ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗುಂಡನ ಕಿತಾಪತಿ

ರಾಮಾಪುರ ಎಂಬ ಊರಿನಲ್ಲಿ ಶಂಕ್ರಪ್ಪ ಮತ್ತು ರೇವತಿ ಎಂಬ ದಂಪತಿ ವಾಸವಾಗಿದ್ದರು. ಶಂಕ್ರಪ್ಪ ಒಂದು ದಳ್ಳಾಳಿ ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದನು. ಈ ದಂಪತಿಗೆ ಗುಂಡ ಮತ್ತು ಗಂಗಾ ಎಂಬ ಇಬ್ಬರು ಮಕ್ಕಳಿದ್ದು ಶಂಕ್ರಪ್ಪ ಅಷ್ಟೇನು ಸ್ಥಿತಿವಂತನಲ್ಲದಿದ್ದರೂ ಇತ್ತೀಚೆಗಷ್ಟೇ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಗಳ ಮದುವೆಯನ್ನು ಮಾಡಿದ್ದನು. ಇವರ ಮಗ ಗುಂಡ ತಕ್ಕ ಶಿಕ್ಷಣವನ್ನು ಪಡೆಯದಿದ್ದರೂ ಕಿತಾಪತಿ ಮಾಡುವುದರಲ್ಲಿ ಪಿ.ಎಚ್.ಡಿ.ಪದವಿಯನ್ನು ಪಡೆದಿದ್ದನು.
ಹೀಗೆಯೇ ಒಂದು ದಿನ ಶಂಕ್ರಪ್ಪ ತನ್ನ ಹೆಂಡತಿ ರೇವತಿಯೊಂದಿಗೆ ಮಾತನಾಡುತ್ತ ಹೇಗೋ ಆ ದೇವರ ದಯೆಯಿಂದ ಮಗಳ ಮದುವೆಯಾಯಿತು ಮುಂದೆ ಅವಳ ಸಂಸಾರ, ಮಕ್ಕಳ ಶಿಕ್ಷಣ ಜವಾಬ್ದಾರಿ ಹೇಗೋ ಏನೋ? ಅದಕ್ಕೆ ರೇವತಿ ನಗುತ್ತ ರೀ ಮದುವೆ ಮಾಡಿ ಇನ್ನೂ ನಾಲ್ಕು ತಿಂಗಳು ಆಗಿಲ್ಲ,ಈಗ್ಯಾಕೆ ಅದರ ಬಗ್ಗೆ ಚಿಂತಿಸ್ತೀರಿ? ಅಲ್ಲವೇ ಜೀವನದಲ್ಲಿ ಲೆಕ್ಕಾಚಾರ ಇರಬೇಕು,ಖರ್ಚು ವೆಚ್ಚ ಅಂದರೆ ಸಾಮಾನ್ಯನಾ? ರೀ ನಿಮ್ಮ ಆತುರ ನೋಡಿದರೆ ಮೊದಲೇ ಶಾಲೆಯಲ್ಲಿ ಸೀಟು ಬುಕ್ ಮಾಡ್ತೀರಾ?ಏನು ಕಥೆ.
ಅಷ್ಟು ಹೊತ್ತಿಗೆ ಆಗಲೇ ಇವರು ಮಾತನಾಡಿದ್ದನ್ನು ಅರ್ಧಂಬರ್ಧ ಕೇಳಿಸಿಕೊಂಡ ಗುಂಡ ತನ್ನ ತಂದೆ ತಾಯಿ ಕಡೆ ಬುದ್ಧಿವಂತ ಎಂದು ಎನಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ನೇರವಾಗಿ ಒಂದು ಶಾಲೆಯ ಕಡೆ ಹೊರಟನು.ಶಾಲೆಯ ಕಛೇರಿಯಲ್ಲಿ ಮುಖ್ಯೋಪಾಧ್ಯಾಯರು ಒಂದು ಫೈಲ್ ನಲ್ಲಿರುವ ಪೇಪರ್ ಗಳನ್ನು ಪರಿಶೀಲನೆ ಮಾಡುತ್ತಿದ್ದರೆ ಜೊತೆಯಲ್ಲಿ ಒಬ್ಬ ಸಿಬ್ಬಂದಿ ಕೂಡ ನಿಂತಿದ್ದರು. ಅಷ್ಟರಲ್ಲಿ ಕಛೇರಿಯನ್ನು ಪ್ರವೇಶಿಸಿದ ಗುಂಡನನ್ನು ನೋಡಿ ಮುಖ್ಯೋಪಾಧ್ಯಾಯರು ಬನ್ನಿ ಕುಳಿತುಕೊಳ್ಳಿ ಎಂದಾಗ ಕುಳಿತ ಗುಂಡ,ತನ್ನ ಪರಿಚಯ ಮಾಡಿಕೊಂಡ ನಂತರ ಮುಖ್ಯೋಪಾಧ್ಯಾಯರು ಹೇಳಿ ಸರ್. ಗುಂಡ ನಮ್ಮ ಮಗುವಿಗೆ ನಿಮ್ಮ ಶಾಲೆಯಲ್ಲಿ ಅಡ್ಮೀಷನ್ ಮಾಡಿಸಲು ಬಂದಿದ್ದೇನೆ ಇವನ ಮಾತನ್ನು ಕೇಳಿ ಮುಖ್ಯೋಪಾಧ್ಯಾಯರು ತುಂಬಾ ಸಂತೋಷ, ನಿಮ್ಮ ಮಗುನಾ? ಅಲ್ಲ ನನ್ನ ಅಕ್ಕನ ಮಗು,ಮಗುವನ್ನು ಕರೆದುಕೊಂಡು ಬಂದಿದ್ದೀರಾ.? ಇಲ್ಲ ಮಗುವನ್ನು ಕರೆದುಕೊಂಡು ಬಂದಿದ್ದರೆ ಚೆನ್ನಾಗಿತ್ತು ಆಗ ಗುಂಡ ಅಕ್ಕ ಬೇರೆ ಊರಿನಲ್ಲಿ ಇದ್ದಾಳೆ ಓಕೆ ಆದರೆ ಮಗು ಎಲ್ಲಿ? ನನ್ನ ಅಕ್ಕನ ಹೊಟ್ಟೆಯಲ್ಲಿ ಇದೆ ಇನ್ನೂ ಮಗುವೇ ಹುಟ್ಟಿಲ್ಲ ಇವನ ಮಾತನ್ನು ಕೇಳಿದ ಮುಖ್ಯೋಪಾಧ್ಯಾಯರು ಮತ್ತು ಜೊತೆಯಲ್ಲಿದ್ದ ಸಿಬ್ಬಂದಿ ಕಂಗಾಲಾಗಿದ್ದರಲ್ಲದೇ ಇವರಿಗೆ ಮೂರು ಲೋಕ ಸುತ್ತಿ ಬಂದ ಹಾಗೆ ಆಗಿತ್ತು ಆಗಲೇ ಇವನ ಬುದ್ಧಿಯನ್ನು ಅರ್ಥಮಾಡಿಕೊಂಡ ಮುಖ್ಯೋಪಾಧ್ಯಾಯರು ಅದು ಸರಿ ಈಗ್ಯಾಕೆ ಬಂದಿದ್ದು? ಅದಕ್ಕೆ ಗುಂಡ ಈಗತಾನೆ ಹೇಳಿದ್ದೇನಲ್ಲ ಮಗು ಅಡ್ಮಿಷನ್ ಗೆ ಬಂದಿದ್ದೇನೆಂದು, ಮುಖ್ಯೋಪಾಧ್ಯಾಯರಿಗೆ ತಲೆ ಕೆಟ್ಟು ಮೈ ಮೇಲಿನ ಬಟ್ಟೆ ಹರಿದುಕೊಂಡು ಹೋಗುವುದು ಬಾಕಿ ಇತ್ತು. ಅಲ್ಲರೀ ಮಗು ಇಲ್ಲದೇ ಈಗಿನ ಕಾಲದಲ್ಲಿ ಯಾರು ಅಡ್ಮಿಷನ್ ಮಾಡಿಸ್ತಾರಾ? ನೀವೇ ಹೇಳಿ ಈ ರೀತಿ ನಮಗೆ ಮಾಡಲು ರೂಲ್ಸ್ ಕೂಡ ಇಲ್ಲ ಆಗ ಗುಂಡ ನಾನು ಮಾಡಿಸ್ತೀನಲ್ಲ,ಇವನ ಮಾತನ್ನು ಕೇಳಿ ಮುಖ್ಯೋಪಾಧ್ಯಾಯರಿಗೆ ಕೋಪ ನೆತ್ತಿಗೇರಿದ್ದರೂ ತೋರಿಸಿಕೊಳ್ಳದೇ ತಾಳ್ಮೆಯಿಂದ ನಿಮ್ಮನ್ನು ಇಲ್ಲಿ ಯಾರು ಕಳುಹಿಸಿದ್ದು? ಅದಕ್ಕೆ ಗುಂಡ ಯಾರೂ ಕಳುಹಿಸಿಲ್ಲ,ನಾನೇ ಬಂದೆ ಯಾಕೆ? ನನ್ನ ತಂದೆ ತಾಯಿ ಮಗುವಿನ ಶಾಲೆಯ ಅಡ್ಮಿಷನ್ ಬಗ್ಗೆ ಮಾತನಾಡುತ್ತಾ ಇದ್ದರು ಈ ಕಾರಣಕ್ಕೆ ಅಡ್ಮಿಷನ್ ಮಾಡಿಸಲು ಬಂದಿದ್ದೇನೆ. ಇವನ ಸಮಸ್ಯೆಯನ್ನು ಅರ್ಥಮಾಡಿಕೊಂಡ ಮುಖ್ಯೋಪಾಧ್ಯಾಯರು ಸದ್ಯ ನಮ್ಮಲ್ಲಿ ಸೀಟು ಖಾಲಿ ಇಲ್ಲ ಇನ್ನೂ ಐದು ವರ್ಷ ಬಿಟ್ಟು ಬನ್ನಿ ನಿಮ್ಮ ಮಗುವಿಗೆ ಖಂಡಿತವಾಗಿಯೂ ಸೀಟು ಕೊಡುತ್ತೇನೆಂದು ಹೇಳಿದಾಗ ಗುಂಡ ಓಕೆ ಸರ್ ಐದು ವರ್ಷ ನಂತರ ಬಂದು ಅಡ್ಮಿಷನ್ ಮಾಡಿಸುತ್ತೇನೆ ಎಂದು ಹೇಳಿ ಹೊರಗೆ ಬಂದರೆ ಮುಖ್ಯೋಪಾಧ್ಯಾಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಇತ್ತ ಕಡೆ ಮನೆಯಲ್ಲಿ ತಂದೆ ತಾಯಿ ಇವನು ಹೇಳದೇ ಎಲ್ಲಿ ಹೋದ ಎಂದು ಚಿಂತಿಸುತ್ತ ಇವನ ದಾರಿಯೇ ಕಾಯುತ್ತಿದ್ದರು ಮನೆಗೆ ಬಂದ ಗುಂಡನನ್ನು ತಾಯಿ ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೀ? ಗುಂಡ ಅಡ್ಮಿಷನ್ ಮಾಡಿಸಲು ಶಾಲೆಗೆ ಹೋಗಿದ್ದೆ. ಚಕಿತಳಾದ ತಾಯಿ ಯಾರಿಗೆ? ಏನು ಅಮ್ಮ ನೀನೇ ಹೇಳಿದ್ದು ಇಷ್ಟು ಬೇಗ ಮರೆತಿಯಾ. ಎಂತಹ ಮರೆವು ನಿನ್ನದು? ಅದಕ್ಕೆ ತಾಯಿ ನಾನು ಏನೋ ಹೇಳಿದೆ? ಅದೇ ಅಮ್ಮ ನೀನು ಮತ್ತು ಅಪ್ಪ ಅಕ್ಕನ ಮಗುವಿನ ಅಡ್ಮಿಷನ್ ಬಗ್ಗೆ ಮಾತನಾಡುತ್ತಿದ್ರಿ. ಅದಕ್ಕೆ ನಾನೇ ಹೋಗಿದ್ದೆ. ಹುಟ್ಟಲಾರದ ಮಗುವಿಗೆ ಅಡ್ಮಿಷನಾ? ಶಾಲೆಯಲ್ಲಿ ಏನು ಹೇಳಿದರು? ಆಗ ಗುಂಡ ನಿಮ್ಮ ಮಗುವಿಗೆ ಈಗ ನಿಮ್ಮ ಮಗುವಿಗೆ ಸೀಟು ಕೊಡಲು ಆಗುವುದಿಲ್ಲ. 5 ವರ್ಷದ ನಂತರ ಬನ್ನಿ ಖಂಡಿತ ಸೀಟು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದರು. ಯಾವಾಗಲೂ ನನ್ನನ್ನು ದಡ್ಡ ಎಂದು ಬೈಯುತ್ತಿದ್ದಿ, ಈಗಲಾದರೂ ಗೊತ್ತಾಯಿತಾ ನಾನು ಎಷ್ಟು ಬುದ್ಧಿವಂತ ಎಂಬುದು. ಇವನ ಮಾತನ್ನು ಕೇಳಿದ ತಂದೆ ತಾಯಿ ಮೂರ್ಛೆ ಹೋಗುವುದು ಒಂದು ಬಾಕಿಯಿತ್ತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ