ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಮಾಜಿಕ ಜವಾಬ್ದಾರಿ ಜೊತೆಗೆ ಬದ್ಧತೆ ಮರೆತ ಜಾತ್ರಾ ಕಮೀಟಿ? ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

ಉತ್ತರ ಕನ್ನಡ:ಮುಂಡಗೋಡ ಶ್ರೀಮಾರಿಕಾಂಬಾ ಜಾತ್ರೆ ಮಹೋತ್ಸವದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲ ನಿರ್ಧಾರಗಳನ್ನು ಕೈಗೊಂಡ ಮಾರಿಕಾಂಬಾ ದೇವಸ್ಥಾನ ದ ಜಾತ್ರಾ ಕಮೀಟಿ ಯವರ ವಿವೇಚನೆ ರಹಿತ ನಿರ್ಧಾರಕ್ಕೆ ಯಾರೋ ನಾಲ್ಕು ಜನ ಹಣ ಮಾಡಿಕೊಳ್ಳಲು ಊರ ದೇವರ ಜಾತ್ರೆಯನ್ನು ಬಳಸಿ ಕೊಳ್ಳುತ್ತಿರುವುದಕ್ಕೆ ಕೆಲ ವಿಚಾರವಂತ ಯುವಕರು ಹಾಗೂ ಊರ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದು,ಜಾತ್ರಾ ಮಹೋತ್ಸವ ಗಳು ಜನರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢ ಮಾಡಲು ಹಾಗೂ ಜನರಲ್ಲಿ ಆಸ್ತಿಕತ್ವವನ್ನು ಪುನಶ್ಚೇತನ ಗೊಳಿಸಲು ಬಳಸಬೇಕು ಹೊರತು ಜನರನ್ನು ಆರ್ಥಿಕ ದಿವಾಳಿ ಯನ್ನಾಗಿಸಲು ಬಳಸಬಾರದು ಮತ್ತು ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಬೇಕಾದ ವ್ಯವಸ್ಥೆಗಳು,ಆಡಳಿತ ಗಳು ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಕೆಲ ಯುವಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಯುವಕರನ್ನು ಸಮಾಜವನ್ನು ದಾರಿ ತಪ್ಪಿಸುವ ಇವುಗಳು ಸಮಾಜಕ್ಕೆ ಮಾರಕ,ಒಟ್ಟಿನಲ್ಲಿ ಇಂತಹ ಋಣಾತ್ಮಕ ವಿಚಾರಗಳ ನಡುವೆಯೂ ಮಾರಿಕಾಂಬಾ ದೇವಿಯ ಜಾತ್ರೆಯು ಸದ್ಭಕ್ತರ ಪಾಲ್ಗೊಳ್ಳುವಿಕೆಯಿಂದ ಮತ್ತು ಅಮ್ಮ ಮಾರಿಕಾಂಬೆ ಯ ದಿವ್ಯಶಕ್ತಿ ಇಂದ ಯಶಸ್ವಿ ಯಾಗಿ ಜನ ಜಂಗುಳಿ ಇಂದ ಸಾಗುತ್ತಿರುವುದು ಜಾತ್ರಾ ಮಹೋತ್ಸವದ ಯಶಸ್ಸಿಗೆ ಹಿಡಿದ ಕೈ ಗನ್ನಡಿ.ಇನ್ನಾದರೂ ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಕಮೀಟಿಯವರು ವಿಚಾರ ಮಾಡಲಿ ಎನ್ನುವುದು ಜನರ ಬೇಡಿಕೆಯಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ