ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಹಾಪುರ ನಗರ ಪೊಲೀಸ್ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ: ಮೂವರು ಬೈಕ್ ಕಳ್ಳರ ವಶಕ್ಕೆ

ಯಾದಗಿರಿ: ಶಹಾಪುರ ತಾಲೂಕಿನ ದೊರನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರಕಾಶರೆಡ್ಡಿ(19), ಸಲಿಂ ಸಿಂಗನಹಳ್ಳಿ (25), ಪ್ರಶಾಂತ್ (29) ಬಂಧಿತ ಕಳ್ಳರು ಇವರಿಂದ 7,5 ಲಕ್ಷ ಮೌಲ್ಯದ ಒಟ್ಟು 14 ಮೋಟಾರ್ ಬೈಕ್ ಗಳನ್ನು ವಶಕ್ಕೆ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದರು.
ಈ ಮೂವರು ಬೈಕ್ ಕಳ್ಳರು ಶಹಾಪುರ ನಗರ ಸೇರಿದಂತೆ ವಾಡಿ, ಪರತ್ತಾಬಾದ್, ಚಾಮನಾಳ, ಗಂಗಾವತಿ, ನಾಯ್ಕಲ್, ಗ್ರಾಮಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು.
ಗುರುವಾರ ಬೆಳಗಿನ ಜಾವದಲ್ಲಿ 3 ಗಂಟೆಗೆ ಯಾದಗಿರಿ ಕಡೆಯಿಂದ ಮೂವರು ಮೂರು ಬೈಕ್ ಗಳನ್ನು ತರುವುದನ್ನು ಸುದ್ದಿ ತಿಳಿದ ಶಹಾಪುರ ನಗರದ ಪೋಲಿಸ್ ಅಧಿಕಾರಿ ಪಿ.ಐ.ಚನ್ನಯ್ಮ ಹಿರೇಮಠ ನೇತೃತ್ವದ ತಂಡ ಅಗ್ನಿ ಶಾಮಕ ದಳ ಹತ್ತಿರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿಗಳಾದ ಸಿ.ಬಿ.ವೇದಮೂರ್ತಿ ಹಾಗೂ
ಡಿವಾಯ್ಎಸ್ಪಿ ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ ಪಿ.ಐ.ಚೆನ್ನಯ್ಯ ಹೀರೆಮಠ, ಪಿ.ಎಸ್.ಐ ರಾಹುಲ್ ಪಾವಡೆ, ವಿಜಯಕುಮಾರ, ಶ್ರೀದೇವಿ, ಎ.ಎಸ್.ಐ ಹೊನ್ನಪ್ಪ ಹಾಗೂ ಸಿಬ್ಬಂದಿಯವರಾದ ಸಂಗನಗೌಡ, ಶಿವಲಿಂಗಪ್ಪ, ಸತೀಶಕುಮಾರ್, ಲಕ್ಕಪ್ಪ, ಭಾಗಣ್ಣ , ರಾಮಚಂದ್ರ, ಸಿದ್ದರಾಮಯ್ಯ, ಧರ್ಮರಾಜ , ಎಲ್ಲಾ ಶಹಾಪುರ ಪೋಲಿಸ್ ಕಾರ್ಯಕ್ಕೆ ಡಾ|| ಸಿಬಿ ವೇದಮೂರ್ತಿಯವರು ಅವರು ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು.

ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ