ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಜ್ಯ ಪ್ರಶಸ್ತಿಯನ್ನು ತಂದೆ ತಾಯಿಗಳ ಸಮಾದಿ ಮೇಲಿಟ್ಟು ಅರ್ಪಣೆ ಮಾಡಿದ ವನಸಿರಿ ಅಮರೇಗೌಡ

2023ನೇ ಸಾಲಿನ ಅರಣ್ಯ,ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ವತಿಯಿಂದ ನೀಡಲಾಗುವ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಮ್ಮ ತಂದೆ ತಾಯಿಗಳ ಸಮಾಧಿ ಮೇಲಿಟ್ಟು ಪ್ರಶಸ್ತಿಯನ್ನು ತಂದೆ ತಾಯಿಗಳಿಗೆ ಅರ್ಪಣೆ ಮಾಡಿದರು.
ಸಿಂಧನೂರಿನ ಮಲ್ಲಾಪೂರ ಗ್ರಾಮದ ಅಮರೇಗೌಡ ಅವರು 2014ರಲ್ಲಿ ತಮ್ಮ ತಂದೆತಾಯಿಗಳನ್ನು ಕಳೆದುಕೊಂಡು ತುಂಬಾ ದುಃಖಿತರಾಗಿದ್ದರು ಅವರು ಸ್ಮರಣಾರ್ಥವಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕೆಂದು ನಿರ್ದಾರ ಮಾಡಿದರು ಆಗಿನಿಂದ ಇಲ್ಲಿಯವರೆಗೆ ಪ್ರತಿ ದಿನ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರಲ್ಲೇ ತಂದೆ ತಾಯಿಗಳನ್ನ ನೆನೆಯುತ್ತಿದ್ದಾರೆ.ಅವರ ಆರ್ಶೀವಾದದಿಂದ ಈ ವರ್ಷ ರಾಜ ಪರಿಸರ ಪ್ರಶಸ್ತಿ ಲಭಿಸಿತು. ಈ ಶುಭ ವಿಚಾರದೊಂದಿಗೆ ಖುಷಿಯಾಗಿ ತನ್ನ ತಂದೆತಾಯಿಗಳಿಗೆ ಈ ಪ್ರಶಸ್ತಿಯನ್ನು ಅರ್ಪಿಸಬೇಕೆಂದು ತಂದೆ ತಾಯಿಗಳ ಸಮಾದಿಗೆ ಪೂಜೆ ಸಲ್ಲಿಸಿ ಈ ಪ್ರಶಸ್ತಿ ಇಟ್ಟು ನಮಸ್ಕರಿಸಿ ಅರ್ಪಣೆ ಮಾಡಿದರು. ಈ ಒಂದು ಪ್ರಶಸ್ತಿಯನ್ನು ನನ್ನ ತಂದೆತಾಯಿಗಳಿಗೆ ಎಲ್ಲ ಪರಿಸರ ಪ್ರೇಮಿಗಳಿಗೆ,ವನಸಿರಿ ಫೌಂಡೇಶನ್ ಸದಸ್ಯರಿಗೆ ಇವತ್ತು ಈ ಒಂದು ಅರ್ಪಿಸುತ್ತಿದ್ದೇನೆ ಮತ್ತು ಈ ಪ್ರಶಸ್ತಿಯ 1ಲಕ್ಷ ರೂಪಾಯಿಗಳನ್ನು ಇದೇ ಪರಿಸರ ಸೇವೆಗೆ ಮೀಸಲಿಡುತ್ತೇನೆ ಎಂದು ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ