ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಭೂಸನೂರ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಖಾನಾಪುರ ವಸತಿ ಹಾಗೂ ಕರವಿನಾಳ ತಾಂಡಾ ಢವಳಾರ ಗ್ರಾಮದಲ್ಲಿ ಲೋಕಪಯೋಗಿ ಇಲಾಖೆ ಉಪ ವಿಭಾಗ ಸಿಂದಗಿ 2022-23ನೇ ಸಾಲಿನ 5054- ಅಪೆಂಡಿಕ್ಸ್-ಇ-ಯೋಜನೆ ಅಡಿಯಲ್ಲಿ ತಾಲೂಕಿನ ಕರವಿನಾಳ ತಾಂಡಾ-ವಂದಾಲ ಮುಖ್ಯ ರಸ್ತೆಯಿಂದ ಖಾನಾಪುರ ವಸತಿ ವರಿಗೆ ಡಾಂಬರೀಕರಣ ಹಾಗೂ ಸಿ ಸಿ ರಸ್ತೆ ನಿರ್ಮಾಣಕ್ಕೆ (ಅಂದಾಜು ಮೊತ್ತ 200.00 ಲಕ್ಷ ರೂ.) ಹಾಗೂ ಕರವಿನಾಳ ತಾಂಡಾದಲ್ಲಿ (ಡಾಂಬರೀಕರಣ ರಸ್ತೆಗೆ ಅಂದಾಜು ಮೊತ್ತ 650.00 ಲಕ್ಷ ರೂ) ಢವಳಾರ ಗ್ರಾಮದ ರಸ್ತೆಗೆ ಅಂದಾಜು ಮೊತ್ತ 150.00 ಲಕ್ಷ ರೂ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ರಮೇಶ್ ಭೂಸನೂರ ಕಳೆದ ಉಪಚುನಾವಣೆಯಲ್ಲಿ ನಿಮ್ಮ ಗ್ರಾಮಕ್ಕೆ ನಾನು ಬಂದಾಗ ನಿಮಗೆ ನಾನು ಮಾತು ಕೊಟ್ಟಿದ್ದೆ ನಿಮ್ಮ ಮತ ನನಗೆ ಕೊಡಿ ನಾನು ನಿಮಗೆ ರಸ್ತೆ ಮಾಡಿ ಕೊಡ್ತೀನಿ ಎಂದು ಹೇಳಿದ್ದೆ ನನಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದಲ್ಲಿ ಇನ್ನು ಹಲವಾರು ಯೋಜನೆಗಳು ನಿಮ್ಮ ಗ್ರಾಮಕ್ಕೆ ನಾನು ತರುತ್ತೇನೆ ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂತೋಷ್ ಡಂಬಳ ಪ್ರಭುಗೌಡ ಪಾಟೀಲ್ ಸಿದ್ದು ಬುಳ್ಳಾ ಮಡಿವಾಳಪ್ಪಗೌಡ ಬಿರಾದಾರ ಮಲ್ಲಿಕಾರ್ಜುನ್ ಸಾವಳಸಂಗ ದಾವಲಸಾಬ ಮೇಲಿನಮನಿ ಸೈಪನಸಾಬ್ ಕೋರವಾರ ಸಲೀಂ ಬಾಗವಾನ ದಿವೇಂದ್ರಪ್ಪ ತನುಷಾಳ ಕತಲ್ಪೀರ್ ಮೇಲಿನಮನಿ
ಸುನಿಲಗೌಡ ಪಾಟೀಲ ಗೋವಿಂದ ರಾಥೋಡ ಶಿವಣ್ಣ ಮಾರಲಬಾವಿ
ಇಮ್ಮಾಮಸಾಬ ದೊಡಮನಿ ನಬಿಸಾಬ ಮೇಲಿನಮನಿ ಲಾಳೇಸಾಬ ಹಿಪ್ಪರಗಿ ಡಾ‌ ಅನಿಲ ನಾಯ್ಕ್ ತಾರಾನಾಥ ರಾಥೋಡ್ ಹಲವಾರು ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ-ಖಾದರಬಾಷ ಮೇಲಿನಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ