ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಾರಕಿಹೊಳಿ ವಿರುದ್ಧ ಗುಡುಗಿದ ಸೂಲಿಬೆಲೆ

ಬೆಳಗಾವಿ : ಅಂಬೇಡ್ಕರ್ ಅವರಂತ ಧೀಮಂತ ವ್ಯಕ್ತಿಗಳೇ ಹಿಂದೂ ಧರ್ಮದ ಕುರಿತು ಯಾವತ್ತು ಮಾತಮಾಡಿಲ್ಲ. ಅವರ ಹೆಸರು ಹೇಳಿಕೊಂಡು ಧರ್ಮದ ವಿರುದ್ಧ ಮಾತನಾಡಿ ನಿಮ್ಮ ಒಬ್ಬರಿಂದ ನಮ್ಮ ಹಿಂದೂ ಧರ್ಮ ಅಲ್ಲಾಡುವುದಿಲ್ಲ‌ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಯಮಕನಮರಡಿಯಲ್ಲಿ ನಡೆದ ನಾನು “ನಾನು ಹಿಂದೂ” ಬೃಹತ್ ಸಮಾವೇಶದಲ್ಲಿ ಮಾತನಾಡಿದ ಇವರು, ಹಿಂದೂ ಧರ್ಮದ ಕುರಿತಾಗಿ ಯಾರೋ ಒಬ್ಬರು ಮಾತನಾಡಿದರೆ ಧರ್ಮ ಅಲ್ಲಾಡುವುದಿಲ್ಲ. ಹಿಂದೂ ಪದದ ಅರ್ಥ ಅಶ್ಲೀಲ ಎಂದು ಡಿಕ್ಷನರಿ ನೋಡಿ ಹೇಳಿದವರಿಗೆ ಅದು ಯಾವ ಡಿಕ್ಷನರಿ ಎಂಬುವುದೇ ನೆನಪಿಲ್ಲ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ನನ್ನ‌ ಹಿಂದೂ ಧರ್ಮ ಹಾಗೂ ತಾಯಿಗೆ ಮಾತನಾಡಿದಾಗ ಅವರ ಕ್ಷೇತ್ರಕ್ಕೆ ಹೋಗಿ ತಕ್ಕ ಉತ್ತರ ನೀಡಬೇಕು ಎಂದು ಅನಿಸಿತು. ಹಿಂದೂ ಪದದ ಅರ್ಥ ಅಶ್ಲೀಲ ಎಂದವರಿಗೆ ತಕ್ಕ ಉತ್ತರ ನೀಡಬೇಕೆಂಬ ಉದ್ದೇಶದಿಂದಲೇ ಬಂದಿರುವೆ. ನನ್ನನ್ನು ವೈಯಕ್ತಿಕವಾಗಿ ಟೀಕೆ ಮಾಡಿದರೆ, ಜಾತಿಯಿಂದ ಟೀಕೆ ಮಾಡಿದರೆ ಸುಮ್ಮನಿರುವೆ ಆದರೆ ಧರ್ಮದ ವಿಷಯಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಗುಡುಗಿದರು.

ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಮೊದಲಿನಂತೆ ನಾಲಿಗೆ ಹರಿಬಿಟ್ಟರೆ ಯುವಕರು ಸ್ಪಷ್ಟ ಉತ್ತರ ನೀಡುತ್ತಾರೆ ಏನೋ ಮಾತನಾಡುತ್ತೇವೆ ಎಂದರೆ ಈಗ ನಡೆಯುವುದಿಲ್ಲ. ಅನ್ಯ ಧರ್ಮದ ವಿರುದ್ಧ ಮಾತನಾಡುವ ಶಕ್ತಿ ತೋರಿಸದ ಹಲವರು ಹಿಂದೂ ಧರ್ಮದ ವಿರುದ್ಧ ಮಾತನಾಡುವ ಚಾಳಿ ಬಿಡಬೇಕು ಎಂದರು ಹಾಗೆ ಹಿಂದೂ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದವರ ಕ್ಷೇತ್ರಕ್ಕೆ ಬಂದು ತಕ್ಕ ಪ್ರತ್ಯುತ್ತರ ನೀಡಿದ್ದೇವೆ ಎಂದು ಹೇಳಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ