ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಲ್ವಪತ್ರೆ ಪ್ರಿಯ ಶಿವನು


ಹರ ಹರ ಮಹಾದೇವ ನಿನ್ನ ಶಿವ ನಾಮವನು
ಶಿವರಾತ್ರಿಯ ಜಾಗರಣೆ ವ್ರತದೀ ಜಪಿಸುವೆನು
ತ್ರಿದಳ ಬಿಲ್ವಪತ್ರೆಯ ಪ್ರಿಯನೇ ಸಮರ್ಪಿಸುವೆ
ಗುರು ಹರನೇ ನಿನಗೆ ಶಿವಪೂಜೆಯ ಗೈಯುವೆ

ಪಾಪ ಭಸ್ಮ ವಿನಾಶಕನು ತ್ರಿನೇತ್ರ ಶಿವಶಂಕರ
ಭವರೋಗ ಕಳೆಯುವ ಭಕ್ತರ ಅಭಯಂಕರ
ಕೈಲಾಸ ಸಿದ್ಧಿ ದಯಪಾಲಿಸು ನೀ ತಪಯೋಗಿ
ನಮಿಸುವೆ ನಿನಗೆ ಕರಗಳ ಮುಗಿದು ಶಿರಬಾಗಿ

ಸ್ಪಟಿಕ ಮಣಿಯ ಎಣಿಸಿ ನಾಮ ಜಪಿಸುವೆನು
ಸಂಗೀತ ವೀಣೆ ಮೀಟಿ ತೀರಿಸುವೆ ಭಕ್ತಿಯನು
ಧೂಪ ಕರ್ಪೂರದ ಆರತಿ ಬೆಳಗಿ ಧ್ಯಾನಿಸುವೆ
ಗಂಟೆ ಜಾಗಟೆ ಡಮರುಗ ಬಾರಿಸಿ ನಮಿಸುವೆ

ತನು ಮನ ಶುದ್ದದೀ ಭಕ್ತಿಯಿಂದ ಅರ್ಪಿಸುತ
ಧರೆಯ ಬೆಳಕು ತನ್ಮಯ ಭಕ್ತ ವೃಂದವ ರಕ್ಷಿತ
ಲೋಕ ಉದ್ಧಾರಕನು ಪಾರ್ವತಿ ಧರ್ಮಪತಿತೇ
ಲಿಂಗ ಪೂಜಿತ ನೀ ತ್ರಿಶೂಲ ನೀಲವರ್ಣ ಸ್ತುತೇ

ಡಮರುಗದಿ ನರ್ತಿಸುವ ಭೂಲೋಕ ಅಧಿಪತಿ
ಫಲಪುಷ್ಪ ಪಂಚಾಮೃತ ನೈವೇದ್ಯ ನಮೋಸ್ತುತಿ
ಭಜಿಸುವೆ ನಿನ್ನಯ ಸ್ಮರಣೆ ನಂಜುಂಡೇಶ್ವರನೇ
ಸಂಕಷ್ಟದಿ ಬಂದು ಪರಿಹರಿಸು ಕರುಣಾಕರನೇ


-ಮಲ್ಲಪ್ಪ ಭೈರಗೊಂಡ
                            ತಾಂತ್ರಿಕ ಸಹಾಯಕ,ಘಟಕ-07 BMTC ಬೆಂಗಳೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ