ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಜೃಂಭಣೆಯ ಕೊಲ್ಯದ ಆಯನ

ಕೊಲ್ಯ , ಚೇಳಾೖರು , ಮಂಗಳೂರು , ಜನವರಿ 16: ಕೊಲ್ಯ ಶ್ರೀ ಜಾರಂದಾಯ ಧೂಮಾವತಿ ಪರಿವಾರ ದೈವಗಳ ವಾರ್ಷಿಕ ಜಾತ್ರೆಯು ವಿಜೃಂಭಣೆಯಿಂದ ಜರುಗುತ್ತಿದೆ. ದಿನಾಂಕ 14 ರಂದು ವಿದ್ಯುಕ್ತವಾಗಿ ಧ್ವಜಾರೋಹಣ ಗೊಂಡು ಮೊನ್ನೆ ದಿನಾಂಕ 15 ರಂದು ಜಾರಂದಾಯ ಬಂಟ, ಧೂಮಾವತಿ ಬಂಟ ಹಾಗೂ ಮಹಿಸಂದಾಯ ದೈವಗಳ ಮಾಣಿಚ್ಚಿಡಿ , ಕೋಲದಿಚ್ಚಿಡಿ , ಬಂಡಿ ಸವಾರಿ , ಬಂಡಿದ ಬಲಿನೇಮ ಜರುಗಿ ದೈವಗಳು ಸಮಸ್ತ ಭಕ್ತರಿಗೆ ಅಭಯವನ್ನಿತ್ತವು. ಊರ ಪರಊರ ಸಹಸ್ರಾರು ಭಕ್ತಾಭಿಮಾನಿಗಳು ದೈವಸ್ಥಾನಕ್ಕೆ ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು. ನಿನ್ನೆ ದಿನಾಂಕ 16 ರಂದು ಸಂಜೆ ಬೆಟ್ಟು ಗದ್ದೆಯಲ್ಲಿ ಚೆಂಡು ಆಟ ಜರುಗಿ ನಂತರ ಮಯಂದಾಲೆ ನೇಮ ಜರುಗಲಿದೆ. ನಂತರ ಶ್ರೀ ಜಾರಂದಾಯ ಧೂಮಾವತಿ ಮಾಣಿಚ್ಚಿಡಿ ಯಲ್ಲಿ ಧ್ವಜಾವರೋಹಣಗೊಂಡು ಪೂರ್ವಜರ ಕಟ್ಟಳೆಯಂತೆ; ಕಾರಣಾಂತರದಿಂದ ಸ್ಥಗಿತಗೊಂಡಿರುವ ಜಾರಂದಾಯ ಧೂಮಾವತಿ ದೈವಗಳ ಇಷ್ಟದ ಅಧಿಕಾರಿ ಚಾವಡಿಯಲ್ಲಿ “ಕೊಂಡೆ ಪೆರ್ ” ಕುಡಿದು “ಅಧಿಕಾರಿ ಚಾವಡಿ” ಯಲ್ಲಿ “ಅನ್ನ ಸಂತರ್ಪಣೆ ” ನಂತರ “ಚಾವಡಿ ನೇಮ” ಸ್ವೀಕರಿಸಿ ಸಮಸ್ತ ಸೇವಕ ವರ್ಗಕ್ಕೆ ಅಭಯಕೊಟ್ಟು ದೈವಸ್ಥಾನಕ್ಕೆ ನಿರ್ಗಮಿಸುವುದು ಪೂರ್ವಜರ ಕಟ್ಟು, ಅದೇ ಪೂರ್ವಜರ ಕಟ್ಟಿನಂತೆ ಮತ್ತೆ “ಕೊಲ್ಯದ ಆಯನ” ವೈಭವಯುತವಾಗಿ ಜರುಗಬೇಕೆಂಬುದು ಸಮಸ್ತ ಭಕ್ತರ ಆಶಯ. ಶ್ರೀ ದೈವಗಳು ಮುಂದಿನವರ್ಷಗಳಲ್ಲಿ ಈ ಪೂರ್ವಜರ ಕಟ್ಟಳೆಯನ್ನು ನೆರವೇರಿಸಿಕೊಡಬೇಕಾಗಿ ಸಮಸ್ತ ಭಕ್ತರ ಭಕ್ತಿಪೂರ್ವಕ ಪ್ರಾರ್ಥನೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ