ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಲ್ಕಿ ಸಮಾವೇಶಕ್ಕೆ ಮೋದಿಜಿ

ದಕ್ಷಿಣ ಕನ್ನಡ:ಕೊಲ್ನಾಡ್, ಮುಲ್ಕಿ,ಮೇ 02, 2023 : ಭಾರತದ ಇತಿಹಾಸದಲ್ಲಿ ಮಂಗಳೂರಿನ ಹೊರವಲಯದಲ್ಲಿ ದೇಶದ ಪ್ರಧಾನಿಯೊಬ್ಬರು ಸಾರ್ವಜನಿಕ ಸಮಾವೇಶಕ್ಕೆ ಆಗಮಿಸಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡುವುದು ಹೊಸ ತೊಂದು ದಾಖಲೆಯೇ ಆಗಿದೆ. ವಿಶ್ವ ನಾಯಕ ಪ್ರಧಾನಿ ಶ್ರೀ. ನರೇಂದ್ರ ಮೋದಿಜಿ ಯವರು ಇಂದು ಬೆಳಗ್ಗೆ 10:30ಕ್ಕೆ ಮುಲ್ಕಿಯ ಕೊಲ್ನಾಡಿನಲ್ಲಿ ಸುಸಜ್ಜಿತವಾಗಿ ವ್ಯವಸ್ಥಿತಗೊಂಡ ಸಮಾವೇಶಕ್ಕೆ ಆಗಮಿಸಿ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಸಭಾಂಗಣ, ಮೈದಾನ, ಮೇಲ್ಚಾವಣಿ ಮತ್ತು ಹೆಲಿಪ್ಯಾಡ್ ನಿರ್ಮಾಣಗೊಳಿಸಲಾಗಿದೆ. ಕಳೆದ ಎರಡು ವಾರಗಳಿಂದ ಎಲ್ಲ ಸಜ್ಜುಗೊಂಡಿದ್ದು,ನಿನ್ನೆ ಕೊನೆಯ ಹಂತದ ತಯಾರಿಗಾಗಿ ಪಕ್ಷದ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ವ್ಯವಸ್ಥೆಗೆ ಪೂರ್ಣ ರೂಪ ಕೊಟ್ಟು ಕಾರ್ಯಕ್ರಮದ ಯಶಸ್ಸಿಗಾಗಿ ಪೂರ್ಣ ಸಮಯ ಮೀಸಲಿರಿಸಿದರು.
ಸಮಾವೇಶದ ಸ್ಥಳದಲ್ಲಿ ಬಿ ಜೆ ಪಿ ರಾಯ ವಕ್ತಾರ ಶ್ರೀ ಗಣೇಶ್ ಕಾರ್ಣಿಕ್, ಮೂಡಬಿದರೆ ಮಂಡಲ ಅಧ್ಯಕ್ಷ ಶ್ರೀ ಸುನಿಲ್ ಆಳ್ವ, ಮುಡಾ ಅಧ್ಯಕ್ಷ ಶ್ರೀ ರವಿಶಂಕರ ಮಿಜಾರ್, ಶ್ರೀ ಜಗದೀಶ್ ಅಧಿಕಾರಿ, ವಿಶ್ವ ಹಿಂದೂ ಪರಿಷತ್ ನಾಯಕ ಶ್ರೀ ಜಗದೀಶ್ ಶೇಣವ, ಶ್ರೀ ಶೊಬೇಂದ್ರ ಸಸಿಹಿತ್ಲು ಮತ್ತು ಬಿ ಜೆ ಪಿ ಯ ಹಲವಾರು ಸ್ಥಾನೀಯ ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ