ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮರೆತಾರ ಮಹಾನರನ್ನ

ಮರೆತು ಹೊಂಟಾರ ಮರೆಯದ ವ್ಯಕ್ತಿಯನ್ನ
ತನ್ನ ಬದುಕನ್ನೇ ಜನರಿಗಾಗಿ ಮುಡುಪಿಟ್ಟ ಮಹಾನುಭವರನ್ನ
ಜಗದ ಮಕ್ಕಳೇ ತನ್ನ ಮಕ್ಕಳೆಂದು ಮರುಗಿದ ಮಮಕಾರವನ್ನ
ಅಸಮಾನತೆ ಶೋಷಣೆ ವಿರುದ್ಧಕೆ ಎದ್ದು ನಿಂತ ನಾಯಕನನ್ನ…!!

ಮರೆತು ಹೊಂಟಾರ ಜನಗಳು ನೊಂದ ಮಹಾನಾಯಕನನ್ನ
ಕಷ್ಟದಲಿ ಬೆಂದು ಬದುಕಿ ಬದುಕು ಕಟ್ಟಿಕೊಟ್ಟ ಬಂಧುವನ್ನ
ಹೆಂಡಿರ ಮಕ್ಕಳ ಲೆಕ್ಕಿಸದೇ ಲೋಕಕೆ ದುಡಿದ ದಣಿಯನ್ನ
ತಂದೆ ತಾಯಿ ಪ್ರೀತಿಯ ತೊರೆದು ಶೋಷಿತ ಬದುಕಿಗೆ ದುಡಿದವನನ್ನ…!!

ಮರೆತು ಹೊಂಟಾರ ನನ್ನವರು ನೈಜ ನೀತಿಯನ್ನ
ಪಾಲಿಸುತ ಕುಂತಾರ ಪಾಪ ಪುಣ್ಯಗಳರಿಯದ ಕೆಟ್ಟ ಪುಟಗಳನ್ನ
ಪೂಜಿಸುತಾರ ಮೇಲ್ನೋಟಕ ದುಡಿದು ಮಡಿದ ಮಹಾನರನ್ನ
ನೆನೆದು ಕೂಗುತಾರ ಅನ್ಯಾಯ ಅತ್ಯಾಚಾರವಾದ ಕ್ಷಣದೊಳಗಿನ್ನ..!!

ಮತ್ತೇ ಮೌಢ್ಯತೆಯಲಿ ಮುಳುಗಿ ಕುಂತಾರ ನನ್ನ ಜನ
ಸರಿಸಿ ಸುಮ್ಮನೆ ನಡೆದಾರ ಸರಿ ದಾರಿ ತೋರಿದ ಸರದಾರನನ್ನ
ದ್ವೇಷ ರೋಷಗಳಲಿ ಸಾಗಿದೆ ನನ್ನ ಮುಗ್ದ ಜನಗಳ ಪಯಣ
ಕಣ್ಮುಚ್ಚಿ ಕುಳಿತಾರೋ ರಕ್ಷಿಸದೇ ಸಮಾನತೆಯ ಸಂವಿಧಾನವನ್ನ….!!

  • ಹನುಮಂತ ದಾಸರ
    ಯುವ ಕವಿ ಸಾಹಿತಿ ಬರಹಗಾರರು ಧಾರವಾಡ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ