ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೋವಿಡ್ ಸಂಧರ್ಭದಲ್ಲಿ ಮಾಡಿಕೊಂಡಿದ್ದ ಹರಕೆ ತೀರಿಸಲೆಂದೇ ಪಾದಯಾತ್ರೆ ಹೊರಟ ಶಾಸಕ.ಡಾಕ್ಟರ್.ಕೆ. ಅನ್ನದಾನಿ

ಹನೂರು :ಪ್ರಪಂಚವೇ ಕೋವಿಡ್ 19 ಸಂದರ್ಭದಲ್ಲಿ ಸಾಂಕ್ರಮಿಕ ರೋಗದಲ್ಲಿ ತತ್ತರಿಸಿದಾಗ ಅದರ
ನಿಯಂತ್ರಣಕ್ಕಾಗಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಶ್ರೀಮಹದೇಶ್ವರ ದೇವರಲ್ಲಿ ಹರಕೆಯನ್ನು ಕಟ್ಟಿಕೊಂಡಿದ್ದೆ ಅದರ ಹರಕೆ ತೀರಿಸುವ ಸಲುವಾಗಿ ಮಳವಳ್ಳಿ ಕ್ಷೇತ್ರದ ಜನತೆಯ ಜೊತೆಯಲ್ಲಿ ಪಾದಯಾತ್ರೆ ಹೊರಟ್ಟಿದ್ದೇವೆ ಎಂದು
ಮಳವಳ್ಳಿ ಕ್ಷೇತ್ರದ ಶಾಸಕ ಡಾ‌.ಕೆ.ಅನ್ನದಾನಿ ತಿಳಿಸಿದರು ಹನೂರು ಪಟ್ಟಣದ ಜೆ ಡಿ ಎಸ್ ಕಚೇರಿಯ ಹತ್ತಿರ ಆತ್ಮೀಯವಾಗಿ ಬರಮಾಡಿಕೊಂಡ ರಾಜ್ಯ ಉಪಾಧ್ಯಕ್ಷರಾದ ಎಮ್ ಆರ್ ಮಂಜುನಾಥ್ ರ ಸಹಯೋಗದಲ್ಲಿ ಪತ್ರಿಕೆಯವರೊಡನೆ ಮಾತನಾಡಿದ ಅವರು
ಹರಕೆ ತೀರಿಸಲೆಂದು ಮಳವಳ್ಳಿಯಿಂದ ಮಲೆ ಮಹದೇಶ್ವರ
ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮೂಲಕ ಮಾದಪ್ಪನ ಸನ್ನಿಧಿಗೆ ಸುಮಾರು 103
ಕಿ.ಮೀ ದೂರವಿದ್ದು ಈಗಾಗಲೇ ಅರ್ಧಭಾಗ ಚಲಿಸಿದ್ದು,
ಪಾದಯಾತ್ರೆಯು ಇನ್ನೂ ಮುಂದುವರಿಯುತ್ತದೆ ಅದೆ ರೀತಿಯಲ್ಲಿ ಮಂದಿನ ದಿನಗಳಲ್ಲಿ ಹನೂರು ಕ್ಷೇತ್ರದ ಜನತೆಗೆ ಕಷ್ಟಕಾಲದಲ್ಲೂ ಸಹ ಜೊತೆಯಲ್ಲಿದ್ದ ಮಂಜುನಾಥ್ ರವರು ಮುಂದಿನ ಭಾರಿಗೆ ಶಾಸಕರಾಗಲಿ ಹಾಗೂ ಕುಮಾರಣ್ಣ ಮುಖ್ಯಮಂತ್ರಿಯಾದರೆ ಮತ್ತೆ ಮುಂದಿನ ಬಾರಿಗೂ ಸಹ ಮಾದಪ್ಪನ ಸನ್ನಿಧಿಗೆ ಆಗಮಿಸಿ ಹರಕೆ ತೀರಿಸಲಾಗುತ್ತದೆ ನನ್ನ ಕ್ಷೇತ್ರ ಮತ್ತು ಮಂಜಣ್ಣನವರ ಕ್ಷೇತ್ರವು ಹೊಂದಿಕೊಂಡಿರುವುದರಿಂದ ಎರಡು ಕಡೆಯು ನಮ್ಮ ಪಕ್ಷದ ನಾವುಗಳೆ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಹರಕೆ ತೀರಿಸಲು ಮಳವಳ್ಳಿಯಿಂದ ಹನೂರು ಮಾರ್ಗವಾಗಿ ಮಲೆ
ಮಾದೇಶ್ವರ ಬೆಟ್ಟಕ್ಕೆ ಪಾದಯತ್ರೆ ಮಾಡುತ್ತಿರುವ ಶಾಸಕರಾದ ಅನ್ನದಾನಿಯವರು ಪಕ್ಷವನ್ನು ತಾಯಿ ಸಮಾನವಾಗಿ ನೋಡುತ್ತಾರೆ ಅಲ್ಲದೆ ಅವರ ದೇವರ ಭಕ್ತಿಗೆ ನನ್ನ ನಮನ ಎಂದು ಅವರ ಕನಸು ನನಸಾಗಲಿ ಎಂದು ಹನೂರು ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿಯಾದ ಎಮ್ ಆರ್ ಮಂಜುನಾಥ್ ತಿಳಿಸಿದರು.
ತಲುಪಿದ ನಂತರ ವಿಶೇಷ ಪೂಜೆ ಸಲ್ಲಿಸಲಾಗುವುದು ಇದೇ ವೇಳೆ ಪಾದಯಾತ್ರೆಯಲ್ಲಿ ಜೆಡಿಎಸ್ ಪಕ್ಷದ
ಕಾರ್ಯಕರ್ತರು,ಹನೂರು ಜೆ ಡಿ ಎಸ್ ಮುಖಂಡರುಗಳಾದ ಮಂಜೇಶ್ ಗೌಡ,ಪ. ಪಂಚಾಯತಿ ಸದಸ್ಯರಾದ ಮಹೇಶ್ ,ಸೇರಿದಂಂತೆ ಮಳವಳ್ಳಿ ಕ್ಷೇತ್ರದ ಜನತೆ ಸಹ ಅವರ ಜೊತೆ ಹೆಜ್ಜೆ
ಹಾಕಿದರು.
ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ