ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಒಂಬತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಶಾಸಕ ರುದ್ರಪ್ಪ ಲಮಾಣಿ ಅವರು ಉದ್ಘಾಟಿಸಿದರು ಬಳಿಕ ಮಾತನಾಡಿ ಪ್ರತಿನಿತ್ಯ ಯೋಗ ಅಭ್ಯಾಸ ರೂಡಿಸಿಕೊಂಡರೆ ರೋಗದಿಂದ ಮುಕ್ತಿ ಆಗಬಹುದು ಎಂದರು.ಮಾನಸಿಕ,ದೈಹಿಕ ಸದೃಢತೆ,ದೀರ್ಘಾಯುಷ್ಯ ಹೊಂದಬಹುದು ಪ್ರಾಚೀನ ಕಾಲದಿಂದ ಋಷಿಮುನಿಗಳು ಯೋಗ ಅಭ್ಯಾಸದಿಂದ ನೂರು ವರ್ಷಗಳ ಕಾಲ ಬಾಳಿದ ಉದಾಹರಣೆಗಳಿವೆ ಬಾಲ್ಯದಿಂದಲೇ ಮಕ್ಕಳು ಯೋಗ ಅಭ್ಯಾಸ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ ಎಸ್ ಮುಳ್ಳಳ್ಳಿ,ಡಿ ಎಚ್ ಓ ರಾಘವೇಂದ್ರ ಸ್ವಾಮಿ,ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ. ಸಿ.ನಿಡಗುಂದಿ,ಡಿ.ಡಿ.ಪಿ.ಐ.ಶ್ರೀ ಜಗದೀಶ್ವರ್ ಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಲತಾ ಬಿ ಎಸ್.,ತಹಶೀಲ್ದಾರ್ ಗಿರೀಶ್ ಸ್ವಾದಿ,ತಾಲೂಕ ಆರೋಗ್ಯ ಅಧಿಕಾರಿ ಡಾ.ಪ್ರಭಾಕರ್.,ಕುಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮೌನೇಶ್ವರ ಬಡಿಗೇರ್, ನಗರಸಭೆ ಸದಸ್ಯರಾದ ಶ್ರೀ ಸಂಜೀವ ಕುಮಾರ್ ನೀರಲ್ಗಿ, ಹಾವೇರಿ ಜಿಲ್ಲಾ ವ್ಯಾಪ್ತಿಯ ಆಯುಷ್ ವೈದ್ಯಾಧಿಕಾರಿಗಳು ಆಯುಷ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು,ಯೋಗ ತರಬೇತಿದಾರರು ಉಪಸ್ಥಿತರಿದ್ದರು. ಯೋಗಭ್ಯಾಸವನ್ನು ಜಿಲ್ಲಾ ಯೋಗ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಜಂಬಿಗಿ ನೆರವೇರಿಸಿ ಕೊಟ್ಟರು ತಮ್ಮ ಯೋಗ ಸಂಸ್ಥೆಯಲ್ಲಿ ಅನುಸೂಯ ಚೆಲ್ಲಾಳ್ ಎಂಬ ವಿದ್ಯಾರ್ಥಿನಿ ಮಾಡಿದ ಸಾಧನೆ ಕುರಿತು ವೇದಿಕೆಯ ಮೇಲೆ ಯೋಗ ಪ್ರದರ್ಶನ ಮಾಡಿಸಿದರು ವಿದ್ಯಾರ್ಥಿನಿಯು ಮೂಲತಃ ಶ್ರವಣ ಅಂಗವಿಕಲತೆ ಹೊಂದಿದವಳು ಆದರೂ ಸಹ ಯೋಗಭ್ಯಾಸದಿಂದ ಮಾತನಾಡುವುದು ಮತ್ತು ಆಲಿಸುವುದು ಕೇಳಿಸುವುದನ್ನು ಕಲಿತಿರುವುದು ಆಶ್ಚರ್ಯಕರವಾದದ್ದು ಎಂದು ಹೇಳಿದರು. ಮತ್ತು ಆಯುಷ್ ಇಲಾಖೆಯಲ್ಲಿ ಯೋಗ ತರಬೇತಿದಾರರಾಗಿ ಕಾರ್ಯನಿರ್ಸುತ್ತಿರುವ ಶ್ರೀ ನವೀನ್ ಕುಮಾರ್ ಹೊಸಳ್ಳಿ ಅವರು ವೇದಿಕೆಯ ಮೇಲೆ ಉತ್ತಮ ಯೋಗ ಪ್ರದರ್ಶನ ನೀಡಿ ಗಣ್ಯ ವ್ಯಕ್ತಿಗಳ ವಿದ್ಯಾರ್ಥಿಗಳ ಒಟ್ಟಾರೆ ಕ್ರೀಡಾಂಗಣದಲ್ಲಿ ನೆರವೇರಿದ ಎಲ್ಲಾ ಜನರ ಗಮನ ಸೆಳೆದರು. ಶಿಕ್ಷಕ ನಾಗರಾಜ ನಡುವಿನ ಮಠ ಕಾರ್ಯಕ್ರಮ ನಿರೂಪಿಸಿದರು.ಡಾಕ್ಟರ್ ರಾಜಶೇಖರ್ ವಂದಿಸಿದರು ಕೊನೆಗೆ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪದಾಧಿಕಾರಿಗಳಿಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ವರದಿ-ರವಿ ಓಲೆಕಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ