ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಾನಪದ ರತ್ನ ಹಟ್ಟಿಯ ಬುರ್ರಕಥಾ ಕಮಲಮ್ಮ ಅವರಿಂದ ಶಾಸಕರಿಗೆ ಮನವಿ ಪತ್ರ

ಲಿಂಗಸೂಗೂರು ತಾಲೂಕಿನ ಶಾಸಕರಾದ ಶ್ರೀ ಡಿ.ಸ್ ಹೂಲಗೇರಿಯವರ ಕಛೇರಿಗೆ ತೆರಳಿ ಭೇಟಿ ಮಾಡುವ ಮೂಲಕ ಅಲೆಮಾರಿ ಸಮುದಾಯದ ಹೆಮ್ಮೆ, ಜಾನಪದ ರತ್ನ ಹಟ್ಟಿಯ ಬುರ್ರಕಥಾ ಕಮಲಮ್ಮ ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು,ಇವರಿಗೆ ವಸತಿ ಸಮಸ್ಯೆಯಾಗಿದ್ದು ಗುಡಿಸಲಿನಲ್ಲಿ ವಾಸವಾಗಿದ್ದಾರೆ ಸ್ವಂತ ಜಾಗವಿದೆ ಅಲ್ಲಿ ಅವರಿಗೆ ಮನೆ ಕಟ್ಟಿಸಿಕೊಡಬೇಕೆಂದು ಹೋರಾಟಗಾರ, ಅಲೆಮಾರಿ ಜನಾಂಗದ ಸಿಳ್ಳೇಕ್ಯಾತರ ರಾಜ್ಯಾಧ್ಯಕ್ಷ ಶ್ರೀ ಸುಭಾಸ್.ವಾಯ್. ಚವ್ಹಾಣ ಮತ್ತು ಚೆನ್ನದಾಸರ ಸಮುದಾಯದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀವಿಜಯದಾಸ ನವಲಿ ಅವರು ಕಮಲಮ್ಮ ಅವರ ಜೊತೆಗೂಡಿ ಶಾಸಕರಿಗೆ ಮನವಿ ಮಾಡಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದು ಶೀಘ್ರವಾಗಿ ಮನೆ ಒದಗಿಸಿಕೊಡಲಾಗುವುದು. ಅದರ ಜೊತೆಗೆ ಕಮಲಮ್ಮ ಅವರ ಬೇಡಿಕೆಗನುಗುಣವಾಗಿ ಸಹಾಯ ಕೂಡ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶೇಖರ್ ಹಟ್ಟಿ,ಶಿವರಾಜ್ ಮೋತಿ ಹಾಗೂ ಮುಂತಾದವರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ