ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಂಗ್ರೇಸ್ ಅಭಿಮಾನಿಗಳಿಂದ 17ಕಿ.ಮೀ ದೀರ್ಘದಂಡ ನಮಸ್ಕಾರ

ವಿಜಯಪುರ ಇಂಡಿ ತಾಲೂಕಿನ ಭುಯ್ಯಾರ ಗ್ರಾಮದ ಕಾಂಗ್ರೇಸ್ ಪಕ್ಷದ ಅಭಿಮಾನಿಗಳಾದ ನಾಗೇಶ ತಳಕೇರಿ,ಗುತ್ತಿಗೆದಾರರು. ಗುರು ಅಜಗೊಂಡ,ಗಂಗು ನಾಯಕೋಡಿ, ಪರಶುರಾಮ ಶಿವಶರಣ, ಪರಶುರಾಮ ಸಿಂಗೆ, ಸಂತೋಷ ಅರಕೇರಿ, ಜಗು ಹಿರೇಕುರುಬರ, ವಿಜಯ ನಾಯಕೋಡಿ, ಅಕ್ಷಯ ಪರೀಟ, ನಾಗಪ್ಪ ಸಿಂಧೆ, ವಿಶಾಲ ಸಿಂಗೆ,ಶರಣಬಸಪ್ಪ ಕಟ್ಟಿಮನಿ. ಮುಂತಾದವರು ಸೇರಿಕೊಂಡು ಅಭಿವೃದ್ಧಿಯ ಹರಿಕಾರ, ಸೋಲಿಲ್ಲದ ಸರದಾರ,ಭಾಗ್ಯವಿಧಾತ,ಬಡವರ ಕಣ್ಮಣಿ,ದೀನದಲಿತರ ಆಶ್ರಯ ರೂವಾರಿ ಆಗಿರುವ ಶ್ರೀ ಯಶವಂತರಾಯಗೌಡ ಪಾಟೀಲರು ಈ ಚುನಾವಣೆಯಲ್ಲಿ ವಿಜಯಿಶಾಲಿಯಾಗಬೇಕು ಅಂತ ಈ ಎಲ್ಲಾ ಅಭಿಮಾನಿಗಳು ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರಿಗೆ ಹರಕೆ ಹೊತ್ತು ನಾವು ಭುಯ್ಯಾರ ದಿಂದ ಲಚ್ಯಾಣದ ಶ್ರೀ ಮಠದವರೆಗೆ ದಂಡವತ ನಮಸ್ಕಾರ ಸಲ್ಲಿಸುವುದಾಗಿ ಬೇಡಿಕೊಂಡಿದ್ದರು. ಅದರಂತೆ ಅಭಿಮಾನಿಗಳ ಆಶೆ ಕೈಗೊಡಿದೆ ಅದಕ್ಕಾಗಿ ತಮ್ಮ ಹರಕೆ ತೀರಿಸಲು ಭುಯಾರ ಗ್ರಾಮದಿಂದ ಲಚ್ಯಾಣದವರೆಗೆ ಸುಮಾರು 17 ಕಿ ಮೀ ಗಳು ದೂರದವರೆಗೆ ದಂಡವತ ನಮಸ್ಕಾರ ಹಾಕಲು ನಸುಕಿನ 4-00 ಗಂ ಗೆ ಪ್ರಾರಂಭಿಸಿ ಬೆಳ್ಳಗೆ 10:00 ಗಂಟೆಯವರೆಗೆ ಮುಕ್ತಾಯಗೊಳಿಸಿದರು ಅದೆಷ್ಟೋ ಜನರು ಜಯಘೋಷ ಹಾಕುತ್ತ ಬೆಂಗಾವಲಿಗರಾಗಿ ಸಹಾಯ ಮಾಡಿದರು.ಇವರ ಅಭಿಮಾನವನ್ನು ಕಂಡು ಶಾಸಕರಾದ ಯಶವಂತ ರಾಯಗೌಡ ಪಾಟೀಲರ ಸಹೋದರರಾದ ಬಸವಂತರಾಯಗೌಡ ಪಾಟೀಲರು ಅತ್ಯಾನಂದಗೊಂಡು ಅತೀವ ಸಂತೋಷದಿಂದ ಈ ಅಭಿಮಾನಿಗಳಿಗೆ ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಶ್ರೀ ಮಠದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ವರದಿ-ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ