ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಂಬು-ಕವನ

ಶಿವ ಮಂತ್ರದ ಬರಿಕೂಗಿಗೆ ಪ್ರತಿ ವಾರದ ಸ್ಮರಣೆಗೆ
ಅಣು-ಕಣದಿ ಅಡಗಿರುವ ಪ್ರತಿಜೀವಿಯ ಉಸಿರಿಗೆ
ಸಲುಹುವವನ ಸ್ಮರಿಸುವವರು ವಿಧವಿಧದ ರೂಪದಿ
ಕೊಲ್ಲುವವನು ಕಾಯುವವನು ಅವನಿಲ್ಲದೆ ಏನಿದೆ.!!

ನಂಬಿಕಿಡು ದೇವರಲಿ ಅತಿ ನಂಬಿಕೆಡದಿರು
ಹಂತಕನು ಬಿಡುದಿಲ್ಲ ಕೊನೆದಿನಗಳು ಮರೆತರು
ಅವಬಂದನೊ ಇವಬಂದನೊ ತಲೆಜಜ್ಜಿಕೊಂಡರೂ
ನಾಮದಲೂ ನೀಮದಲೂ ಕೈಕುಟ್ಟಿಕೊಂಡರು.!!

ಅವ ಅಲ್ಲಾ ಶಿವನಲ್ಲ ಸುತ್ತಲೇನು ಶಿಲುಬೆಯೋ
ಆಕಾರವೊ ನಿರಾಕಾರವೋ ಬಯಬಂಧನ ಪಾಯವೋ?
ಕೊಲ್ಲದಿರಿ ನಾಮಗಳ ವಿಂಗಡಿಸಿ ಜೀವಿಯ
ಪುಣ್ಯಕಿದು ಬಂದಾಗಿದೆ ಇರುದಿನಗಳ ಎಣೆಕೆಯ.!!

ಅವನಾರು ಇವನಾರು ಬರಿ ಎಂಜಲು ಕಣ್ಣಿಗೆ
ನಾಕುಂತೆನೊ ನೀಕುಂತೆಯೋ ಮನಗೋಣಗಿದೆಬೆಚ್ಕಗೆ
ತನುಶುದ್ದವೂ ಮನಶುದ್ದವೂ
ನುಡಿಶುದ್ದವು ನೆಡೆಯಲಿ
ಆ ಕಷ್ಟವಾ ಈ ಕಷ್ಟವಾ ಕೊಡು ಅಹುತಿ ಕಿಚ್ಚಿಗೆ.!!

ಬಗೆಬಗೆದು ಓದಿದರೂ ಲಿಪಿಶಾಸನ ಪುಟಗಳ
ವೇದಂಗಳು ಸಾರಿವವು ಮನ ಮುಕುಟದ ತೃಷೆಗಳ
ಹಿಂದೊದರೆ ಮುಂದೊದರೆ ಹೆಸರೊಂದೆ ಶಾಸನ
ಬಂಧನವಿದು ಬಿಡಿಸಿದರೆ ನೆಲಒಂದೇ ನಿಶ್ಚಿತ
-ಪಿಬಿ ಕಮ್ಮಾರ ಐಹೊಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ