ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂತೋಷ ಅಂಗಡಿಯವರ ಸಮಾಜ ಪರ ಕಾರ್ಯಗಳು ಎಲ್ಲರ ಪ್ರೀತಿಗೆ ಪಾತ್ರವಾಗಿವೆ- ಕೆಪೆಕ್ ಅಧ್ಯಕ್ಷ. ಕೆ.ವಿರುಪಾಕ್ಷಪ್ಪ

ಸಿಂಧನೂರು//ಮಾ.21.ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ನ ರಾಜ್ಯಾಧ್ಯಕ್ಷರಾದ ಸಂತೋಷ ಅಂಗಡಿ ಅವರ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು ಅನ್ನದಾನೇಶ್ವರ ಸ್ವಯಂ ಪ್ರೇರಿತ ರಕ್ತ ಕೇಂದ್ರ ಸಿಂಧನೂರು ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರ ಆಶ್ರಮದಲ್ಲಿನ ವೃದ್ಧರಿಗೆ ಮಹಾಪ್ರಸಾದ ಸೇವೆ ಹಾಗೂ ಆಶಾಕಿರಣ ಬಡ ಮಕ್ಕಳ ಅನಾಥ ಮಕ್ಕಳ ವಸತಿ ಶಾಲೆಯಲ್ಲಿನ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮತ್ತು ಸಮಾಜ ಸೇವಕರುಗಳಾದ ಮತ್ತು ಪಾಟೀಲ್ ಉಸ್ಮಾನ್ ಷಾ.ಮಕಾಂದಾರ್. ಸುಜಾತ ಹಿರೇಮಠ ಭಾರತಿ ಗುಡದೂರು ಇವರುಗಳಿಗೆ ವಿಶೇಷ ಸನ್ಮಾನ ಮಾಡುವುದರ ಮೂಲಕ ನೆರವೇರಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಕೆಫೆಕ್ ಅಧ್ಯಕ್ಷರಾದ ಕೆ.ವಿರೂಪಾಕ್ಷಪ್ಪ ಮಾತನಾಡಿ ಸಂತೋಷ ಅಂಗಡಿಯವರ ಸಮಾಜ ಪರ ಕಾರ್ಯಕ್ರಮಗಳು ಜನರ ಪ್ರೀತಿಗೆ ಪಾತ್ರವಾಗಿವೆ ಹುಟ್ಟುಹಬ್ಬವನ್ನು ಪ್ರತಿವರ್ಷ ವಿಭಿನ್ನ ರೀತಿಯಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದರ ಮೂಲಕ ಆಚರಿಸಿಕೊಳ್ಳುವುದು ನನಗೆ ಬಹಳ ಖುಷಿ ಅನಿಸುತ್ತದೆ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಸಂತೋಷ ಅಂಗಡಿಯವರ ಕೊಡುಗೆ ಅಪಾರವಾಗಿದೆ ಇಂತಹ ಯುವ ಶಕ್ತಿ ನಮ್ಮ ಸಿಂಧನೂರಿನಲ್ಲಿ ನೊಂದು ಬೆಂದವರ ಬಾಳಿಗೆ ಬೆಳಕಾಗಿ ಒಗ್ಗಟ್ಟಿನಿಂದ ಮಾಡುತ್ತಿರುವುದು ನಮ್ಮ ಸಿಂಧನೂರಿನ ಗೌರವವನ್ನು ಹೆಚ್ಚಿಸುತ್ತದೆ ನೊಂದವರ ನಾಡಿಮಿಡಿತವಾಗಿರುವ ಈ ಕಾರುಣ್ಯ ಕುಟುಂಬಕ್ಕೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು ಸಹಾಯ ಸಹಕಾರ ನೀಡುವುದರ ಮೂಲಕ ನಮ್ಮ ಸಿಂಧನೂರಿನ ಕರುಣಾಮಯಿ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಸಂತೋಷ ಅಂಗಡಿಯವರಿಗೆ ಯಾವಾಗಲೂ ನಮ್ಮ ಕಡೆಯಿಂದ ಸಹಕಾರ ಇವರ ಸಾಮಾಜಿಕ ಜೀವನ ಸುಗಮವಾಗಿ ಸಾಗಲೆಂದು ನಾನು ಹಾರೈಸುತ್ತಿದ್ದೇನೆ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ರಕ್ತದಾನದ ಅವಶ್ಯಕತೆಯ ಬಗ್ಗೆ ಅರಿತುಕೊಂಡಿರುವ ಸಂತೋಷ ಅಂಗಡಿ ಅದೆಷ್ಟೋ ರೋಗಿಗಳ ಜೀವಿಗಳ ಜೀವ ಉಳಿಸಲು ಕಾರಣನಾಗಿದ್ದಾನೆ ಎಂದು ಮಾತನಾಡಿದರು. ನಂತರ ಮಾತನಾಡಿದ ಸಂತೋಷ ಅಂಗಡಿ ನನ್ನ ಹುಟ್ಟುಹಬ್ಬ ಇಂತಹ ಗಣ್ಯರ ಆಚರಿಸಿಕೊಳ್ಳುವುದು ನನಗೆ ಖುಷಿ ಎನಿಸುತ್ತದೆ ಇವರೆಲ್ಲರ ಶುಭ ಹಾರೈಕೆ ಸಾಕಾರ ಯಾವತ್ತಿಗೂ ಕೂಡ ನನ್ನ ಮೇಲಿರಲಿ ಇಂದಿನ ಹುಟ್ಟುಹಬ್ಬದ ದಿನ ನನಗೆ ಶುಭ ಹಾರೈಸಿದ ಎಲ್ಲರಿಗೂ ನನ್ನ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ನಿಂದ ಅಭಿನಂದನೆಗಳು ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅನ್ನದಾನೇಶ್ವರ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಂಸ್ಥಾಪಕರಾದ ವೀರನಗೌಡ ಪಾಟೀಲ್ ತೋಟಗಂಟಿ. ಎನ್ ಶಿವನಗೌಡ ಗೋರೆಬಾಳ. ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರುಮಠ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಿದ್ದು ಹೂಗಾರ. ಸಿಂಧನೂರು ವಿಧಾನಸಭಾ ಕ್ಷೇತ್ರದ ಆಪ್ ಪಕ್ಷದ ಅಭ್ಯರ್ಥಿಯಾದ ಸಂಗ್ರಾಮ ನಾರಾಯಣ ಕಿಲ್ಲೆದ್. 27 ನೇ ಬಾರಿ ರಕ್ತದಾನ ಮಾಡಿದ ರವಿಕುಮಾರ್ ಮಸ್ಕಿ. ಮನೋಜ್. ಶಿವಕುಮಾರ್ ಮಸ್ಕಿ. ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಮೋಹನ್ ಗೌಡ. ರವಿ ಅಂಗಡಿ ಬಸವರಾಜ ಸಾಲಗುಂದ ಮಹಾಂತೇಶ ಉಪ್ಪಾರ ಮಹಮದ್ ಫಯಾಜ್. ವಿನಯ್ ಹಿರೇಮಠ ಸಂತೋಷ ಹಿರೇಮಠ ಚನ್ನಬಸವ ಉಪನ್ಯಾಸಕರು ಪಾಟೀಲ ಅಕಾಡೆಮಿ ಸಿಂಧನೂರು. ಮತ್ತು ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಇಂದುಮತಿ ಸುಜಾತ ಹಿರೇಮಠ ಮರಿಯಪ್ಪ ಶರಣಮ್ಮ. ಹಾಗೂ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸಂತೋಷ ಅಂಗಡಿಯವರ ಸ್ನೇಹ ಬಳಗ ಮತ್ತು ಅಭಿಮಾನ ಬಳಗದ ಹಲವಾರು ಮುಖಂಡರು ಭಾಗವಹಿಸಿದ್ದರು
ವರದಿ// ವೆಂಕಟೇಶ.H. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ