ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಕ್ಷರ ಮಾತೇ ನೀ ಅಮ್ಮಾ…!

ಹೆತ್ತವಳೂ ನೀನಲ್ಲ ಹೊತ್ತವಳೂ ನೀನಲ್ಲ
ಹೆತ್ತು ಹೊತ್ತವಳಂತೆಯೂ ಬದುಕಿಗೆ ಸಮೀಪವಾದೆ ನೀ ಅಮ್ಮಾ
ಅಮ್ಮಾ ಎನ್ನುವ ಅಕ್ಷರವ ತಿದ್ದಿ ತೀಡಿ ಬರೆಯಲು ಕಾರಣಳಾದೆ ನೀ ಅಮ್ಮಾ
ನಾನಾಡುವ ಪ್ರತಿ ನುಡಿಗೆ ನಡೆಯನು ನಿತ್ತವಳು ನೀ ಅಮ್ಮಾ
ಅಕ್ಕರೆಯಲಿ ಅಕ್ಷರವ ಕಲಿಸಿ ಸಕ್ಕರೆಯಂತೆ ಸಿಹಿಯಾದವಳು ನೀ ಅಮ್ಮಾ
ಹೊಡೆದು ಬಡಿದು ಕಡೆಗೆ ಹಲ್ಲು ಕಡೆದು ಕಿವಿಯ ಹಿಂಡಿ ಕನ್ನಡ ಕಲಿಸಿದವಳು ನೀ ಅಮ್ಮಾ
ಪಾಟಿಯಲಿ ಅಕ್ಷರವ ತೀಡಿ ತಟ್ಟೆಯಲಿ ಅನ್ನವ ನೀಡಿ ಆಟಗಳಲ್ಲೇ ಪಾಠ ಹೇಳಿದ ಗುರುಮಾತೇ ನೀ ಅಮ್ಮಾ
ನೀವ್ ಕಲಿಸಿದ ಅಕ್ಷರ ಮೆರೆಯುತಿವೆ ಜಗದಲಿ ಮುಗಿಲೆತ್ತರಕೆ ಕಾರಣ ನೀ ಅಮ್ಮಾ
ಭೋಧನಾ ಸೇವೆಗೆ ಸಾಧನೆ ನಿಮ್ಮದಾಗಿದೆ ಸಹನೆಯ ಸಂಪತ್ತು ನೀ ಅಮ್ಮಾ
ಮುಗಿದಿಲ್ಲ ಸಮಾಜಸೇವೆ ಇನ್ನೂ ಸಾಗಲಿ ನಿಮ್ಮ ಅಕ್ಷರದಾವೆ
ಬದುಕಿಗೆ ಬೆಳಕಾಗಿ ಅಕ್ಷರದ ದೀಪ ಹಚ್ಚಿದ ಅಕ್ಷರದವ್ವ ನೀ ಅಮ್ಮಾ
ಅಕ್ಕರೆಯ ನೀ ಅಮ್ಮಾ ಸಕ್ಕರೆಯ ಸಿಹಿ ನೀ ಅಮ್ಮಾ…!!

  • ಎಚ್.ಡಿ.ಹೊಗರನಾಳ
    9945246234
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ