ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೂವಿನ ಹಾರ,ಶಾಲು ಹಾಕಿ ಸನ್ಮಾನದ ಜೊತೆಗೆ ಪುಸ್ತಕ ನೀಡಬೇಕು- ಬಾಗೇವಾಡಿಮಠ

ರಾಣೇಬೆನ್ನೂರು:ನಮ್ಮ ಉತ್ತರ ಕರ್ನಾಟಕದ ಏಲಕ್ಕಿ ಕಂಪಿನ ನಗರಿ ಎಂದು ಖ್ಯಾತಿ ಹೊಂದಿರುವ ಹಾವೇರಿ. ಜಿಲ್ಲಾ ಕೇಂದ್ರ ಸ್ಥಾನವಾದ ಹಾವೇರಿ ನಗರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಜಿಲ್ಲೆಯ ಜನತೆಯ ಸೌಭಾಗ್ಯ. ಜನವರಿ ತಿಂಗಳ 6, 7, ಹಾಗೂ 8 ರಂದು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಸಾಹಿತಿ, ಕವಿ, ಲೇಖಕರು ಹಾಗೂ ಕಲಾವಿದರಿಗೆ, ಹೂವಿನ ಹಾರ,ಶಾಲು ಮತ್ತು ಹಣ್ಣು ಹಂಪಲು ಕೊಟ್ಟು ಸನ್ಮಾನಿಸುವುದರ ಜೊತೆಗೆ ಪುಸ್ತಕ ನೀಡಬೇಕು. ಇದರಿಂದ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸುವ ಹೊಣೆ ಸಾಮೂಹಿಕ ನಾಯಕತ್ವದ ಮೇಲಿದೆ. ಉಪನ್ಯಾಸಕರಿಗೆ, ಸ್ವಾಗತ, ನಿರೂಪಣೆ ವಂದನಾರ್ಪಣೆ ಚಿಕ್ಕ ಚೊಕ್ಕ ವಾಗಿರಬೇಕು. ಆಮಂತ್ರಿತರು ಗೈರಾದಲ್ಲಿ ಅನಗತ್ಯ ಸ್ವಾಗತ ಬೇಡ. ಒಟ್ಟಾರೆ ಜಿಲ್ಲೆಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬೇರೆ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದು ಸಾಹಿತಿ, ಕವಿ
ಬಸವರಾಜ ಬಾಗೇವಾಡಿಮಠ ಅವರು ಸಲಹೆ ನೀಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ