ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥರಾಗಿದ್ದು ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ನೀರಲಕಟ್ಟಿ ತಾಂಡಾದಲ್ಲಿ ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥರಾಗಿದ್ದು ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೀರಲಕಟ್ಟಿ ತಾಂಡಾ ಸರ್ಕಾರಿ ಶಾಲೆಯ ಬಳಿ ಸಿಕ್ಕ ಕಾಡು ಔಡಲ ಬೀಜವನ್ನು ತಿಂದ ಹಿನ್ನೆಲೆಯಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ

ಸಾರಾಂಶ: ಈ ದಿವಸ ದಿನಾಂಕ 30-01-2023 ರಂದು 16-15 ಗಂಟೆಯಿಂದ 16-30 ಘಂಟೆಯ ನಡುವಿನ ಅವಧಿಯಲ್ಲಿ ಶಿಗ್ಗಾವ್ ತಾಲೂಕು ನೀರಲಕಟ್ಟಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ
1) ಸಮರ್ಥ್ ರವಿ ಲಮಾಣಿ ವಯಾ 7
2) ಶರತ್ ಉಮೇಶ್ ಲಮಾಣಿ ವಯಾ 8
3) ಪೂಜಾ ಗಣಪತಿ ಲಮಾಣಿ ವಯಾ 8
4) ರೇಣುಕಾ ಸುಭಾಷ್ ಲಮಾಣಿ ವಯಾ 08
5) ಶಂಕ್ರಪ್ಪ ಹೇಮಂತ್ ಅಕ್ಕಸಾಲಿ ವಯಾ 08
6) ಪವನ್ ಗಂಗಪ್ಪ ಲಮಾಣಿ ವಯಾ 08
7) ದೇವಕ್ಕ ಕುಮಾರ್ ಲಮಾಣಿ ವಯಾ 08 ವರ್ಷ
8) ಪ್ರಿಯಾಂಕ ಸಕಾರಾಮ್ ಅಕ್ಕಸಾಲಿ ವಯಾ 8 ವರ್ಷ 9) ನವೀನ್ ದೇವಪ್ಪ ಲಮಾಣಿ ವಯಾ 8 ವರ್ಷ ಎಲ್ಲರೂ ನೀರಲಕಟ್ಟಿ ತಾಂಡ ಇವರು ಶಾಲೆಯ ಆವರಣದಲ್ಲಿ ಕಾಡ ಔಡಲ ಬೀಜವನ್ನು ಸೇವಿಸಿ ವಾಂತಿ ಹಾಗೂ ಜ್ವರದಿಂದ ಅಸ್ಪೆಸ್ಥರಾಗಿದ್ದರಿಂದ ಪಾಲಕರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲ ಮಾಡಿದ್ದಾರೆ. ಚಿಕಿತ್ಸೆ ಮುಂದುವರೆದಿರುತ್ತದೆ. ಡಾ: ಹನುಮಂತಪ್ಪಾ ವೈದ್ಯರನ್ನು ವಿಚಾರಿಸಲಾಗಿ ಯಾವ ಮಕ್ಕಳಿಗೂ ಜೀವ ಅಪಾಯವಿರುವುದಿಲ್ಲ ಅಂತ ತಿಳಿಸಿರುತ್ತಾರೆ.


-ಮಂಜುನಾಥ ಪಾಟೀಲ,ಹಾವೇರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ