವರಾಜ ದೇವರವರ, ರವಿ ಬಿಕ್ಕನಹಳ್ಳಿ, ಅಶೋಕ ದಾಸಣ್ಣವರ ಹಾಗೂ ನೂರಾರು ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ