ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಡಗರದಿಂದ ಜರುಗಿದ ರಣಗಂಬ ಜಾತ್ರೋತ್ಸವ

ಬೀದರ್ ಜಿಲ್ಲೆಯ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ರಣಗಂಬ ಜಾತ್ರೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ರಣಗಂಬ ತನ್ನೆದೆ ಆದ ಇತಿಹಾಸ ಹೊಂದಿದೆ ಸುಮಾರು ದಶಕಗಳ ಹಿಂದೆ ದೇಶಮುಖ ಎಂಬ ಪಾಳೇಗಾರರು ವಡಗಾಂವ ಗ್ರಾಮವನ್ನ ಆಳ್ವಿಕೆ ಮಾಡುತ್ತಿದರು ಆ ಗ್ರಾಮದ ಮೇಲೆ ಶತ್ರುಗಳು ದಾಳಿ ಮಾಡಿದಾಗ ಆ ಶತ್ರುಗಳನ್ನ ಸೊಲಿಸಿದ ಸವಿ ನೆನಪಿಗಾಗಿ ಆಗಿನಿಂದ ಈ ಬೃಹತ್ ಗಾತ್ರದ ರಣಗಂಬ ಸ್ಥಾಪಿಸಿ ಪೂಜಿಸಲಾಗುತ್ತೆ ಎಂದು ಗ್ರಾಮಸ್ಥರು ತಿಳಿಸಿದರು.
ದೇಶಮುಖ ಮನೆತನದವರು ತಲೆಮಾರುಗಳಿಂದ ಈ ಆಚರಣೆ ಮಾಡುತ್ತಾ ಬಂದಿದ್ದಾರೆ.ಸುಮಾರು 90 ಅಡಿ ಉದ್ದ ಹಾಗು 10 ಟನ್ ನಷ್ಟು ತೂಕವಿದ್ದು ಯಾವುದೇ ಯಂತ್ರದ ಸಹಾಯವಿಲ್ಲದೆ ಊರಿನ ಜನರೇ ಈ ರಣಗಂಬನ್ನ ಎತ್ತಿ ನಿಲ್ಲಿಸುವುದು ಈ ಜಾತ್ರೆಯ ವಿಶೇಷವಾಗಿದೆ.ಬೃಹತ್ ಗಾತ್ರದ ಹಗ್ಗ ಹಾಗೂ ಕಟ್ಟಿಗೆಯ ಸಹಾಯದಿಂದ ಮೇಲೆ ಎತ್ತುತ್ತಾ ಕುಣಿದು ಕುಪ್ಪಳಿಸುತ್ತಾರೆ.

ಇನ್ನು ಈ ರಣಗಂಬಕ್ಕೆ ಜಾತ್ರಾ ನಿತ್ಯವಾಗಿ ವಿಶೇಷ ಪೂಜೆಗಳು ನಡೆಯುತ್ತವೆ.ಈ ರಣಗಂಬವನ್ನು ನಮ್ಮೂರಿನ ಹೆಣ್ಣು ದೇವತೆಯಂದು ಆರಾಧಿಸಿ ಸೀರೆ, ಬಳೆ,ತೊಡಿಸಿ ಪೂಜಿಸಲಾಗುತ್ತೆ.

ಈ ಸಂದರ್ಭದಲ್ಲಿ ಅಲ್ಲಿನ ಹಿರಿಯರಾದ ಬಸವರಾಜ ದೇಶಮುಖ,ಶಿವರಾಜ ಬುಣಗೆ,ಬಂಡಯ್ಯಾ ಸ್ವಾಮಿ, ಜಗಪ್ಪಾ ಪಟ್ನೆ, ಶಂಕರೆಪ್ಪಾ,ಶರಣಪ್ಪಾ ಭೂಶೇಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತಿಯಿದ್ದರು
ವರದಿ:ಅಮರ ಮುಕ್ತೆದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ