ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾಜಿ ಸಚಿವರ ಅಭಿವೃದ್ಧಿ ಕಾರ್ಯಕ್ರಮ

ಕೊಪ್ಪಳ: ಗಂಗಾವತಿ ನಗರದ ಮೈಬುಬ್ ನಗರ ಮತ್ತು ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿಯವರ ಪರವಾಗಿ ಅಭಿವೃದ್ಧಿಗಾಗಿ ಅನ್ಸಾರಿ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ನಗರ ಘಟಕದ ಅಧ್ಯಕ್ಷರಾದ ಶ್ಯಾಮಿದ್ ಮನಿಯರ್ ನಗರಸಭಾ ಸದಸ್ಯರಾದ ಮನೋಹರ್ ಸ್ವಾಮಿ ಹಿರೇಮಠ, ಕಾಶಿಮ್ ಸಾಬ್ ಗದ್ವಾಲ್, F.ರಾಘವೇಂದ್ರ, ಪಕ್ಷದ ಹಿರಿಯ ನಾಯಕರಾದ ಎಸ್. ಬಿ. ಖಾದ್ರಿ, ಮಾಜಿ ಸದಸ್ಯರಾದ ಕಮಲಿ ಬಾಬಾ, ಪಕ್ಷದ ನಾಯಕರಾದ ಗಿರೀಶ್ ಗಾಯಕ್ವಾಡ್, ಜ್ಯೋತಿ ಸಿಂಗ್, ದುರ್ಗೇಶ್ ದೊಡ್ಡಮನಿ,ಸಲೀಂ, ಗಿಡ್ಡ ಹುಸೇನ್, ಮಂಜು, ಫಯಾಜ್, ದಾವುಲ್, ಗೌಸ್ ಮತ್ತು ಮೈಬೂಬ ನಗರ ಮತ್ತು ಗೌಸಿಯ ಕಾಲೋನಿಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಮತ್ತು ಸಾವಿರಾರು ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು. ಸಂದರ್ಭದಲ್ಲಿ ಮಾತನಾಡಿದ ಅನ್ಸಾರಿ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ, ಗೃಹಜ್ಯೋತಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು, ಭ್ರಷ್ಟ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಜನ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ, ಬಡ ಮಕ್ಕಳಿಗೆ ಸಮವಸ್ತ್ರ,ಶೂ, ಲ್ಯಾಪ್ಟಾಪ್ ವಿತರಿಸದೆ ಅನ್ಯಾಯ ಮಾಡಿದೆ, ಅನ್ನಭಾಗ್ಯ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿದೆ, ಬಿಜೆಪಿ ಅಕ್ರಮ ನೇಮಕಾತಿ, ಕಮಿಷನ್ ದಂಧೆ,ಬೆಲೆ ಏರಿಕೆ ವಿರುದ್ಧ ಜನ ರೋಸಿ ಹೋಗಿದ್ದಾರೆ ಮತ್ತು ಗಂಗಾವತಿ ಕ್ಷೇತ್ರಕ್ಕೆ ಚುನಾವಣೆಗೆ ಹೊಸ ಪಕ್ಷದಿಂದ ಸ್ಪರ್ಧಿಸಲು ವ್ಯಕ್ತಿ ಒಬ್ಬರು ಬಂದಿದ್ದಾರೆ ಅವರ ಬಣ್ಣದ ಮಾತಿಗೆ ಯುವಕರು ಮತ್ತು ಕ್ಷೇತ್ರದ ಜನತೆ ಬಲಿಯಾಗಬೇಡಿ, ನಾನು ನಿಮ್ಮವನು ನಿಮ್ಮ ಜೊತೆ ಇರುತ್ತೇನೆ ಆಶೀರ್ವಾದ ಮಾಡಬೇಕು ಎಂದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ