ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಅವಮಾನ

ಇಂಡಿ:ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಉಪವಿಭಾಗ ಇಂಡಿಯಲ್ಲಿ ಬಾಬು ಜಗಜೀವನ್ ರಾಮ್ ಅವರ ಫೋಟೋ ವನ್ನು ಗೋಡೆ ಮೇಲಿಂದ ತೆಗೆದು ಉದ್ದೇಶ ಪೂರಕವಾಗಿ ಕಸ ಸಂಗ್ರಹಣೆ ಮಾಡುವ ಸ್ಥಳದಲ್ಲಿ ಸುಮಾರು ಎರಡು ತಿಂಗಳು ಫೋಟೋ ಇಟ್ಟು ದಲಿತ ಬಾಂಧವರಿಗೆ ನೇರವಾಗಿ ಅವಮಾನ ಮಾಡಿರುವ ಇಂಡಿ ತಾಲೂಕ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಚಂದ್ರಶೇಖರ ಕೊಲ್ಲೂರು ಅವರಿಗೆ ಅಮಾನತ್ತು ಮಾಡಬೇಕು ಎಂದು ಪವನ.ನಾ. ಕೊಡಹೊನ್ನ ರಾಷ್ಟ್ರೀಯ ಚರ್ಮಕಾರ ಮಹಾ ಸಂಘ ರಾಜ್ಯ ಅಧ್ಯಕ್ಷರು ಆಗ್ರಹಿಸಿದರು.
ಕಂಪ್ಯೂಟರ್ ಆಪರೇಟರ್ ಆಗಿರುವ ಆರ್. ಎ.ತಡ್ಲಿಗಿ ಇವರಿಗೆ ಕೇಳಿದಾಗ ಆ ಫೋಟೋವನ್ನು ಇಟ್ಟು ಕೇವಲ 4 ದಿನವಾಗಿದೆ ಏಂದು ಹೇಳಿ ದಲಿತ ಮಾಧ್ಯಮದವರಿಗೆ ಹಾರಿಕೆಯ ಉತ್ತರ ನೀಡಿರುತ್ತಾರೆ ಅಷ್ಟೇ ಅಲ್ಲದೆ ಅವರ ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಸೋಮಶೇಖರ್ ಕೊಲ್ಲುರ ಇವರಿಗೆ ಕರೆ ಮಾಡಿದ ದಲಿತ ನಾಯಕ ಪವನ್ ಕೊಡಹೋನ ಅವರು ಮಾತನಾಡಿದಾಗ ಫೋಟೋ ಇಟ್ಟಿರೋದು ಏನ್ ದೊಡ್ ವಿಷಯ ಸರ್ ಹೋಗ್ಲಿ ಬಿಡಿ ಅಂತ ದಲಿತರನ್ನು ಕೀಳಾಗಿ ಮಾತನಾಡಿದ್ದಾರೆ.

ಇದನ್ನು ಖಂಡಿಸಿ ರಾಷ್ಟ್ರೀಯ ಚರ್ಮಕಾರ ಮಹಾಸಂಘ ಹಾಗು ಕಾ.ನಿ.ಪ ಧ್ವನಿ ಸಂಘ ಇಂಡಿ ಜಂಟಿಯಾಗಿ ಎಲ್ಲರೂ ಕೂಡಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದಾರೆ.
ಮೇಲಾಧಿಕಾರಿಗಳು ಸೂಕ್ತವಾದ ತನಿಖೆ ಮಾಡಿ ಕೂಡಲೇ ವಿಸ್ತರಣಾಧಿಕಾರಿ ಚಂದ್ರಶೇಖರ್ ಕೊಲ್ಲೂರ ಅವರಿಗೆ ಅಮಾನತ್ತು ಮಾಡಲು ಆಗ್ರಹಿಸಿದ್ದಾರೆ.

ವರದಿ:ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ