ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೇರಟಗಿ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ ಆಚರಣೆ


ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಬಸವ ಜಯಂತಿಯ ಆಚರಣೆ ಮಾಡಲಾಯಿತು ಕಾರ್ಯಕ್ರಮದ ನಿಮಿತ್ಯ ಶರಣರ ಸಂಕಲ್ಪದಂತೆ ದಾಸೋಹ ಸೇವೆ ಏರ್ಪಡಿಸಲಾಗಿತ್ತು ಜೇರಟಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಪ್ರಸಾದ ಸೇವನೆಯ ನಂತರ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಶ್ರೀ ಮ.ನಿ. ಪ್ರ. ಮಾಂತ ಮಹಾ ಸ್ವಾಮಿಗಳು ಕಾಯಕ ಮತ್ತು ದಾಸೋಹಕ್ಕೆ ಗ್ರಾಮ ಪ್ರಸಿದ್ಧವಾಗಿದ್ದು 12 ಶತಮಾನದ ಶರಣರು ಕಲ್ಯಾಣ ಕ್ರಾಂತಿಯ ನಂತರ ಉಳವಿಗೆ ತೆರಳುವ ಮಾರ್ಗ ಮಧ್ಯ ನಮ್ಮ ಜೇರಟಗಿ ಗ್ರಾಮದಲ್ಲಿ ಶರಣರ ದಂಡು ಸಾಕಷ್ಟುದಿನ ತಂಗಿದ್ದರು. ಅದು ಇತಿಹಾಸ ಪುಟಗಳಲ್ಲಿ ಕೂಡ ದಾಖಲಾಗಿದೆ ಎಂದು ತಿಳಿಸಿದರು ಅದರಂತೆ ಗ್ರಾಮದ ಪ್ರತಿಯೊಬ್ಬರು ಯುವಕರು ಕೂಡ ಶರಣ ಪರಂಪರೆಯನ್ನು ಪಾಲಿಸಿಕೊಂಡು ಬರಬೇಕು ಹಸಿದು ಬಂದವರಿಗೆ ದಾಸೋಹ ಸೇವೆ ನಿತ್ಯ ನಿರಂತರ ಗ್ರಾಮದಲ್ಲಿ ನಡೆಯಬೇಕು ಮರಿ ಕಲ್ಯಾಣ ಎಂದು ನಾಮಾಂಕಿತವಾಗಿರುವ ನಮ್ಮ ಊರ ಪರಂಪರೆ ಎಲ್ಲರಿಗೂ ಮಾದರಿಯಾಗಬೇಕೆಂದು ಎಂದು ನುಡಿದರು ಗ್ರಾಮದ ಪ್ರಮುಖರೊಂದಿಗೆ ಗ್ರಾಮದ ಎಲ್ಲಾ ಯುವಕರು ಮತ್ತು ಗೆಳೆಯರ ಸಹಕಾರದೊಂದಿಗೆ ಮೆರವಣಿಗೆ ಅತಿ ವಿಜ್ರಂಬಣೆಯಿಂದ ಜರುಗಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ