ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆರಾಧ್ಯ ದೈವ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ

ಚನ್ನಗಿರಿ: ದೇವರಹಳ್ಳಿ ಗ್ರಾಮದ ಆರಾಧ್ಯ ದೈವ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ಚನ್ನಗಿರಿ: ದೇವಾಲಯಗಳ ಗ್ರಾಮವೆಂದು ಹೆಸರನ್ನು ಪಡೆದುಕೊಂಡಿರುವ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಆರಾಧ್ಯ ದೈವ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಏ. ೭ರಂದು ಬೆಳಿಗ್ಗೆ ೬.೩೦ ಕ್ಕೆ ಅತ್ಯಂತ ಅದ್ಧೂರಿಯಾಗಿ ಶುಕ್ರವಾರ ನಡೆಯಿತು.
ಪ್ರತಿ ರ‍್ಷ ಏಫ್ರಿಲ್ ತಿಂಗಳಲ್ಲಿ ಬರುವ ‘ದವನದ ಹುಣ್ಣಿಮೆ’ ಯಾದ ಮರು ದಿನ ದಿನ ಅಂದರೆ ಶುಕ್ರವಾರ ಲಕ್ಷ್ಮೀರಂಗನಾಥ ಸ್ವಾಮಿ ಉತ್ಸವ ಮರ‍್ತಿಯನ್ನು ವಿವಿಧ ಕಲಾ ತಂಡಳ ಮೇಳದೊಂದಿಗೆ ಬೆಟ್ಟದ ಮೇಲೆ ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತರು ಲಕ್ಷ್ಮೀ ರಮಣ ಗೋವಿಂದ, ಗೋವಿಂದಾ ಎಂಬ ಘೋಷಣೆಗಳನ್ನು ಕೂಗುತ್ತಾ ರಥವನ್ನು ೧ ಕಿಮೀ ಎತ್ತರದಲ್ಲಿರುವ ಬೆಟ್ಟದ ಮೇಲಿಂದ ಕೆಳಗಡೆಗೆ ಎಳೆದುಕೊಂಡು ಬರಲು ಪ್ರಾರಂಭಿಸಿದರು.
೧ ಕಿಮೀ ಎತ್ತರದ ಮೇಲಿಂದ ರಥವನ್ನು ಕೆಳಗಡೆಗೆ ಎಳೆದುಕೊಂಡು ಬರುವ ದೃಶ್ಯವನ್ನು ನೋಡಲು ೧೫ ಸಾವಿರಕ್ಕಿಂತ ಹೆಚ್ಚು ಭಕ್ತರು ಬೆಳ್ಳಂ ಬೆಳಿಗ್ಗೆಯೇ ಸೇರಿದ್ದರು. ರಥವನ್ನು ಕೆಳಗಡೆಗೆ ಎಳೆದುಕೊಂಡು ಗ್ರಾಮದ ರಥ ಬೀದಿಯಲ್ಲಿ ಸಾಗಿ ನಂತರ ಮತ್ತೆ ಬೆಟ್ಟದ ಮೇಲಕ್ಕೆ ರಥವನ್ನು ಎಳೆದುಕೊಂಡು ಹೋದರು. ಇದೇ ದಿನ ರಾತ್ರಿ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಕೂಡಾ ನಡೆಯಿತು.
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಶುಕ್ರವಾರ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು.
-ಮಂಜಪ್ಪ ಟಿ.ಆರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ