ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಏಳುವರೆ ಸಾವಿರ ವಿದ್ಯಾರ್ಥಿಗಳು ತವರಲ್ಲೇ ವಿದ್ಯಾಭ್ಯಾಸ ಮಾಡುತ್ತಿರುವುದು ರಾಜ್ಯದಲ್ಲೆ ಇತಿಹಾಸ ಡಿ.ಕೆ.ಶಿವಕುಮಾರ್.

ಚಾಮರಾಜನಗರ : ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಲು ದೂರದ ಬೆಂಗಳೂರಿನಂತಹ ಸಿಟಿಯನ್ನೆ ಅವಲಂಬಿಸಿದ್ದೆವು ಆದರೆ ಹನೂರು ಕ್ಷೇತ್ರದಲ್ಲಿ ಒಂದೆ ಬಾರಿಗೆ ಏಳುವರೆ ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಅಂತಹ ಮಹಾನ್ ಕೆಲಸಕ್ಕೆ ಕಾರಣಕರ್ತರಾದ ಮಾಜಿ ಸಂಸದರಾದ ದೃವನಾರಯಣ್ ಮತ್ತು ಶಾಸಕರಾದ ಆರ್ ನರೇಂದ್ರರ ಬಗ್ಗೆ ಮೆಚ್ಚುಗೆಯನ್ನು ಕೆ ಪಿ ಸಿ ಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ತಿಳಿಸಿದರು .
ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದ ಪಕ್ಕದಲ್ಲಿ ಆಯೋಜಿಸಿದ ಪ್ರಜಾ ಪ್ರತಿಧ್ವನಿ ಯಾತ್ರೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ನಾನು ಹತ್ತಿರದಿಂದ ನರೇಂದ್ರ ಮತ್ತು ದೃವನಾರಯಣ್ ರ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ್ದೆನೆ ಉತ್ತಮ ಕೆಲಸಗಳನ್ನು ಮಾಡಿದ್ದಾರೆ .ಅಲ್ಲದೆ ನಾನು ದಿವಂಗತ ರಾಜೂಗೌಡ ಜೊತೆಯಲ್ಲಿಯು ಸಹ ಕಾರ್ಯ ನಿರ್ವಹಿಸಿದ್ದೆನೆ ಹಾಗೂ ಮಾಜಿ ಸಿ ಎಮ್ ಎಸ್ ಎಮ್ ಕೆ ರವರ ಸಂಪುಟದಲ್ಲಿ ಸಹ ಕಾರ್ಯನಿರ್ವಹಿಸಿದ್ದೆನೆ ನಾನು ನನ್ನ ಮತ ಕ್ಷೇತ್ರದಮದ ಏಳುಬಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆಯನ್ನು ಮಾಡಿದ್ದೆನೆ ,ಹನೂರು ಕ್ಷೇತ್ರ ಒಂದರಲ್ಲೇ ಸುಮಾರು ೧೫೧ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದಾರೆ ಮತ್ತೊಂದು ಹೆಮ್ಮೆಯ ವಿಷಯ ರೈತರಿಗೆ ಹತ್ತು ಹೆಚ್ ಪಿ ವರೆಗೂ ವಿದ್ಯುತ್ ನ್ನು ನಾವು ಕೊಡುತ್ತೆವಿ ನಮ್ಮ ಸರ್ಕಾರವಿದ್ದಾಗ
ನಿಮ್ಮೂರಲ್ಲಿಯು ಸಹ
ಇಪ್ಪತ್ತು ಮೆಗವ್ಯಾಟ್ ಉತ್ಪಾದನೆ ಆಗುವ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಇದರಿಂದ ಇಲಾಖೆಗೆ ಉಂಟಾಗುತ್ತಿದ್ದ ನಷ್ಟವನ್ನು ತಗ್ಗಿಸಿದ್ದೆವಿ ಈ ಪುಣ್ಯ ಭೂಮಿಯಲ್ಲಿ ಮಾದೇಶ್ವರರು ವರ ಮತ್ತು ಶಾಪವನ್ನು ಬಿಟ್ಟು ಅವಕಾಶವನ್ನು ಕೊಟ್ಟಿದ್ದಾರೆ ಅದರಲ್ಲಿ ನೀವು ಸಮಾಜದಲ್ಲಿ ಮುಂದೆ ಬರುವ ರೀತಿಯಲ್ಲಿ ಬೆಳೆಯಬೇಕು,ಕಳೆದ ಚುನಾವಣೆಯಲ್ಲಿ ಬಿ ಜೆ ಪಿ ಪಕ್ಷದ ಪ್ರಣಾಳಿಕೆಯಲ್ಲಿ ಆರುನೂರು ಭರವಸೆಯನ್ನು ಕೊಟ್ಟಿದ್ದರು ಆದರೆ ಅವರು ಕೇವಲ ಐವತ್ತು ಭರವಸೆಗಳನ್ನೆ ಈಡೇರಿಸಿದ್ದಾರೆ ಉಳಿದ ಐನೂರು ಐವತ್ತು ಇಲ್ಲವೇ ಇಲ್ಲ ಪ್ರತಿಯೋಬ್ಬರ ಖಾತೆಗೆ ಹದಿನೈದು ಲಕ್ಷಹಣ ಹಾಕುತ್ತೇವೆ ಎಂದರು ,ಲಂಚ ಮುಕ್ತ ಮಾಡುತ್ತೇವೆ ಎಂದು ಇವರೆ ಎಲ್ಲಾ ಕಛೇರಿಯಲ್ಲಿ ಲಂಚ ತೆಗೆದುಕೊಂಡರು ಈಶ್ವರಪ್ಪ ಪರ್ಶೆಂಟೇಜ್ ಕೊಟ್ಟಿಲ್ಲವೆಂದು ತಮ್ಮ ಕಾರ್ಯಕರ್ತನ ಸಾವು ಮಾಡಿದವರು , ನಿಮ್ಮ ನೋವಿಗೆ ನಾವು ದ್ವನಿಯಾಗಿದ್ದೆವಿ ಈ ಯಾತ್ರೆಯನ್ನು ಬೆಳಗಾವಿಯಿಂದ ಬಾವಿಯಲ್ಲಿ ನೀರೆತ್ತುವ ಮೂಲಕ ಪ್ರಾರಂಭ ಮಾಡಿದೆವು, ಉಜ್ವಲ ಯೋಜನೆಯಲ್ಲಿ ಮೋದಿಯವರ ಪೋಟೊ ಕಾಣಿಯಾಗಿದೆ ಅಗತ್ಯ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆರಿದೆ,ನಮ್ಮ ರಾಜ್ಯಕ್ಕೆ ಇಂದಿರಾಗಾಂಧಿಯ ಮೊಮ್ಮಗಳು ಬಂದಿದ್ದರು ,ರಾಹುಲ್ ಗಾಂದಿ ಭಾರತ್ ಜೋಡೊ ಯಾತ್ರೆಮೂಲಕ ಜಾತಿಗಳ‌ ಸಮತೋಲನ‌ ಮಾಡಿದರು,ಒಬ್ಬ ಮಹಿಳೆ ನಿಮ್ಮಜ್ಜಿ ಕೊಟ್ಟ ಜಮೀನ ಸೌತೆಕಾಯಿ ಎಂದು ರಾಹುಲ್ ಗಾಂಧಿಯವರಿಗೆ ಕೊಟ್ಟರು,ನಾವುಗಳು ಹತ್ತು ಕೆಜಿ ಅಕ್ಕಿಯನ್ನು, ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರೂ ಹಣವನ್ನು ನೀಡಲು ನಾವು ಬದ್ದ ಮುಂದಿನ ದಿನಗಳಲ್ಲಿ ಪ್ರತಿ ಮನೆಗೆ ಗ್ಯಾರಂಟಿ ಕಾರ್ಡ್ ನೀಡಿಲಾಗುವುದು ಹೆಚ್ಚು ಮನೆತಲುಪಿಸಿದ ಹತ್ತು ಜನರಿಗೆ ನಾನೆ ಟಿವಿ ಕೊಡುತ್ತೆನೆ,ನಗರದಲ್ಲಿ ಆಮ್ಲಜನಕದಿಂದ ಮಡಿದವರಿಗೆ ಲಕ್ಷ ರೂ ಚೆಕ್ ನೀಡಿದೆ, ನಮ್ಮ ಸರ್ಕಾರದಿಂದ ಮೂವತೈದು ಸಾವಿರ ಉದ್ಯೋಗ ನಿಡುವ ಭರವಸೆ ಕೊಡ್ತಿನಿ.ಬದನಾಳು ಗ್ರಾಮದಲ್ಲಿ ಎರಡು ಸಮುದಾಯಗಳನ್ನು ಬೆಸೆವ ಕೆಲಸ ರಾಹುಲ್ ಗಾಂದಿ ಮಾಡಿದ್ದಾರೆ,ಬಿ ಜೆ ಪಿ ಯ ಮಂತ್ರಿಯೊಬ್ಬರಿಗೆ ಹುಚ್ಚು ಹಿಡಿದಿದೆ ನಮ್ಮನಾಯಕರಾದ ಸಿದ್ದರಾಮಯನವರಿಗೆ ಕೊಲೆ ಮಾಡಲು ಪ್ರಚೋದನೆ ನೀಡದ್ದಾನೆ ಅವನಿಗೆ ಈ ಪೋಲಿಸ್ ಅಧಿಕಾರಿಗಳು ದಾವೆ ಹೂಡಿಲ್ಲ ಎಂದು ತಿಳಿಸಿದರು ,ಇದೇ ಸಂದರ್ಭದಲ್ಲಿ ಕೆರಳ ರಾಜ್ಯದ ಮಾಜಿ ಸಚಿವರಾದ ಅನಿಲ್ ಕುಮಾರ್ , ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಾಯಣ್, ಹಾಗೂ ಶಾಸಕರಾದ ನರೇಂದ್ರ ರಾಜುಗೌಡ , ಶಾಸಕರಾದ ಸಿ. ಪುಟ್ಟರಂಗಶೆಟ್ಟಿ , ಜೊತೆಗೂಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಜಾಧ್ವನಿ ಬಸ್ ಯಾತ್ರೆಯ ಉಸ್ತುವಾರಿಗಳು ಹಾಗೂ ರಾಜ್ಯ ಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್ ,ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಬಿ.ವಿ. ಶ್ರೀನಿವಾಸ್ , ಯುವ ನಾಯಕರಾದ ನವನೀತ್ ಗೌಡ, ಪೊನ್ನಾಚಿ ರಂಗಸ್ವಾಮಿ, ಸಾಧುಕೋಕಿಲ, ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾದ ಮರಿಸ್ವಾಮಿ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ , ಎಸ್.ಬಾಲರಾಜ್ , ಎಸ್.ಸಿ ಬಸವರಾಜ್ , ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರುಗಳು, ಮುಖಂಡರಾದ ಮಧುವನಹಳ್ಳಿ ಶಿವಕುಮಾರ್ , ಕೋಪ್ಪಾಳಿ ಮಹದೇವ ನಾಯಕ , ರಾಮಾಪುರ ಬಸವರಾಜ್ , ಚಲುವರಾಜ್ ,ಸತೀಶ್ ಕುಮಾರ್,ಯುವ ಕಾಂಗ್ರೆಸ್ ನ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು, ವಿದ್ಯಾರ್ಥಿ ಕಾಂಗ್ರೆಸ್ ನ ಪದಾಧಿಕಾರಿಗಳು,ವಿವಿಧ ಘಟಕಗಳ ಅಧ್ಯಕ್ಷರುಗಳು, ಹಾಗೂ ಸ್ಥಳೀಯ ಮುಖಂಡರು‌ ಪಕ್ಷದ ಕಾರ್ಯಕರ್ತರು, ಉಪಸ್ಥಿತರಿದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ