ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳಿಗೆ ಶಾಸಕ ಆರ್ ನರೇಂದ್ರ ರವರಿಂದ ಗುದ್ದಲಿ ಪೂಜೆ

ಹನೂರು :ವಿಧಾನ ಸಭಾ ಕ್ಷೇತ್ರವು ವ್ಯಾಪ್ತಿಯಲ್ಲಿ ದೊಡ್ಡದಾಗಿದ್ದು ಈಗಿನ‌ ಸರ್ಕಾರ ನೀಡುತ್ತಿರುವ ಅನುದಾನವು ಸಾಲುತ್ತಿಲ್ಲ ನಮ್ಮ ಕ್ಷೇತ್ರವು ಸುಮಾರು 175 ಕಿಲೋಮೀಟರ್ ವ್ಯಾಪ್ತಿಯಿದ್ದು ನಾನು ಇಲ್ಲಿಯತನಕ ಮಾಡಿರುವ ಕಾಮಗಾರಿಗಳು ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಮಂಜೂರಾದ ಕಾಮಗಾರಿಗಳು ಹಾಗಾಗಿ ಬಿ ಜೆ ಪಿ ಸರ್ಕಾರವು ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನವನ್ನು ನೀಡಿಲ್ಲ ಎಂದು ಶಾಸಕರಾದ ಆರ್.ನರೇಂದ್ರ ತಿಳಿಸಿದರು .
ಕ್ಷೇತ್ರ ವ್ಯಾಪ್ತಿಯ ಲೊಕ್ಕನಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಸಿಸಿರಸ್ತೆ ಗುದ್ದಲಿ ಪೂಜಾ ಮತ್ತು ಸಮುದಾಯ ಭವನಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ದಿನ ವಾಲ್ಮೀಕಿ ಸಮುದಾಯ ಭವನವು 1,25,00,000 ,ಲಕ್ಷ ,ಉದ್ದಟ್ಟಿ ಸಮುದಾಯ ಭವನ 5000000. ಹಾಗೂ ಸಿಸಿ ರಸ್ತೆಗಳಾದ ಲೊಕ್ಕನಳ್ಳಿ 1500000. ಜೀರಿಗೆಗದ್ದೆ 1000000.ಮಾವುತ್ತುರು ,1000000.ಉದ್ದಟ್ಟಿ,1000000.ಹಿರಿಯಂಬಲ ಎರಡು ರಸ್ತೆ 2000000, ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲಾಯಿತು .ಇವೆಲ್ಲದಕ್ಕೂ ಆರ್ ಡಿ ಪಿ ಆರ್ ಇಲಾಖೆ ವತಿಯಿಂದ ಸುಮಾರು ಇಪ್ಪತೈದು ಕೋಟಿ ಹಣ ಬಿಡುಗಡೆ ಮಾಡಿಸಿದ್ದು ಅದರಲ್ಲಿ ಎಲ್ಲಾ ಜನಾಂಗದ ಸಿಸಿರಸ್ತೆಗೆ ಹತ್ತುಕೋಟಿ ಹಣ ನೀಡಿದ್ದು ಇನ್ನುಳಿದ ಹದಿನೈದು ಕೋಟಿಹಣವನ್ನು ಮುಖ್ಯ ರಸ್ತೆಗಳಿಗೆ ವಿನಿಯೋಗಿಸಲಾಗಿದೆ ,ಸಾರ್ವಜನಿಕರ ಒತ್ತಾಸೆಯಂತೆ ಬಂಡಳ್ಲಿ ಮತ್ತು ತೆಳ್ಳನೂರು ಮುಖ ರಸ್ತೆ ,ಮಾರ್ಟಳ್ಳಿಯಲ್ಲಿ ನಾಲ್ಕುವರೆ ಕಿಲೋಮೀಟರ್ ರಸ್ತೆ ,ಭದ್ರಯನಹಳ್ಳಿಯಲ್ಲಿ ಒಂದುವರೆ ಕಿಲೋಮೀಟರ್ ,ಹಾಗೂ ಕೆ ವಿ ಎನ್ ದೊಡ್ಡಿ ಮತ್ತು ವೈಶಂಪಾಳ್ಯದಲ್ಲಿ ಮೆಲ್ಸೇತುವೆ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು .
ಇದೇ ಸಮಯದಲ್ಲಿ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಬಸವರಾಜು,ಮುಖಂಡರುಗಳಾದ ಚೇತನ್ ದೊರೈರಾಜು , ಜಗದೀಶ್ ,ಸತೀಸ್ ಕುಮಾರ್ ,ಅಂಕರಾಜು ,ಚಂದ್ರಪ್ಪ,ಮಾದೆವು ,ವಿನಯ್ ,ಕೆಂಪರಾಜು , ಹಾಗೂ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು .
ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ