ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿ:ವಕೀಲರಾದ ಕು.ಪೂರ್ಣಿಮಾ ಅಭಿಮತ

ಚಾಮರಾಜನಗರ/ಹನೂರು:ಗ್ರಾಮಗಳಲ್ಲಿ ವಾಸಿಸುವ ಜನರು ಹೆಚ್ಚು ಆರೋಗ್ಯವಂತಾರಾಗಿರುತ್ತಾರೆ ಆದರೂ ಕೆಲವರು ಅನಾರೋಗ್ಯದಿಂದ ಬಳಲುತ್ತಿರುವುದನ್ನು ಗಮನಿಸಿ ನನ್ನ ಕೈಲಾದ ಸಣ್ಣ ಸಹಾಯ ಮಾಡಲು ತಜ್ಞ ವೈದ್ಯಕೀಯ ಸಿಬ್ಬಂದಿಗಳಿಂದ ತಪಾಸಣಾ ವ್ಯವಸ್ಥೆಯನ್ನು ಮಾಡಲಾಗಿದೆ ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು
ಕುಮಾರಿ ಪೂರ್ಣಿಮಾ ತಿಳಿಸಿದರು
ಹನೂರು ಸಮೀಪದ ಬಂಡಳ್ಳಿ ಗ್ರಾಮದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ಶಿಭಿರದಲ್ಲಿ ಮಾತನಾಡಿದ ಅವರು ಈಗಾಗಲೇ ನಾನು ಎರಡು ಮೂರು ವರ್ಷಗಳಿಂದ ಸಾಮಾಜಿಕ ಕೆಲಸ ಮಾಡ್ತಿದ್ದಿನಿ ಶಾಲಾ ಮಕ್ಕಳುಗಳಿಗೆ ಟ್ಯಾಬ್‌ ನೀಡಿದ್ದೆನಿ, ಪುಸ್ತಕಗಳನ್ನು ಚಾಮರಾಜನಗರ ಜಿಲ್ಲೆಯ ಎಲ್ಲಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದೂಳಿದಿದೆ ಎಂದು ಹೆಳ್ತಾರೆ ಅದು ತಪ್ಪು ಜ್ಞಾನವಿರುವವರು ಸುಖಿಯಾಗಿರುತ್ತಾರೆ ಸ್ವಲ್ಪ ಜ್ಞಾನ ಕಡಿಮೆ ಇರುವವರು ಸುಖಿ ಜೀವನ ನಡೆಸಲು ಕಷ್ಟವಾಗುತ್ತದೆ ಹಾಗೂ ಈ ಭಾಗದಲ್ಲಿ ಬರುಗೂರು ತಳಿಯ ಹಸುಗಳಿಂದ ತಯಾರಾದ ತುಪ್ಪದಿಂದ ದೀರ್ಘಾಯುಷ್ಯ ಸಿಗುತ್ತದೆ ಅಲ್ಲದೆ ಇದು ನನ್ನ ತವರು ಜಿಲ್ಲೆ ಎಲ್ಲರೂ ನನ್ನವರು ಸೌಲಭ್ಯಗಳನ್ನು ವಂಚಿತರಾಗಿರುವ ಜನರಿಗೆ ಸಹಕಾರ ನೀಡಬೇಕು ಎಂಬುದೆ ನನ್ನ ಉದ್ದೇಶ ಬೆಂಗಳೂರು ಪಟ್ಟಣದಲ್ಲಿರುವ ಟಿ ವಿ ಪಾಠಗಳನ್ನು ಹಳ್ಳಿಗಳ ಶಾಲೆಗಳಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿ
ಬಂಡಳ್ಳಿಯ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಮಾಡುತ್ತಿರುವುದರಿಂದ ಬಡ ಜನರಿಗೆ ಉಪಯೋಗವಾಗವಂತೆ ಮಾಡಲಾಗುವುದು ಇಂತಹ ಪ್ರಯತ್ನದಿಂದ ಪ್ರತಿಯೊಬ್ಬರಿಗೂ ಉಪಯೋಗ ಮಾಡಿಕೊಳ್ಳಿ ನಿಮಗೆ ಯಾವುದೇ ರೀತಿಯ ಗಂಭೀರವಾದ ಸಮಸ್ಯೆಗಳಿದ್ದರೆ ನಾನು ಸಹಾಯ ಮಾಡಲು ಉತ್ಸುಕನಾಗಿದ್ದೆನೆ,
ನಾನು ತಿಳಿದುಕೊಂಡಂತೆ ಈ ಶಾಲೆಗಳಲ್ಲಿ ಹೆಚ್ಚಾಗಿ ಚುರುಕು ಮತ್ತು ವಿದ್ಯಾವಂತ ಮಕ್ಕಳು ಸಿಗುತ್ತಾರೆ, ನಾನು ಮಾಡುವ ಕೆಲಸದಲ್ಲಿ ನನಗೆ ಹತ್ತು ಪರ್ಶೆಂಟ್ ಉತ್ತಮ ಕೆಲಸವಾದರೆ ಸಾಕು ನಾನೇ ಧನ್ಯ ಎಂದರು ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ
ಜಾವೇದ್ ಅಹಮದ್ ರವರು ಮಾತನಾಡಿ ಜನರು ಆರೋಗ್ಯವನ್ನು ಕಾಪಾಡಿಕೊಂಡರೆ ಎಲ್ಲವನ್ನು ಗಳಿಸಬಹುದು ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮವಾದ ಕೆಲಸ ಪೂರ್ಣಿಮಾರವರು ಕಳೆದ ಎರಡು ತಿಂಗಳಿಂದ ಎಲ್ಲಾವನ್ನು ಸರಿದೂಗಿಸಿ ಸಮಯ ನಿಗದಿ ಮಾಡಿದ್ದಾರೆ ನಮ್ಮ ಭಾಗದಲ್ಲಿ ಬಡ ಜನರಿಗೆ ಸೇವೆ ನೀಡಲಿ, ಬೆಂಗಳೂರು ನಿವಾಸಿಗಳು ಥಾರ್ ರೋಡ್ ನಲ್ಲಿ ತಿರುಗಾಡುವವರು ಇಲ್ಲಿಗೆ ಬಂದರೆ ಅವರಿಗೆ ಕಾಣುವುದೆ ಅದಗೆಟ್ಟ ರಸ್ತೆ ಆದರೆ ಇದು ಹಳ್ಳಿ ಅವರು ಸಹ ಹಳ್ಳಿಯ ನಿವಾಸಿಗಳಾಗಿ ಜೀವನ ನಡೆಸಿದರೆ ಎಲ್ಲಾವು ಅರ್ಥವಾಗುತ್ತದೆ ಇಂತಹ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಶುಭವಾಗಲಿ ಎಂದು ತಿಳಿಸಿದರು.
ಮುಖಂಡರಾದ ಬಿ ಎಸ್ ಶಂಕರಪ್ಪ ,ಬಂಡಳ್ಳಿ ಮಠದ ಫಲಹಾರ ಪ್ರಭುದೇವ ಸ್ವಾಮೀಜಿ ಹಾಗೂ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ