ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೆಡಿಎಸ್ ಪಕ್ಷ ತೊರೆದ-ಯುವ ಮುಖಂಡ ಮಂಜುನಾಥ ಗಾಣಿಗೇರ

ರಾಯಚೂರು//ಏ12.ಸಿಂಧನೂರು ವಿಧಾನಸಭಾ ಕ್ಷೇತ್ರದ ರಣರಂಗದಲ್ಲಿ 2023 ಚುನಾವಣೆಯ ರಾಜಕೀಯವಾಗಿ ಅನೇಕ ಬದಲಾವಣೆ ಆಗುತ್ತಿವೆ,ಕೆಲವು ದಿನಗಳ ಹಿಂದೆ ತಾಲೂಕಿನ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಯುವ ಮುಖಂಡರಾದ ಶಿವು ಹೀರೆಮಠ ಜೆಡಿಎಸ್ ಪಕ್ಷ ತೊರೆದರು ಅದೆ ರೀತಿಯಾಗಿ ಇಂದು ತಾಲೂಕಿನ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕೆ.ಕರಿಯಪ್ಪ ಆಯ್ಕೆ ಬೆನ್ನಲ್ಲೆ , ಸಿಂಧನೂರು ತಾಲೂಕಿನ ಜೆಡಿಎಸ್ ನಗರ ಘಟಕ ಸಾಮಾಜಿಕ ಜಾಲತಾಣ ಅಧ್ಯಕ್ಷ ಮಂಜುನಾಥ ಗಾಣಿಗೇರ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಅವರು ಮಾತನಾಡಿ,ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ.ಯುವಜನತೆ ಪಕ್ಷದ ಸಂಘಟನೆ, ಬೆಳೆವಣಿಗೆಯಲ್ಲಿ ಕ್ರಿಯಾಶೀಲಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಪಕ್ಷಾತೀತವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಜೆಡಿಎಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ ಇದು ವರ್ಷಗಳಿಂದ ನಡೆದುಕೊಂಡು ಬಂದಿದೆ ಅಧಿಕಾರ ಸಿಕ್ಕ ನಂತರ ನಾಯಕರಿಗೆ ಜನರ ಭಾವನೆಗಳಿಗೆ ಮಹತ್ವವಿಲ್ಲ ಅನುಭವಿ ರಾಜಕಾರಣಿಗಳ ನಡೆಗಳ ಬಗ್ಗೆ ನಾವೇಕೆ ಮೌನವಹಿಸುತ್ತೇವೆ?
ಇದರಿಂದ ಸಮಾಜವೂ ಹಿಂದುಳಿದಿದೆ ಹಿಂದಿನ ನಾಯಕರು ಸಮಾಜದಲ್ಲಿ ಮೌಲ್ಯಗಳಿಗಾಗಿ ಬದುಕಿದ್ದರು ಮತ್ತು ಈಗ ಅದರ ಅರ್ಥ ಬದಲಾಗುತ್ತಿದೆ ಆದರೆ ನನಗೆ ಜೆಡಿಎಸ್ ಪಕ್ಷದಲ್ಲಿ ಯಾವುದೇ ಸ್ಥಾನ- ಮಾನ ನೀಡಿಲಿಲ್ಲ ಹಾಗೂ ನಮ್ಮಂತ ಯುವ ಮುಖಂಡರನ್ನು ಚುನಾವಣೆಗೆ ಮಾತ್ರ ವಿಶೇಷವಾಗಿ ಬಳಸಿಕೊಂಡು ಗೆದ್ದ ನಂತರ ಯಾವುದೆ ಪಕ್ಷದ ಕೆಲಸಕ್ಕೆ ನನ್ನನು ನಿರ್ಲಕ್ಷಿದ್ದಾರೆ ಎಂಬ ನೋವಿದೆ ಎಂದು ಕರುನಾಡು ಕಂದ ಪತ್ರಿಕೆಗೆ ತಿಳಿಸಿದರು,ಯುವ ಮುಖಂಡ ಮಂಜುನಾಥ ಗಾಣಿಗೇರ ತನ್ನದೇ ಆದ ಯುವ ಪಡೆ ಹೊಂದಿದ್ದಾನೆ ಹಾಗೂ ತಾಲೂಕಿನ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಆದರೆ ಅವರಿಗೆ ಯಾವ ಪಕ್ಷಕ್ಕೆ ಒಲವಾಗಿದೆ ಎಂದು ತಿಳಿಸಲಿಲ್ಲ.
ವರದಿ// ವೆಂಕಟೇಶ.H. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ