ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕ್ ೬.೧೬ ಕೋಟಿ ಹಣ ಲೂಟಿ ಬಸವರಾಜ ಅರಣಿ ಆರೋಪ

ಶಹಾಪುರ ನಗರದ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಆಗಿದೆ ಎಂದು ಬಸವರಾಜ ಅರಣಿ ಅವರು ನೇರವಾಗಿ ಆರೋಪ ಮಾಡಿದರು ಇದಕ್ಕೆ ಬ್ಯಾಂಕ್ ಅಧ್ಯಕ್ಷ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕೂಡಿ ೬.೧೬ ಕೋಟಿ ಹಣ ಲೂಟಿ ಮಾಡಿರುತ್ತಾರೆ. ಶಹಾಪುರ ಜೆ.ಎಂ.ಎಪ್.ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಲಾಗಿದೆ (ಸಿ.ಸಿ.ನಂ ೧೬೨/೨೦೨೨).

ಯಾದಗಿರಿ ಸಹಕಾರಿ ಸಂಘದ ಉಪ ನಿಬಂಧಕ ಬೆಂಗಳೂರು ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಜೂನ್ ೨ ರಂದು ದೂರು ಸಲ್ಲಿಸಲಾಗಿದೆ. ವಿಚಾರಣೆ ವರದಿಯಲ್ಲಿ ಬ್ಯಾಂಕನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ೬.೧೬ ಕೋಟಿ ಹಣ ಲೂಟಿ ಮಾಡಲಾಗಿದೆ. ಎಂಬ ವರದಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವೆ. ಎಂದು ಬಸವರಾಜ ಅರಣಿ ಹೇಳಿದರು.

ಕೃಷ್ಣ ಪಟ್ಟಣ ಬ್ಯಾಂಕನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ೧೨ ಜನ ನಿರ್ದೇಶಕರು ಮತ್ತು ಸಿಬ್ಬಂದಿ ಹಾಗೂ ಬ್ಯಾಂಕನ ಮ್ಯಾನೇಜರ್ ಮಾತ್ರ ಅಮಾನತ್ತಿನಲ್ಲಿ ಇದ್ದಾರೆ. ಹಾಗೂ ಬ್ಯಾಂಕನ ೩ ಜನ ಸಿಬ್ಬಂದಿ ಇವರ ವಿರುದ್ಧ ಐ.ಪಿಸಿ. ಸೆಕ್ಷನ್ ೪೨೦,೪೬೩, ೪೬೪,೪೬೮, ಸಹವಾಚಕ ೧೪೯ ಐ.ಪಿಸಿ. ಸೆಕ್ಸನ ಅಡಿಯಲ್ಲಿ ಖಾಸಗಿ ದೂರು ದಾಖಲಿಸಿರುವೆ ಎಂದು ಮಾಹಿತಿ ನೀಡಿದರು.
ಬ್ಯಾಂಕನ ಅಂದಿನ ಸಿಬ್ಬಂದಿ ಹೋತಪೇಠ ಗ್ರಾಮದ ಶರಣಪ್ಪ ಸೊನ್ನದ ಅವರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ೧.೧೩ ಕೋಟಿ ಹಣ ಲೂಟಿ ಮಾಡಿದ್ದಾರೆ. ಅವರ ಕುಟುಂಬದ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದು. ಅಲ್ಲದೆ ಬ್ಯಾಂಕನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಕೆಲ ನಿರ್ದೇಶಕರು ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದೆ ತನಿಖೆ ನಡುಗುವಂತೆ ಯಾದಗಿರಿ ಜಿಲ್ಲಾ ಉಪ ನಿರ್ದೇಶಕರಿಗೆ ದೂರ ಸಲ್ಲಿಸಿದರು. ಬ್ಯಾಂಕನ ಅಧ್ಯಕ್ಷ ಉಪಾಧ್ಯಕ್ಷರ ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ನೇರ ಹೊಣೆಗಾರರು ಎಂದು ಬಸವರಾಜ ಅರುಣೆ ಅವರು ನೇರವಾಗಿ ಆರೋಪ ಮಾಡಿದ್ದು ಬ್ಯಾಂಕಿನ ವ್ಯವಸ್ಥಾಪಕ ಚನ್ನಬಸಪ್ಪ ಬೇನಕಾ ಅವರಿಗೆ ಮಾತ್ರ ನೋಟಿಸ್ ಜಾರಿ ಮಾಡಿದ್ದಾರೆ. ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕನ ಅಧ್ಯಕ್ಷ ಕೂಡಾ ನೋಟಿಸ್ ಜಾರಿ ಮಾಡಿ ಅಧ್ಯಕ್ಷ ಕುರ್ಚಿಯಿಂದ ಕೆಳಗೆ ಇಳಿಸಬೇಕು ಬ್ಯಾಂಕಿನ ನಿಯಮಗಳು ಗಾಳಿಗೆ ತೂರಿ ಒಬ್ಬ ಮಹಿಳೆಗೆ ೩೫ ಲಕ್ಷ ಸಾಲ ಮಂಜೂರು ಮಾಡಿದ್ದು. ಹೀಗೆ ಬ್ಯಾಂಕಿನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಅಲ್ಲದೆ ಅಧ್ಯಕ್ಷ ಮತ್ತು ಬ್ಯಾಂಕಿನ ವ್ಯವಸ್ಥಾಪಕ ಇಬ್ಬರು ಮಾಡಿರುತ್ತಾರೆಂದು. ಮೇಲ್ನೋಟಕ್ಕೆ ಕಂಡು ಬರುತ್ತಿದೆ . ಖಾಸಗಿ ದೂರಿನಲ್ಲಿ ಅವರು ವಿವರಿಸಿದ್ದಾರೆ.
ಆರ್.ಬಿ.ಐ ಬ್ಯಾಂಕಿಗೆ ದೂರು ಸಲ್ಲಿಸಿದ್ದರು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬಸವರಾಜ ಅರಣಿ ಅವರು ಆರೋಪಿಸಿದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ