ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಗುವಿನ ಒಡೆಯ

ಕನ್ನಡಿಗರ ರಾಜರತ್ನ
ಯುವಕರ ಯುವರತ್ನ
ಅಭಿಮಾನಿಗಳ ಕರ್ನಾಟಕ ರತ್ನ….!

ಮುತ್ತುರಾಜರ ಪ್ರೀತಿಯ ಮುತ್ತು
ಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತು
ಜಗದೆಲ್ಲರ ಆಶೀರ್ವಾದ ನಿನಗಿತ್ತು….!

ನಗುವಿನ ಒಡೆಯ ನಗು ನಗುತಾ ಬಾಡಿದೆಯಾ
ನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯ
ಪ್ರತೀ ನಗುವಲ್ಲೇ ಉಳಿದಿರುವೆ ನೀ ಶಾಶ್ವತಮಯ….!

ಮಾನವೀಯೆತೆಗೆಂದು ನೀಡಿದೆ ನೇತ್ರದಾನ
ನೀನಿಲ್ಲದೇ ಕರುನಾಡು ಖಾಲಿ ಮೈದಾನ
ಹೇಳು ಬಾ ಮರಳಿ ನಗು ಮಗುವೇ ನಿನ್ನವರಿಗೆ ಸಮಾಧಾನ….!

ನಮ್ಮನಗಲಿದೆ ನೀ ಬೆಟ್ಟದ ಹೂವಾಗಿ
ಬರಬಾರದೇ ಮರಳಿ ಮತ್ತೊಮ್ಮೆ ವರವಾಗಿ
ನಿನ್ನ ಹೆಸರೇ ಬೆಳೆದಿದೆ ಜಗದಲಿ ಹೆಮ್ಮರವಾಗಿ….!

ಚಿರ ನಿದ್ರೆಯಲಿ ಜಾರಿದೆ ನಿನ್ನ ಮನ
ತಲ್ಲಣಗೊಂಡಿದೆ ಕನ್ನಡಿಗರ ಜೀವನ
ಮತ್ತೊಮ್ಮೆ ಹುಟ್ಟಿ ಕಟ್ಟಬಾರದೇ ಈ ನಾಡಿಗೆ ಕನ್ನಡದ ತೋರಣ….!

ಕರುನಾಡಲ್ಲಿ ಸದಾ ನಿನ್ನದೇ ಗುಣಗಾನ
ಮನೆ ಮನದಲ್ಲೂ ನಿನ್ನದೇ ನಗುವಿನ ಚಿತ್ರಣ
ಅಭಿಮಾನಿಗಳ ಅಂಧ ಅನಾಥರ ಬಾಳಿಗೆ ನಿನ್ನ ಹೆಸರೇ ಪೋಷಣ….!!

  • ನಾಗರಾಜ ಮುಗಳಿ ಹರ್ಲಾಪುರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ