ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜನರಿಲ್ಲದೆ ಮತಯಂತ್ರದ ಜಾಗೃತಿ ಅಭಿಯಾನ ಮಾಡಿದ ಅಧಿಕಾರಿಗಳು

ಹಾವೇರಿ ಜಿಲ್ಲೆಯ ಹಾನಗಲ್:ಚುನಾವಣಾ ಆಯೋಗದ ಆದೇಶದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಹಾನಗಲ್ ತಾಲೂಕಿನಲ್ಲಿ ಮತಯಂತ್ರಗಳ ತರಬೇತಿ ಮತ್ತು ಜಾಗೃತಿ ಅಭಿಯಾನವನ್ನು ಇಂದು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಜನರಿಲ್ಲದೆ ಕೇವಲ ಅಧಿಕಾರಿ ವರ್ಗದವರಿಗೆ ಮತಯಂತ್ರದ ಕುರಿತು ಜಾಗೃತಿ ಮೂಡಿಸಲಾಯಿತು ಸುಮಾರು 2000 ಮತದಾರರು ಇರುವ ಗ್ರಾಮದಲ್ಲಿ ಕೇವಲ 15 ರಿಂದ 20 ಜನರಿಗೆ ಮತದಾನ ಜಾಗೃತಿ ಅಭಿಯಾನವನ್ನು ಪಿ ಡಬ್ಲ್ಯೂ ಡಿ ಇಂಜಿನಿಯರ ಶ್ರೀ ಪಾಂಡುರಂಗಪ್ಪ ಅವರು ಮತಯಂತ್ರದ ಕುರಿತು ತರಬೇತಿ ನೀಡಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು ಮತ್ತು ಇನ್ನುಳಿದ ಸಿಬ್ಬಂದಿ ವರ್ಗದವರು,ಕೇವಲ ಎರಡು ಜನ ಮಾತ್ರ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸೇವಕರು, ಗ್ರಂಥಪಾಲಕ, ಒಟ್ಟಾರೆ ಸಾರ್ವಜನಿಕರಿಗಿಂತ ಅಧಿಕಾರಿ ವರ್ಗದವರೇ ಹೆಚ್ಚು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಇದು ಅಧಿಕಾರಿ ವರ್ಗದವರಿಗೆ ಮತದಾನ ಜಾಗೃತಿ ಅಭಿಯಾನವೋ? ಅಥವಾ ಸಾರ್ವಜನಿಕರಿಗೆ ಮತದಾನ ಜಾಗೃತಿ ಅಭಿಯಾನವೋ ಎಂಬ ಗೊಂದಲ ಮೂಡಿತು ಗ್ರಾಮದಲ್ಲಿ ಮುಂಚಿತವಾಗಿ ಡಂಗುರ ಸಾರುವ ಮೂಲಕ ಜನ ಸೇರಿಸಬೇಕಾದ ಅಧಿಕಾರಿಗಳು, ಯಾವುದೇ ರೀತಿ ಮುನ್ಸೂಚನೆ ಇಲ್ಲದೆ, ಜನರನ್ನು ಸೇರಿಸದೆ ಈ ಒಂದು ಕಾರ್ಯಕ್ರಮವನ್ನು ಮಾಡಿದರು.

ವರದಿಗಾರರು:ರವಿ ಓಲೆಕಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ