ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಮರ ಶ್ರೀ ಆಲದ ಮರಕ್ಕೆ ಉತ್ತರ ಪ್ರದೇಶದ ರಾಬಿನ್‌ ಸಿಂಗ್ ಪರಿಸರ ಪ್ರೇಮಿ ಯುವಕ ಭೇಟಿ ನೀಡಿರುವುದು ಸಂತಸ:ಭೀಮಣ್ಣ ವಕೀಲರು .

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಇಂದು ಉತ್ತರ ಪ್ರದೇಶದ ರಾಬಿನ್ ಸಿಂಗ್ ಪರಿಸರ ಪ್ರೇಮಿ ಯುವಕ ಭೇಟಿ ನೀಡಿ ಮರವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಭೀಮಣ್ಣ ವಕೀಲರು ಮಾತನಾಡಿ ಉತ್ತರ ಪ್ರದೇಶದ ರಾಬಿನ್ ಸಿಂಗ್ ಎನ್ನುವ ಯುವಕ ಪರಿಸರ ಸಂರಕ್ಷಣೆ ಗತಿ ವಿಧಿಯ ಪರ್ಯಾವರಣದ ನಿಮಿತ್ಯ ಕನ್ಯಾಕುಮಾರಿಯಿಂದ ಸೈಕಲ್ ಮೂಲಕ ಜಾಗೃತಿ ಅಭಿಯಾನವನ್ನು ಕೈಗೊಂಡಿದ್ದು ದೇಶದ ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸೈಕಲ್ ಮುಖಾಂತರ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಶುರು ಮಾಡಿದ್ದಾರೆ.ಸಾರ್ವಜನಿಕರಿಗೆ ಪರಿಸರ ಬಗ್ಗೆ,ಪರಿಸರ ಸಂರಕ್ಷಣೆ,ಪರಿಸರ ರಕ್ಷಣೆ ಈ ವಿಷಯಗಳನ್ನ ಹೇಳುತ್ತಾ ಸೈಕಲ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಸುಮಾರು ಎರಡು ವರ್ಷಗಳ ಕಾಲ ಇವರು ಈ ದೇಶದ ಎಲ್ಲ ಜಿಲ್ಲೆಗಳಲ್ಲೂ ಪರಿಸರ ಸಂರಕ್ಷಣೆಯ ವಿಷಯವನ್ನು ಇಟ್ಕೊಂಡು ಸುತ್ತಾಡುವವರಿದ್ದಾರೆ ಸದ್ಯ 2 ತಿಂಗಳಿನಿಂದ ಇವರು ಸೈಕಲ್ ನಿಂದಲೇ ಸುತ್ತಾಡುತ್ತಿದ್ದಾರೆ.ಇವರನ್ನು ಕಂಡ ನಮ್ಮ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಸಸಿ ನೀಡುವ ಮೂಲಕ ಸ್ವಾಗತವನ್ನು ಕೋರಿದರು ರಾಬಿನ್ ಸಿಂಗ್ ಅವರ ಉದ್ದೇಶ ಭಾರತ ಸಂಪೂರ್ಣ ಹಸಿರು ಆಗಬೇಕು.ಉತ್ತಮ ಗಾಳಿ ದೊರೆಯುವಂತಾಗಬೇಕು ಎನ್ನುವದೇ ಅವರ ಉದ್ದೇಶ.ಇಂದು ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡುರುವುದು ನಮಗೆಲ್ಲ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಪರಿಸರ ಪ್ರೇಮಿ ರಾಬಿನ್ ಸಿಂಗ್ ಅವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ರಾಯಪ್ಪ ವಕೀಲರು, ಜೀವ ಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ,ಅಶೋಕ ಖಾಜಿ,ವೀರೇಶ ಇಲ್ಲೂರು ವಕೀಲರು,ಚನ್ನವೀರಗೌಡ, ಉಮೇಶಗೌಡ,ಅಮರಯ್ಯ ಶಾಸ್ತ್ರಿ, ಲಿಂಗರಾಜು,ಪ್ರಲ್ಹಾದ ಪ್ರೀಯ ಪೋಟೋ ಸ್ಟುಡಿಯೋ, ಮತ್ತಿತರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ