ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆತ್ಮ ರಕ್ಷಣೆಗೆ ಕರಾಟೆ ಅವಶ್ಯಕ:ಜಟ್ಟೆಪ್ಪ ಪೂಜಾರಿ


ಜೇವರ್ಗಿ : ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ(ರಿ) ಯಲ್ಲಿ ಇಂದು ಜೇವರ್ಗಿ ತಾಲ್ಲೂಕು ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಜಟ್ಟೆಪ್ಪ ಪೂಜಾರಿ ಅವರು ಹಾಗೂ ತಂಡದ ವತಿಯಿಂದ ಇಂದು ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿವಿಧ ಭಂಗಿಗಳ ಮೂಲಕ ಕರಾಟೆಯಿಂದ ಆತ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂದು ಅದ್ಭುತವಾಗಿ ಮಕ್ಕಳ ಮುಂದೆ ತಮ್ಮ ಕಲೆಯನ್ನು ಪ್ರದರ್ಶಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಎಸ್ ಪಾಟೀಲ್ ರವರು ಸಂಸ್ಥೆಯ ವತಿಯಿಂದ ಕರಾಟೆಯ ತಾಲ್ಲೂಕ ಅಧ್ಯಕ್ಷರಾದ ಜಟ್ಟೆಪ್ಪ ಪೂಜಾರಿ ಹಾಗೂ ತಂಡದವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು ಹಾಗೂ ಪ್ರತಿ ತಿಂಗಳು 3-4 ಬಾರಿ ಆಗಮಿಸಿ ಮಕ್ಕಳಿಗೆ ಇನ್ನೂ ಇದರ ಅರಿವು ಮೂಡಿಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲೆಯ ಸಹ-ಶಿಕ್ಷಕರಾದ ದೊಡಪ್ಪ ಕೋಣಿನ್,ಪ್ರತಾಪ್ ಪವರ್,ಸಾಹೇಬಗೌಡ ಮುರಡಿ,ಸಮೀರಪಟೇಲ್,ಶೀಮತಿ ಭುವನೇಶ್ವರಿ,ಸಿದ್ದಮ್ಮ,ಲಕ್ಷ್ಮೀ,ರಾಜಮ್ಮ,ದೀಪಾ,ಮಂಜುಳಾ,ನೂರಜಾಬೇಗಂ ಹಾಗೂ ವಿದ್ಯಾರ್ಥಿ ಬಳಗದವರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ