ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕ ಭೂ ಕಂದಾಯ ನಿಯಮ ತಿದ್ದುಪಡಿ
ಹಕ್ಕುಬದಲಾವಣೆ ಆಕ್ಷೇಪಣಾ ಅವಧಿ 30ದಿನಗಳ ಬದಲಿಗೆ 7 ದಿನಗಳಿಗೆ ಇಳಿಕೆ

ವಿಜಯನಗರ ಜಿಲ್ಲೆ ಕೊಟ್ಟೂರು ನೋಂದಣಿ ದಾಖಲೆಗಳಾದ ಕ್ರಯ,ವಿಭಾಗ,ದಾನ,ಹಕ್ಕು ಮತ್ತು ಬಿಡುಗಡೆ ದಾಖಲೆಗಳ ಆಕ್ಷೇಪಣಾ ಅವಧಿಯು ಈ ಮೊದಲು 30 ದಿನಗಳಿರುವುದನ್ನು 7 ದಿನಗಳಿಗೆ ಹಾಗೂ ನೊಂದಣಿಯಲ್ಲದ ದಾಖಲೆಗಳಾದ ಪೌತಿ, ಮೈನರ್ ಗಾರ್ಡಿಯನ್ ಮತ್ತು ವಿಲ್ ಗಳಿಗೆ ಈ ಮೊದಲು ಇದ್ದ 30 ದಿನಗಳ ಅವಧಿಯನ್ನು 15ದಿನಗಳಿಗೆ ಇಳಿಸಿ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 64(3) ಹಾಗೂ ನಿಯಮ 66 ಗಳಿಗೆ ಸರ್ಕಾರದ ಅಧಿಸೂಚನೆ ಸಂ/ಆರ್.ಡಿ.26/ಎಲ್.ಜಿ.ಪಿ/2022 ದಿನಾಂಕ: 29.09.2022 ರನ್ವಯ ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ದಿನಾಂಕ:13.10.2022 ರಂದು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ಪ್ರಕಟಿಸಿರುತ್ತಾರೆ.

ಸರ್ಕಾರದ ಈ ಆದೇಶದ ಮೇರೆಗೆ ನೊಂದಣಿ ದಾಖಲೆಗಳಿಗೆ (ಕ್ರಯ,ವಿಭಾಗ,ದಾನ,ಹಕ್ಕು ಮತ್ತು ಬಿಡುಗಡೆ)ಆಕ್ಷೇಪಣಾ ಅವಧಿ 30 ದಿನಗಳ ಬದಲಾಗಿ 7 ದಿನಗಳಿಗೆ ಹಾಗೂ ನೊಂದಣಿಯಲ್ಲದ (ಪೌತಿ,ಮೈನರ್ ಗಾರ್ಡಿಯನ್ ಮತ್ತು ವಿಲ್) ದಾಖಲೆಗಳಿಗೆ 30 ದಿನಗಳ ಬದಲಾಗಿ 15 ದಿನಗಳಿಗೆ ಇಳಿಸಿದ್ದು,ಈ ಸೌಲಭ್ಯವನ್ನು ಪಡೆದುಕೊಳ್ಳಲು ತಹಶೀಲ್ದಾರ್, ಕೊಟ್ಟೂರು ಸಾರ್ವಜನಿಕರಿಗೆ ತಿಳಿಸಿದ್ದಾರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ