ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು ಕ್ಷೇತ್ರದ ಮತದಾರರು ಸ್ವಯಂ ಪ್ರೇರಿತರಾಗಿ ಜೆ ಡಿ ಎಸ್ ಪಕ್ಷ ಸೇರ್ಪಡೆ:ಎಮ್. ಆರ್.ಮಂಜುನಾಥ್ .

ಹನೂರು:ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ತಾಯಿ ಹೃದಯದವರು ಅವರ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ ಎಲ್ಲಾ ಜನಾಂಗದವರು ಸಹ ರಾಜಕೀಯವಾಗಿ,ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುಭೀಕ್ಷವಾಗಿದ್ದರು ಆದ್ದರಿಂದಲೇ ಅವರನ್ನು ನಾಡಿನ ಜನತೆ ಮಾತೃ ಹೃದಯವಂತರು ಎಂದು ಕರೆಯುವುದು ಎಂದು ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಗೂ ಹನೂರು ಕ್ಷೇತ್ರದ ಅಭ್ಯರ್ಥಿಯಾದ ಎಮ್ ಆರ್ ಮಂಜುನಾಥ್ ತಿಳಿಸಿದರು
ಕಾಮಗೆರೆ ಸಮೀಪದ ಶ್ರೀ ಶ್ರೀನಿವಾಸಪ್ರಸಾದ್ ರ ಸಮುದಾಯ ಭವನದಲ್ಲಿ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಜನರು ಸ್ವಯಂ ಪ್ರೇರಿತ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಜಿ ಸಿ ಎಮ್ ಹೆಚ್ ಡಿ ಕೆ ಯವರು ದೇಶದಲ್ಲೆ ರಾಜ್ಯವನ್ನು ಉತ್ತಮ ಆಡಳಿತ ರಾಜ್ಯವೆಂಬ ಹೆಗ್ಗಳಿಕೆಗೆ ಕೊಂಡೊಯ್ದಂತವರು ಅವರ ಸರಳ ವ್ಯಕ್ತಿತ್ವ ಹಾಗೂ ನಮ್ಮ ಮೇಲಿನ ಪ್ರೀತಿಯಿಂದ ಇಂದು ಹಲವಾರು ಜನರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರದಲ್ಲಿಯು ಸಹ ನಾವು ಗೆಲ್ಲಲು ತಾವುಗಳು ಶ್ರಮವಹಿಸುತ್ತಿರುವುದು ಬಹಳ ಸಂತೋಷ ದ ವಿಷಯ ಎಂದರು
ಇದೇ ಸಮಯದಲ್ಲಿ ಮಾದೇಶ್ ,ನಾಗರಾಜು ಯಜಮಾನರು,ಅಂದಾನಿ ಸಿದ್ದರಾಜು,ಕ್ಷೇಮಿಯರ್ ಎನಾಕೆರ್ ,ರಕ್ಷಿತಾ,ಕಟ್ಟಿ,ನಂಜುಂಡ,ಮಾದೇಶ್,ರಾಜಸ್ವಿತ,ಬಸವಣ್ಣ,ವಿನೋದ್,ಚಿಕ್ಕರಂಗ,ನಿಲ್ಕಂಟ,ರವಿ ಅರುಣ್ ಬಸವಣ್ಣ ಸೇರಿದಂತೆ ಇನ್ನು ಅನೆರಕರು ವಿವಿಧ ಪಕ್ಷತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು
ಇದೇ ಸಮಯದಲ್ಲಿ ಉದ್ನೂರು ಪ್ರಸಾದ್ ,ಶ್ಯಾಗ್ಯ ಬಾಬು ,ಮಾಜಿ ಜಿಲ್ಲಾ ಪಂಚಾಯತಿ ಉಪಾದ್ಯಕ್ಷರಾದ ಶಿವಮೂರ್ತಿ,ಮಂಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ