ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರುನಾಡ ಕಂದ ವರದಿ ಫಲಶೃತಿ:ತಾಲೂಕಾ ಆಸ್ಪತ್ರೆ ಲಂಚಾವತಾರದ ಕುರಿತು ಇಲಾಖಾ ತನಿಖೆ

ಉತ್ತರ ಕನ್ನಡ/ಮುಂಡಗೋಡ:ದಿನಾಂಕ 10/04/2023 ರಂದು “ತಾಲೂಕ ಆಸ್ಪತ್ರೆಯ ಲಂಚಾವತಾರ”ಕರುನಾಡ ಕಂದ ಜಾಲತಾಣದ ವರದಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮುಂಡಗೋಡ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ್ ವಿರುದ್ಧ ಮಂಗಳವಾರ ಇಲಾಖಾ ತನಿಖೆಯನ್ನು ಕೈಗೊಂಡು,ಪ್ರಾಥಮಿಕ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.ಇದೇ ವೇಳೆ ಆಸ್ಪತ್ರೆಗೆ ಬಂದ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ತಾಲೂಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರ ಬಳಿ ಘಟನೆಯ ಕುರಿತು ಮಾಹಿತಿ ಕಲೆಹಾಕಿದರು.

ಮತ್ತೊಂದು ಅಕ್ರಮ/ಅವ್ಯವಸ್ಥೆ ಬಯಲಿಗೆ:ತಾಲೂಕ ಆಸ್ಪತ್ರೆ ಮುಂಡಗೋಡದಲ್ಲಿ ಕಳೆದ 5 ತಿಂಗಳಿನಿಂದ ಬಳಕೆ ಮಾಡಲಾಗದೆ ಇಟ್ಟಿದ್ದ LFA ಮತ್ತು RFA ಪರೀಕ್ಷೆ ನಡೆಸುವ ಆಧುನಿಕ ಪರೀಕ್ಷಕವನ್ನು ಬಳಕೆ ಮಾಡದೇ ರೋಗಿಗಳಿಗೆ ಖಾಸಗಿ ಲ್ಯಾಬ್ ಗಳಲ್ಲಿ ಟೆಸ್ಟ್ ಮಾಡಿಸಿಕೊಂಡು ಬರುವಂತೆ ನೋಡಿಕೊಳ್ಳುತ್ತಿದ್ದ ಬಗ್ಗೆ ವಿವರಣೆ ಪಡೆದ ಅಧಿಕಾರಿಗಳ ತಂಡ ಕೂಡಲೇ ಟೆಸ್ಟಿಂಗ್ ಮೆಷಿನ್ ಗಳನ್ನು ಇನ್ಸ್ಟಾಲ್ ಮಾಡಿ ಬಳಕೆ ಮಾಡುವಂತೆ ನಿರ್ದೇಶನ ನೀಡಿತು ಹಾಗೂ NHM ಇಲಾಖೆಯ ಸಿಬ್ಬಂದಿಯಾಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಬೇಕಾದ ರಕ್ತ ತಪಾಸಣೆಗೆ 1,800 RS ಪಡೆದ ಜಗದೀಶ್ ಕಾನಡೆ ಎಂಬ ಲ್ಯಾಬ್ ಟೆಕ್ನಿಷಿಯನ್ ಗೆ ಅಧಿಕಾರಿಗಳು ಛೀಮಾರಿ ಹಾಕಿ, ಇನ್ನೊಮ್ಮೆ ಈ ರೀತಿಯ ಘಟನೆ ಮರುಕಳಿಸಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಪರಿಶೀಲನೆ ವೇಳೆ ವಾಸ್ತವ ಸ್ಥಿತಿ ಅರಿತ ಅಧಿಕಾರಿಗಳ ತಂಡ ಸೂಕ್ತ ಕ್ರಮಕೈಗೊಳ್ಳುವುದಾಗಿ ಕರುನಾಡ ಕಂದ ಪತ್ರಿಕೆಗೆ ಮಾಹಿತಿ ನೀಡಿದರು.

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

4 Responses

  1. Kariyappakkari @gmail com,,,,, address,,, ಚಿಕ್ಕಬೆನ್ನೂರು ಪೋಸ್ಟ್,,,,,, ಚೀಳಂಗಿ ಗ್ರಾಮ,,, ಗಂಟೆ ಆಂಜನೇಯ ಟೆಂಪಲ್ ಹತ್ತಿರ

Leave a Reply

Your email address will not be published. Required fields are marked *

ಇದನ್ನೂ ಓದಿ