ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀಅಂಬಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸತತ 5 ದಿನ ಅನ್ನದಾಸೋಹ

ಸಿಂಧನೂರು:- ಜ.05. ತಾಲೂಕಿನ ಗಂಗಾವತಿ ರೋಡ್ ಗೋರೇಬಾಳ ಗ್ರಾಮದಲ್ಲಿ ಶ್ರಿ ಅಂಬಾದೇವಿ ಜಾತ್ರೆಯ ಪಾದಯಾತ್ರೆಗೆ ದಣಿದು ಬರುವ ಭಕ್ತರಿಗೆ ಅನ್ನದಾಸೋಹ ಮಾಡುವುದು ಪವಿತ್ರ ಕೆಲಸವೆಂದು ಗ್ರಾಮದ ಜನಗಳ ನಂಬಿಕೆ ಇಲ್ಲಿ ನಿತ್ಯ ಬೇರೆ ಬೇರೆ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುತ್ತಾರೆ. ಶ್ರೀಅಂಬಾದೇವಿ ಅನ್ನದಾಸೋಹ ಸಮಿತಿ ಗೊರೇಬಾಳ 50 ವರ್ಷಗಳ ಹಿಂದೆ ನಡೆದುಕೊಂಡು ಬಂದಿದೆ.ಬಂದ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಕಲ್ಪಿಸುವ ಅವಕಾಶ ತಮಗೆ ಸಿಕ್ಕ ಭಾಗ್ಯವಾಗಿದೆ. ಈ ಕಾಯಕವನ್ನು ಪ್ರತಿವರ್ಷ ತಪ್ಪದೆ ನಿರ್ವಸಿಕೊಂಡು ಹೋಗುತ್ತೇವೆ ಎಂದು ಗ್ರಾಮದ ಜನರು ಹೇಳುತ್ತಾರೆ. ಅನ್ನ ನೀರಿನ ದಾನ ಮಾಡುವವರಿಗೆ ಸಿರಿ-ಸಂಪತ್ತು,ಪುಣ್ಯ ಲಭಿಸುತ್ತದೆ. ಪಾಪ ನಿವಾರಣೆಯಾಗುತ್ತದೆ ಎಂದು ಗೊರೇಬಾಳ ದಾಸೋಹ ಸಮಿತಿ ಹಿರಿಯ ಮುಖಂಡರಾದ
ರಂಗನಾಥ ನಾಯಕ ಹೇಳಿದರು.ಈ ಸಂದರ್ಭದಲ್ಲಿ ಗಾಲಿ ಜನಾರ್ಧನ್ ರೆಡ್ಡಿ ಆಗಮಿಸಿ ಪೂಜೆ ಸಲ್ಲಿಸಿ ಶ್ರೀ ಅಂಬಾ ದೇವಿಯ ಕೃಪೆ ಗ್ರಾಮದ ಜನತೆಯ ಮೇಲೆ ಇರಲಿ ಎಂದರು ಹಾಗೂ ಗಾಲಿ ಜನಾರ್ಧನ್ ರೆಡ್ಡಿ ಅವರ ಅಭಿಮಾನಿ ಬಳಗ ಮತ್ತು ಗ್ರಾಮದ ಮುಖಂಡರಾದ ಯಮನೂರಪ್ಪ ನಾಯಕ್ ಗ್ರಾಮ ಪಂಚಾಯಿತಿ ಸದಸ್ಯರು ಮಠದ ಪಾಲಾಕ್ಷಯ್ಯ ಸ್ವಾಮಿ, ಅಂಬರೀಶ್ ಗಡ್ಡದ, ಶರಣಪ್ಪ ನಾಯಕ್ ತಳಗೇರಿ, ಓಬಳೇಶ್ ನಾಯಕ್, ಎನ್ ಬಸನಗೌಡ, ಕೆ.ಜೆಪ್ಪಗೌಡ, ಎಂ ಮಲ್ಲನಗೌಡ, ಎಂ ಗಂಗಪ್ಪ, ಶರಣಪ್ಪ ಹರಿಜನ, ಅನೇಕ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತಿಯಲ್ಲಿದ್ದರು.
ವರದಿ: ವೆಂಕಟೇಶ.ಹೆಚ್.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ