ಹನೂರು :ತಾಲ್ಲೂಕಿನ ಸೂಳೆರೀಪಾಳ್ಯ ಗ್ರಾ.ಪಂ. ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವನ್ನಿಕುಲ ಕ್ಷತ್ರಿಯ ಪ್ರೀಮಿಯರ್ ಲೀಗ್ ಪಂದ್ಯಾವಳಿ ಹನೂರು ವಿಧಾನಸಭಾ ಜೆ ಡಿ ಎಸ್ ಅಭ್ಯರ್ಥಿ ಎಂ. ಆರ್.ಮಂಜುನಾಥ್ ಚಾಲನೆ ನೀಡಿ
ನಂತರ ಮಾತನಾಡಿದ ಅವರು ಕ್ರೀಡೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಅನುಕೂಲವಾಗಲಿದೆ.
ಕ್ರೀಡಾ ಪಂದ್ಯಾವಳಿಗಳನ್ನು ಆಯೋಜನೆ ಮಾಡಿರುವುದು ಯುವಕರಿಗೆ ಕ್ರೀಡಾ ಪ್ರೋತ್ಸಾಹವನ್ನು ನೀಡಿ ಪ್ರೋತ್ಸಾಹಿಸಿ ಬೆಳೆಯಲು ಸಹಕಾರಿಯಾಗುತ್ತದೆ. ಯುವಕರ ಕ್ರೀಡಾ ಚಟುವಟಿಕೆಗಳು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಬೆಳೆಯಬೇಕು ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವಕರು ನನಗೆ ಇಂದು ಅವಕಾಶ ನೀಡಿ ನಾನು ಯುವಕರಿಗೆ ಅಕಾಡೆಮಿ ಮಾಡುವ ಕನಸಿದೆ.ರಾಜ್ಯ, ರಾಷ್ಟ ಮಟ್ಟದಲ್ಲಿ ಗುರುತಿಸಿ ಕೊಳ್ಳುವ ನಿಟ್ಟಿನಲ್ಲಿ ಕ್ರೀಡಾ ಅಕಾಡೆಮಿಯನ್ನು ಪ್ರಾರಂಭ ಮಾಡುವ ಉದ್ದೇಶವಿದೆ,ಛಲವಿದೆ.
ಇದೇ ವೇಳೆ ವನ್ನಿಕುಲ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷರಾದ ನಂದಕುಮಾರ್ ಮಾತನಾಡಿ ನಮ್ಮ ಜನಾಂಗದ ಯುವಕರು ಹನೂರು ಮಾತ್ರವಲ್ಲದೆ, ಚಾಮರಾಜನಗರ,ಮೈಸೂರು,ಬೆಂಗಳೂರು ಹಾಗೂ ರಾಜ್ಯ ಮಟ್ಟ,ರಾಷ್ಟ್ರ ಮಟ್ಟದವರೆಗೂ ಭಾಗವಹಿಸಿ ಗುರುತಿಸಿಕೊಳ್ಳಬೇಕು, ಕ್ರಿಕೆಟ್ ಜೊತೆಗೆ, ವಾಲಿಬಾಲ್, ತ್ರೋಬಲ್, ಪುಟ್ಬಾಲ್ ಗಳಲ್ಲೂ ಭಾಗವಹಿಸಿ ಜಯ ಗಳಿಸಬೇಕು.
ಇದರಿಂದ ಯುವಕರ ಭವಿಷ್ಯ ರೂಪಿಸುವ ಕೆಲಸವಾಗಬೇಕು ಕ್ರೀಡೆಯನ್ನು ಉತ್ತೇಜನ ಪ್ರೋತ್ಸಾಹ ನೀಡುವ ಮೂಲಕ ಯುವಕರ ಉತ್ತಮ ಭವಿಷ್ಯ ಮುಂದಿನ ಯುವ ಪೀಳಿಗೆಯ ಮಕ್ಕಳಿಗೆ ಮಾದರಿಯಬಹದು ಎಂದ ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಕರುನಾಡ ವನ್ನಿಕುಲ ಕ್ಷತ್ರಿಯ ಮಹಾಸಭಾ ರಾಜ್ಯ ಉಪಾಧ್ಯಕ್ಷ ಚಿನ್ನ ಕೃಷ್ಣ,ಗೌರವಧ್ಯಕ್ಷರು ಮೈಸೂರಿನ ರವಿಕುಮಾರ್, ಪಿ ಜಿ ಮಣಿ ಚಾ.ನಗರ ವನ್ನಿಕುಲ ಜಿಲ್ಲಾಧ್ಯಕ್ಷರು, ರವಿಕುಮಾರ್ ವನ್ನಿಕುಲ ಮಹಾಸಭಾ ಸಹ ಕಾರ್ಯದರ್ಶಿ ಶಿವಮೊಗ್ಗ, ಮನೋಹರ್,ಈಶ್ವರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ನಟರಾಜು, ಈ ಟಿ ಎಂ ಮಹದೇವ್, ಜಡೇಸ್ವಾಮಿ,ನಾರಾಯಣ, ಕೃಷ್ಣೆಗೌಡ ಹಾಗೂ ವನ್ನಿಕುಲ ಕ್ಷತ್ರಿಯ ಮುಖಂಡರು ಹಾಗೂ ಆಯೋಜಕರು
ಶ್ರೀನಿವಾಸ್, ಪ್ರವೀಣ್,ಗೋವಿಂದ ರಾಜು ಹಾಗೂ ವಿವಿಧ ತಂಡದ ಕ್ರೀಡಾಪಟುಗಳು, ಗ್ರಾಮಸ್ಥರು ಭಾಗವಹಿಸಿದ್ದರು. ವರದಿ ಉಸ್ಮಾನ್ ಖಾನ್