ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರುನಾಡ ಕಂದ ಪತ್ರಿಕೆಯ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವರದಿಗಾರರ ಪ್ರಥಮ ವಾರ್ಷಿಕ ಸಭೆ

ನಿನ್ನೆ ದಿ 5-2-2023 ರಂದು ಭಾನುವಾರ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ

ಕರುನಾಡ ಕಂದ ಪತ್ರಿಕೆಯ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವರದಿಗಾರರ ಪ್ರಥಮ ವಾರ್ಷಿಕ ಸಭೆ ಯಶಸ್ವಿಯಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ಕರುನಾಡ ಕಂದ ವರದಿಗಾರರು ಅತಿಥಿಗಳಾಗಿ

ಸುದೀಪ್ ಶಾಲೆಯ ಮುಖ್ಯಸ್ಥರಾದ ಶ್ರೀಯುತ ಸಾಯಬಣ್ಣ ಪುರ್ಲೆ,ಮಾತೃಭೂಮಿ ಗ್ರಾಮೀಣಾಭಿವೃದ್ಧಿ ಸೇವಾಸಂಸ್ಥೆಯ ಸಂಸ್ಥಾಪಕರಾದ ರಾಜೇಂದ್ರ.ಎನ್.ಕೊಲ್ಲೂರ,ಮೂಲನಿವಾಸಿ ಅಂಬೇಡ್ಕರ್ ಸೇನೆಯ ಯಾದಗಿರಿ ಜಿಲ್ಲಾಧ್ಯಕ್ಷರಾದ ಶ್ರೀಯುತ ರಂಗನಾಥ ಬಾಗಲಿಯವರು ಆಗಮಿಸಿದ್ದರು.ಕರುನಾಡ ಕಂದ ಪತ್ರಿಕೆಯ ಸಂಪಾದಕರಾದ ಬಸವರಾಜ ಬಳಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಭೆಯ ಪೂರ್ವಸಿದ್ಧತೆಯಿಂದ ಹಿಡಿದು ಕಾರ್ಯಕ್ರಮ ಮುಗಿಯುವವರೆಗೂ ಎಲ್ಲಾ ರೀತಿಯಲ್ಲೂ ಅತ್ಯಂತ ಕಾಳಜಿಯಿಂದ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಕರುನಾಡ ಕಂದ ಪತ್ರಿಕೆಯ ಶಹಾಪುರ ತಾಲೂಕಿನ ಮುಖ್ಯ ವರದಿಗಾರರಾದ ಶ್ರೀಯುತ ರಾಜಶೇಖರ ಮಾಲಿಪಾಟೀಲ್ ರವರು ಅತಿಥಿಗಳ ಪರಿಚಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದ ಅತಿಥಿಗಳು ಇಂದಿನ ದಿನಗಳಲ್ಲಿ ಪತ್ರಿಕೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರೊಂದಿಗೆ ಕರುನಾಡ ಕಂದ ಪತ್ರಿಕೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಶುಭ ಕೋರಿದರು.ಈ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದ ಯಾದಗಿರಿ ತಾಲೂಕಿನ ವರದಿಗಾರರಾದ ಶ್ರೀಮತಿ ಶರಣಮ್ಮ ದೊಡ್ದಮನಿ,ಜೇವರ್ಗಿ ತಾಲೂಕಿನ ವರದಿಗಾರರಾದ ಶ್ರೀಚಂದ್ರ ಶೇಖರ್ ಗೌಡ ಪಾಟೀಲ್,ಶಹಾಪುರ ತಾಲೂಕಾ ವರದಿಗಾರರಾದ ಶ್ರೀಯುತ ರಾಜಶೇಖರ ಮಾಲಿ ಪಾಟೀಲ್, ಯಡ್ರಾಮಿ ತಾಲೂಕಿನ ವರದಿಗಾರರಾದ ಶ್ರೀಯುತ ನಬಿ ಪಟೇಲರು ತಮ್ಮ ಪತ್ರಿಕೆಯ ಕುರಿತು ಅನಿಸಿಕೆ,ಅನುಭವ ಹಂಚಿಕೊಂಡರು.ಈ ಕಾರ್ಯಕ್ರಮದಲ್ಲಿ ಯಡ್ರಾಮಿ ವರದಿಗಾರರಾದ ಶ್ರೀಯುತ ರಾಚಯ್ಯ ಹಿರೇಮಠ,ಶ್ರೀಯುತ ವಿಶ್ವಾರಾಧ್ಯ ದಳವಾಯಿ,ಶಹಾಪುರ ತಾಲೂಕಿನ ವರದಿಗಾರರಾದ ಶ್ರೀಯುತ ಶಿವಕಾಂತ್,ಶ್ರೀಯುತ ತಾರೇಶ್ ಯಾದವ್,ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀಯುತ ಸಿದ್ದಪ್ಪ ಮದ್ದಣ್ಣನವರ,ಮಾಧ್ಯಮ ಮಿತ್ರರಾದ ಶ್ರೀಯುತ ಜಿ.ಘಂಟೆಪ್ಪ ಶಹಾಪುರ,ಶ್ರೀಯುತ ಚಾಂದ್ ಗೌಂಡಿ ಹಾಗೂ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ