ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಡಪದ ಸಮಾಜವನ್ನು ಬಿಜೆಪಿ ಸರ್ಕಾರ 2022-2023ನೇ ಬಜೆಟನಲ್ಲಿ ನಿರ್ಲಕ್ಷ್ಯ

ರಾಯಚೂರು/ಸಿಂಧನೂರು ತಾಲೂಕಿನ ಹಡಪದ ಸಮಾಜದ ತಾಲೂಕ ಅಧ್ಯಕ್ಷರಾದ ಭೀಮಣ್ಣ ಬೆಳಗುರ್ಕಿ ಅವರು ಮಾತನಾಡಿ 2022 -2023 ಸಾಲಿನ ಬಜೆಟನಲ್ಲಿ ಹಡಪದ ಸಮಾಜವನ್ನು ಸರ್ಕಾರ ಸಂರ್ಪೂಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದರು. ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಯ್ಯರವರು ಮಂಡಿಸಿದ ರಾಜ್ಯ ಬಜೆಟನಲ್ಲಿ ಸಮಾಜಕ್ಕೆ ನಿಗಮ ಮಂಡಳಿ ಯಾವುದೇ ಸಮಾಜದ ಪರವಾಗಿ ಯಾವುದೆ ಘೋಷಣೆ ಮಾಡದೆ ಸಮಾಜಕ್ಕೆ ಅನ್ಯಾಯಮಾಡಿದೆ. ರಾಜ್ಯದಲ್ಲಿ ಹಡಪದ ಸಮಾಜದವರು ಸುಮಾರು 15-ರಿಂದ20-ಲಕ್ಷ ಜನ ಸಂಖ್ಯೆಯಲ್ಲಿ ಇದ್ದರು ಕೂಡ ಸರಕಾರ ಸಂರ್ಪೂಣವಾಗಿ ಸಮಾಜದವರನ್ನು ನಿರ್ಲಕ್ಷ್ಯ ಮಾಡಿದೆ . ಶ್ರೀ ಮಾನ್ಯ ಯಡಿಯುರಪ್ಪನವರು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ್ದರೆ 24 ಗಂಟೆಯಲ್ಲಿ ನಿಗಮ ಮಂಡಳಿ ಘೋಷಣೆ ಮಾಡುತ್ತೆವೆಂದು ನೀಡಿದ್ದ ಮಾಜಿ ಮುಖ್ಯಮಂತ್ರಿಗಳಾದ ಯಡಿಯುರಪ್ಪನವರು ಕೊಟ್ಟಮಾತು ಉಳಿಸಕೂಳ್ಳಲಿಲ್ಲಾ ಈಗಿನ ಮುಖ್ಯಮಂತ್ರಿಗಳು ಕೂಡಲಸಂಗಮದ ತಂಗಡಿಗೆಯಲ್ಲಿ ರಾಜ್ಯ ಸಮಾಜದ ಸಮಾವೇಶದಲ್ಲಿ ನೀಡಿದ ಭರಸೆಯ ಕೂಡ ಉಸಿ ಮಾಡಿದೆ. ಮಂಡಿಸಿದ ಬಜೆಟೆನಲ್ಲಿ ಸಮಾಜಕ್ಕೆ ಯಾವುದೆ ನಿಗಮ ಮಂಡಳಿ ಹಾಗೂ ನಾಮನಿರ್ದೇಶನ ಮಾಡದೆ ಘೋರ ಅನ್ಯಾಯ್ಯ ಮಾಡಿದೆ. ಮುಂದಿನ ದಿನಮಾನಗಳಲ್ಲಿ ಕೊನೆಯದಾಗಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವುದರ ಮೂಲಕ ಮಾತು ಉಳಿಸಕೂಳ್ಳಲಿ ಇಲ್ಲಾದಿದ್ದರೆ ಮುಂದಿನ ದಿನಗಳಲ್ಲಿ 2023 ರ ವಿಧಾನ ಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ವಿರುದ್ದ ಸಮಾಜದ ಬಂಧುಗಳು ನಿರ್ಣಯತೆಗೆದುಕೂಳ್ಳಬೇಕಾಗುತ್ತೆದೆ ಎಂದು ಸಮಾಜದ ಬಂಧುಗಳು ಮನವಿ ಮಾಡಿರುತ್ತೆವೆ. ಭೀಮಣ್ಣ ಹಡಪದ, ಸಮಾಜದ ಮರಿಯಪ್ಪ, ಉಪಲದೂಡ್ಡಿ ಮಾಜಿ ಅದ್ಯಕ್ಷರು ಮುಖಂಡರು, ಸಿದ್ದು ಮಾಡಸಿರಿವಾರ, ಸಮಾಜದ ಉಪಾದ್ಯಕ್ಷರು ಈರಣ್ಣಾ ಅಲ್ಲಾರು, ಕೆ.ಕಾಶಿನಾಥ ಮೂಡುಬುಳಕರ್, ವೀರೆಶ ಬಳಗನೂರು, ಕಾರ್ಯದರ್ಶಿಗಳು, ಅಮರೇಶ ಬಸಪೂರು ಸುರೇಶಗೋಬ್ಬರಕಲ್ಲ ,ಶಿವು ಮಾಡಸಿರಿವಾರ, ಭೀಮಾಶಂಕರ ,ರಾಘು ಅಲ್ಲೂರು ,ನಾಗೇಶ ಗವಿಸಿದ್ದಪ್ಪ ,ಸಮಾಜದ ಹಲವು ಮುಖಂಡರು ಸಮ್ಮುಖದಲ್ಲಿ ಹೇಳಿಕೆಯನ್ನು ನೀಡಿದರು.
ವರದಿ// ವೆಂಕಟೇಶ. ಹೆಚ್. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ