ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಮೃತ್ ಜ್ಯೋತಿ ಯೋಜನೆ ಅಡಿಯಲ್ಲಿ 75 ಯೂನಿಟ್ ವಿದ್ಯುತ್ ಫ್ರೀ ಪಡೆದುಕೊಳ್ಳಲು ಗ್ರಾಹಕರಿಗೆ ಸಲಹೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ.ಕೆ. ವಿದ್ಯುತ್ ಶಾಖೆಯ ಶಾಖಾಧಿಕಾರಿಗಳಾದ ಸಂತೋಷ ಬನಗೊಂಡೆ ಹಾಗೂ ಸಿಬ್ಬಂದಿಗಳು ಸೇರಿ ಘನ ಸರ್ಕಾರದ ಆದೇಶದ ಮೇರೆಗೆ ಗ್ರಾಹಕರಿಗೆ ಅನುಕೂಲವಾಗಲೆಂದು ವಿದ್ಯುತ್ ಇಲಾಖೆಯಲ್ಲಿ ಜಾರಿಗೆ ತಂದಿರುವ “ಅಮೃತ್ ಜ್ಯೋತಿ ಯೋಜನೆ “ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗ್ರಾಹಕರಿಗೆ ಸಂಬಂಧಿಸಿದ ಈ ಯೋಜನೆಯಿಂದ 75 ಯೂನಿಟ್ ವಿದ್ಯುತ್ ಫ್ರೀ ಪಡೆದುಕೊಳ್ಳಲು ಅನೂಕೂಲವಾಗುತ್ತದೆ.ಆದ್ದರಿಂದ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಇಂದು ನಾದ ಬಿಕೆ ಗ್ರಾಮದ ದಲಿತ ಕಾಲೋನಿಗೆ ತೆರಳಿ ಗ್ರಾಮ ವಿದ್ಯುತ್ ಬಳಕೆದಾರರಿಗೆ ಈ ಯೋಜನೆಯ ಲಾಭ ಪಡೆದುಕೊಳ್ಳಲು ಇದೊಂದು ಸುವಣಾ೯ವಕಾಶವಿದ್ದು ,ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ತಮ್ಮ 1). ರೇಷನ್ ಕಾರ್ಡ್ ಜೇರಾಕ್ಸ್ ಪ್ರತಿ.( BPL/APL) 2) ಪರಿಶಿಷ್ಟ ಜಾತಿ ಪ್ರಮಾಣಪತ್ರ, 3).ಆಧಾರ ಕಾಡ್೯.4)ಬ್ಯಾಂಕ್ ಪಾಸ್ ಬುಕ್.5 ) ಚಾಲ್ತಿಯಲ್ಲಿರುವ ಮೋಬೈಲ್ ನಂಬರ್. ಹಾಗೂ ಸಂಬಂಧಿಸಿದ ಇತರೆ ದಾಖಲೆಗಳನ್ನು ತಪ್ಪದೆ ನಿಮ್ಮ ಗ್ರಾಮದ ವಿದ್ಯುತ್ ಪ್ರತಿನಿಧಿ ಅಥವಾ ಲೈನ್ ಮೇನ್ ಗಳಿಗೆ ದಾಖಲೆಗಳನ್ನು ಕೊಟ್ಟು 75 ಯೂನಿಟ್ ವಿದ್ಯುತ್ ಫ್ರೀ ಪಡೆದುಕೊಳ್ಳಲು ಇದೊಂದು ಒಳ್ಳೆಯ ಸುವಣಾ೯ವಕಾಶ ಆದಷ್ಟು ಬೇಗನೆ ಇದರ ಸದೂಪಯೋಗ ಪಡೆದುಕೊಳ್ಳಬೇಕೇಂದು ನಾದ ವಿದ್ಯುತ್ ಶಾಖೆಯ ಶಾಖಾಧಿಕಾರಿಗಳಾದ ಮಾನ್ಯ ಶ್ರೀ ಸಂತೋಷ್ ಬನಗೊಂಡೆ ಇವರು ಹೇಳಿದರು .
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಪವನ ಮಾನೆ. ಪವರ್ ಮ್ಯಾನ್ ರಾದ -ರಾಮ ಡೋಣಿ. ಸಾಹೇಬಗೌಡ ತಾವರಖೇಡ.ಅವಿನಾಶ ಗೊಂದಳಿ.ಮಲ್ಲಿಕಾಜು೯ನ್ ಮನಗೂಳಿ.ಆರೀಫ್ ಇನಾಮದಾರ. ಗ್ರಾಮ ವಿದ್ಯುತ್ ಪ್ರತಿನಿಧಿಗಳಾದ -ಮಾಣಿಕರಾಯ ಬಿರಾದಾರ. ಗ್ರಾಮದ ಹಿರಿಯರಾದ ಚಂದಪ್ಪ ಹರಿಜನ ಇತರರು ಉಪಸ್ಥಿತರಿದ್ದರು.

ವರದಿ.ಅರವಿಂದ್. ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ