ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಗತ್ತಿನಲ್ಲಿ ಕ್ರಾಂತಿಗಳು ಯುವಕರಿಂದಲೇ ಸಂಭವಿಸಿವೆ

ಜಮಾತೇ ಇಸ್ಲಾಮಿ ಹಿಂದ್ ವಿಜಯಪುರ ನಗರ ಶಾಖೆ ವತಿಯಿಂದ ಯುವಕರಿಗಾಗಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಜಮಾತ್‌ನ ಬಾಗಲಕೋಟ ಜಿಲ್ಲಾ ಸಂಚಾಲಕರಾದ ಜನಾಬ ಸಹೀದ್ ಅಹ್ಮದ್ ಕೊತ್ವಾಲ ಆಗಮಿಸಿದ್ದರು.ಅವರು ಯುವಕರನ್ನುದ್ದೇಶಿಸಿ ಮಾತನಾಡುತ್ತಾ ಜಗತ್ತಿನಲ್ಲಿ ಕ್ರಾಂತಿಗಳು ಯುವಕರಿಂದಲೇ ಸಂಭವಿಸಿವೆ ಯುವಕರು ಸಾಮಾಜಿಕ ಪರಿವರ್ತನೆಗಾಗಿ ಎದ್ದೇಳಬೇಕೆಂದು ಕರೆ ನೀಡಿದರು.

ಇನ್ನೋರ್ವ ಅತಿಥಿಗಳಾದ ಎಂ.ಡಿ.ಬಳಗಾನೂರ ರವರು ಮಾತನಾಡಿ, ಯುವಕರು ಸಮಾಜದ ಬೆನ್ನೆಲುಬು ಆಗಿದ್ದಾರೆ. ಮುಸ್ಲಿಂ ಸಮುದಾಯದ ಯುವಕರು ನಿರಾಶೆಗೊಳ್ಳದೆ ಸಕಾರಾತ್ಮಕ ಚಿಂತನೆಯ ಅಳವಡಿಸಿಕೊಳ್ಳಬೇಕು ಹಾಗೂ ಅನ್ಯಧರ್ಮಿಯರೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸಿ ಅವರ ತಪ್ಪು ತಿಳುವಳಿಕೆಯನ್ನು ದೂರಮಾಡಬೇಕೆಂದರು.
ವಕೀಲರಾದ ಜ. ಮಹಮೂದ ಕಾಜಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಜನಸಂಖ್ಯೆಯಲ್ಲಿ ಶೇಕಡ 60 ರಷ್ಟು ಯುವಕರಾಗಿದ್ದಾರೆ ಸಮಾಜ

ಅವರ ಕಡೆ ಆಶಾಭಾವನೆಯಿಂದ ನೋಡುತ್ತಿದೆ ಎಂದರು.ಸಮಾಜದ ಸುಧಾರಣೆಯನ್ನು ಯುವಕ ಸುಧಾರಣೆಯ ಮೇಲೆ ಅವಲಂಬಿತ ಎಂದರು.

ಜಮಾತ್ ನ ಸ್ಥಾನೀಯ ಅಧ್ಯಕ್ಷರಾದ ಮಹಮ್ಮದ್ ಯೂಸುಫ್ ಕಾಜಿಯವರು ಅಧ್ಯಕ್ಷತೆವಹಿಸಿದ್ದರು.

ವೇದಿಕೆಯ ಮೇಲೆ ಸೊಲಿಡ್ಯಾರಿಟಿ ಯೂಥ್ ಮೂಮೆಂಟನಾ ಅಧ್ಯಕ್ಷರಾದ ಮುದಸ್ಪೀರ್, ಬಾಲಸಿಂಗ್ ಉಪಸ್ಥಿತರಿದ್ದರು. ಇದೇ ವೇಳೆ ಸೊಲಿಡ್ಯಾರಿಟಿ, ದಿನಾಂಕ 18 ಡಿಸೆಂಬರ್ ರಂದು ನಡೆಯುವ ಅಧೀವೇಶನದ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
-ಮುಹಮ್ಮದ ನಾಸೀರ ಇನಮದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ