ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮ್ಮ ನಾಡಿನಲ್ಲಿ ಅನಾಥ ಎನ್ನುವ ಪದವನ್ನು ಅಳಿಸಿ ಹಾಕುವುದೇ ಕಾರುಣ್ಯಾಶ್ರಮದ ಸಂಕಲ್ಪ-ಡಾ.ಚನ್ನಬಸವ ಸ್ವಾಮಿ ಹಿರೇಮಠ

ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ ಅವರ ತಂದೆಯವರಾದ ವೇದಮೂರ್ತಿ ಶರಭಯ್ಯ ಸ್ವಾಮಿ ಯಡಿಯೂರು ಮಠ ಅವರ ದ್ವಿತೀಯ ವರ್ಷದ ಪುಣ್ಯ ಸ್ಮರಣೆಯನ್ನು ಆಶ್ರಮದಲ್ಲಿ ಮಹಾಪ್ರಸಾದ ವಿತರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ದಿವಂಗತರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಶರಭಯ್ಯ ಸ್ವಾಮಿ ಅವರ ಹೆಸರಿನ ಮೂಲಕ ಸಸಿ ನೆಡುವುದರ ಮೂಲಕ ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮುಗಿಸಿಕೊಂಡಿದ್ದ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ನಾಡಿನಲ್ಲಿ ಅನಾಥ ಎನ್ನುವ ಪದವನ್ನು ಅಳಿಸಿ ಹಾಕುವುದೇ ಕಾರುಣ್ಯಾಶ್ರಮದ ಸಂಕಲ್ಪ ಕಲ್ಯಾಣ ಕರ್ನಾಟಕದಲ್ಲಿ ಅದೆಷ್ಟೋ ಅನಾಥ ಜೀವಿಗಳಿಗೆ ದಾನಿಗಳ ಸಹಾಯ ಸಹಕಾರದಿಂದ ಆಶ್ರಯ ನೀಡುತ್ತಿದ್ದೇವೆ ಜಂಗಮರಾಗಿ ಮನೆ ಮನೆಗೆ ಜೋಳಿಗೆ ಹಾಕುವುದರ ಮೂಲಕ ಅದೆಷ್ಟೋ ಕಷ್ಟಗಳ ಮಧ್ಯೆ ಈ ಆಶ್ರಮವನ್ನು ಮುನ್ನಡೆಸುತ್ತಿದ್ದೇವೆ ಈ ಆಶ್ರಮ ಸರ್ವ ಸಮಸ್ತ ಸಮಾಜದ ಸಿಂಧನೂರಿನ ಆಸ್ತಿ ಇಲ್ಲಿ ಆಶ್ರಯ ಪಡೆದ ಜೀವಿಗಳು ಕೂಡ ಒಂದಾನೊಂದು ಕಾಲದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಿದ ಹಿರಿಯ ಜೀವಿಗಳು ತಾವು ಮನುಷ್ಯರು ಎಂದು ಅರಿವಿಲ್ಲದಂತೆ ವಾಸಿಸಿರುವ ಇಲ್ಲಿನ ಜೀವಿಗಳಿಗೆ ಇನ್ನು ಹೆಚ್ಚಿನ ಸಹಾಯದ ಅವಶ್ಯಕತೆ ಇದೆ ಇಂದು ಪುಣ್ಯರಾಧನೆಯನ್ನು ನೆರವೇರಿಸಿರುವ ಯಡಿಯೂರು ಮಠ ಕುಟುಂಬ ತಮ್ಮ ಇಡೀ ಜೀವನವನ್ನೇ ಇಂತಹ ಅನಾಥರಿಗಾಗಿ ಮೀಸಲಿಟ್ಟಿದೆ ಇಂದಿನ ಈ ಪುಣ್ಯ ಸ್ಮರಣೆಯ ದಿನ ನಮ್ಮ ಭಾವನಾತ್ಮಕ ಸಂದೇಶಗಳನ್ನು ಸಮಾಜದ ಜೊತೆ ಹಂಚಿಕೊಳ್ಳುತ್ತಿದ್ದೇವೆ ಎಂದು ಕೈಮುಗಿದು ಬೇಡುವುದರ ಮೂಲಕ ಸಾರ್ವಜನಿಕರಲ್ಲಿ ಸಹಾಯಕ್ಕೆ ಮನವಿ ಮಾಡಿಕೊಂಡರು.ಈ ಕಾರ್ಯಕ್ರಮದಲ್ಲಿ ಯಡಿಯೂರು ಮಠ ಕುಟುಂಬದ ಸೊಸೆಯಂದಿರುಗಳಾದ ಮಲ್ಲಮ್ಮ ಮುದುಕಯ್ಯ ಸ್ವಾಮಿ ಯಡಿಯೂರು ಮಠ.ವಾಣಿಶ್ರೀ ವೀರೇಶ ಯಡಿಯೂರ ಮಠ.ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ ಇಂದುಮತಿ ಏಕನಾಥ. ಮರಿಯಪ್ಪ. ಬಸವರಾಜ ಸ್ವಾಮಿ ಹಚೋಳ್ಳಿ. ಶರಣಮ್ಮ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ