ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೇಕು ಮತ್ತೊಬ್ಬ ಸರದಾರ

ಕೆಟ್ಟ ಪದ್ಧತಿಗಳಿಗೆ, ದುಷ್ಟ ನಾಯಕರುಗಳಿಗೆ
ಗಟ್ಟಿಯಾಗಿ ಎದ್ದು ನಿಂತು ಮಟ್ಟ ಹಾಕಿ
ಚಟ್ಟ ಕಟ್ಟಲು ಬೇಕು ಮತ್ತೊಬ್ಬ ಸರದಾರ.

ನೀತಿ ನಿಯಮಗಳ ಮುರಿದವರಿಗೆ
ಜಾತಿ ಭೇದಗಳ ಹುಟ್ಟು ಹಾಕುವವರಿಗೆ
ಅಡ್ಡತಡೆದು ನಿಲ್ಲಿಸಲು ಬೇಕು ಮತ್ತೊಬ್ಬ ಸರದಾರ.

ಬಡವ ಬಲ್ಲಿದನೆಂಬ ಅರಿಯದವರಿಗೆ
ಬದುಕು ಬವಣೆಗಳ ತಿಳಿಯದವರಿಗೆ
ಕಲಿಸಿ ತಿಳಿಹೇಳಲು ಬೇಕು ಮತ್ತೊಬ್ಬ ಸರದಾರ.

ಊರ ಹೊರಗಿದ್ದವರ, ಕೇರಿಯಲಿ ಬದುಕುವವರ
ಅನ್ಯಾಯ-ಹಿಂಸೆ-ತುಳಿತಕ್ಕೊಳಗಾದವರ
ಬೆನ್ನಿಗೆ ಬೇಕು ಮತ್ತೊಬ್ಬ ಸರದಾರ.

ಅಕ್ರಮ ನಡೆಸುವವರ ಪರಾಕ್ರಮದೊಳಗ ಮೆರೆಯುವವರ
ಅಹಂದೊಳಗ ಮುಳುಗಿದವರ ಜಡೆ ಹಿಡಿದು
ಮೇಲೇತ್ತಲು ಬೇಕು ಮತ್ತೊಬ್ಬ ಸರದಾರ.

  • ಹನುಮಂತ ದಾಸರ ಹೊಗರನಾಳ.
    ಮೊ: 9945246234.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ