ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜನರ ಆರೋಗ್ಯ ಸರಿಪಡಿಸಲು ದೇವರು ವೈದ್ಯರನ್ನು ಭೂಮಿಗೆ ಕಳುಹಿಸಿದ್ದಾನೆ:ಡಾ.ಅಯ್ಯನಗೌಡ ಟಿ.ಎಚ್.ಓ

ಸಿಂಧನೂರು:ಕರ್ನಾಟಕ ಸರ್ಕಾರ ಪ್ರಾದೇಶಿಕ ಅರಣ್ಯ ವಿಭಾಗ ರಾಯಚೂರು, ಪ್ರಾದೇಶಿಕ ಅರಣ್ಯ ವಲಯ ಮಾನವಿ ಹಾಗೂ ವನಸಿರಿ ಫೌಂಡೇಶನ್ (ರಿ).ರಾಜ್ಯ ಘಟಕ ಸಿಂಧನೂರು ವತಿಯಿಂದ ಸಿಂಧನೂರಿನ ಸರಕಾರಿ ಮಾದರಿಯ ಶಾಸಕರ ಪ್ರಾಥಮಿಕ ಶಾಲೆ ಪಿ.ಡಬ್ಲೂ ಡಿ ಕ್ಯಾಂಪ್ ನಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಸಸಿನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಹಾಗೂ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಸಸಿ ನೆಡುವ ಸಪ್ತಾಹ ನನ್ನ ಗಿಡ ನನ್ನ ಹೆಮ್ಮೆ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಡಾ.ಅಯ್ಯನಗೌಡ ಟಿ.ಎಚ್.ಓ ಅವರು ಮಾತನಾಡಿ ವೈದ್ಯೋ ನಾರಾಯಣ ಹರಿ ಅನ್ನುವಂತೆ ದೇವರು ಈ ಭೂಮಿಯ ಮೇಲೆ ಎಲ್ಲಾ ಕಡೆ ಹೋಗಲಿಕ್ಕೆ ಆಗುವುದಿಲ್ಲ ಎಂದು ಭೂಮಿಯ ಮೇಲಿನ ಜನರ ಆರೋಗ್ಯವನ್ನು ಸರಿಪಡಿಸಲು ವೈದ್ಯರನ್ನು ಕಳುಹಿಸಿರುತ್ತಾನೆ ಅದಕ್ಕೆ ದೇವರು ಮಾಡುವ ಕೆಲಸವನ್ನು ವೈದ್ಯರು ಮಾಡುವುದಕ್ಕೆ ವೈದ್ಯೋ ನಾರಾಯಣ ಹರಿ ಅಂತ ಹೇಳುತೇವೆ.ಪ್ರತಿಯೊಬ್ಬ ವೈದ್ಯರು ತಮ್ಮ ಸರ್ವಸ್ವವನ್ನೂ ಜನರಿಗಾಗಿ ಮಿಸಲಿಟ್ಟಿರುತ್ತಾರೆ ವೈದ್ಯರ ಸೇವೆ ಅತ್ಯುತ್ತಮ ಸೇವೆಯಾಗಿದೆ.ಪ್ರತಿಯೊಬ್ಬ ವಿದ್ಯಾರ್ಥಿಯು ವೈದ್ಯರಾಗಬೇಕು.ಬಡಜನರ ಸೇವೆಗೆ ಮುಂದಾಗಬೇಕು,ಈ ಸಮಾಜದಲ್ಲಿ ವೈದ್ಯರಿಗೆ ಗೌರವ, ಪ್ರೀತಿ ವಿಶ್ವಾಸ ನೀಡಬೇಕಾಗಿದೆ ಇಂತಹ ಒಂದು ಉತ್ತಮವಾದ ಕಾರ್ಯದಲ್ಲಿ ತೊಡಗಿರುವ ಎಲ್ಲಾ ವೈದ್ಯರನ್ನು ಅಮರೇಗೌಡ ಮಲ್ಲಾಪೂರ ಅವರು ಕರೆಸಿ ಸನ್ಮಾನಿಸಿ ರಾಷ್ಟೀಯ ವೈದ್ಯರ ದಿನಾಚರಣೆ ಆಚರಿಸಿರುವುದು ಸ್ವಾಗತಾರ್ಹ ಮತ್ತು ಅಮರೇಗೌಡ ಮಲ್ಲಾಪೂರ ಅವರಿಗೆ ಎಲ್ಲಾ ವೈದ್ಯರ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು.

ನಂತರ ಮಾತನಾಡಿದ ಜನನಿ ಮಕ್ಕಳ ಆಸ್ಪತ್ರೆ ವೈದ್ಯರಾದ ಡಾ.ಚನ್ನಬಸವ ಮಾತನಾಡಿ ದೇವರು ಜಗತ್ತಿನಲ್ಲಿ ಸೃಷ್ಠಿಸುವ ಶಕ್ತಿ ನೀಡಿರುವುದು ಒಂದು ತಾಯಿಗೆ ಮತ್ತೊಂದು ಭೂಮಿ ತಾಯಗೆ ತಾಯಿ ಮಗುವಿಗೆ ಜನ್ಮ ನೀಡಿದರೆ ಈ ಭೂಮಿತಾಯಿ ಗಿಡಮರಗಳಿಗೆ ಜನ್ಮ ನೀಡುತ್ತಿದ್ದಾಳೆ ಇಂತಹ ಒಂದು ಸಂದರ್ಭದ ಅಧುನಿಕತೆಯಲ್ಲಿ ಕೂಡಾ ಅಮರೇಗೌಡ ಮಲ್ಲಾಪೂರ ಅವರು ಕಡಿದು ಹಾಕಿದ ಆಲದ ಮರಕ್ಕೆ ಮರುಜೀವ ನೀಡಿ ಪೋಷಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಹೆತ್ತ ತಾಯಿ ಮತ್ತು ಭೂಮಿತಾಯಿಯ ಋಣ ತೀರಿಸಿದ ಯಾರಾದರೂ ಒಬ್ಬ ವ್ಯಕ್ತಿ ಇವತ್ತಿನ ದಿನದಲ್ಲಿ ಇದ್ದಾರೆ ಎಂದರೆ ಅದು ಅಮರೇಗೌಡ ಮಲ್ಲಾಪೂರ ಅವರು ಎಂದು ಹೇಳಲಿಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ಎಂದು ಡಾ.ಚನ್ನಬಸವ ಜನನಿ ಮಕ್ಕಳ ಆಸ್ಪತ್ರೆ ವೈದ್ಯರು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ವಾರ್ಡಗಳಲ್ಲಿ ಮಕ್ಕಳ ಜಾಥಾ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.ನಂತರ ನುರಿತ ವೈದ್ಯರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರು ಹಾಗೂ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ,ವೈದ್ಯಾಧಿಕಾರಿ ಅಯ್ಯನಗೌಡ ಟಿ.ಎಚ್ ಓ, ಅರಣಾ ಅರಣ್ಯ ಅಧಿಕಾರಿಗಳು,ಮುನಿಸ್ವಾಮಿ ಅರಣ್ಯ ಅಧಿಕಾರಿಗಳು, ಪ್ರವೀಣSDMCಅದ್ಯಕ್ಷರು, ರಷ್ಮಿ ಉಪಾದ್ಯಕ್ಷರು,ಭಾಗ್ಯಶ್ರೀ ಮು.ಗು. ಡಾ.ಚನ್ನಬಸವ ಜನನಿ ಮಕ್ಕಳ ಆಸ್ಪತ್ರೆ ಡಾ.ದೊಡ್ಡಬಸವ ಬಸವ ಮಕ್ಕಳ ಆಸ್ಪತ್ರೆ,ಅವಿನಾಶ್ ದೇಶಪಾಂಡೆ ಜೀವಸ್ಪಂದನ ಟ್ರಸ್ಟ್ ಕಾರ್ಯದರ್ಶಿಗಳು,ಹಾಗೂ ಸಹ ಕಾರ್ಯದರ್ಶಿ ಚನ್ನವೀರಗೌಡ,ಡಾ.ನವೀನ್ ಕುಮಾರ ದಂತ ವೈದ್ಯರು ಸಿಂಧನೂರು,ಆನಂದಿ ಲಾಹೋಟಿ, ಹರ್ಷದ್ ಹತ್ತರ್ ಸನ್ ರೈಸ್ ಕಾಲೇಜು ಪ್ರಾಂಶುಪಾಲರು,ಅಂಬೋಜಿ,ಮಾನಮ್ಮ,ಅಮರಯ್ಯ ಪತ್ರಿಮಠ ಹಾಗೂ ವನಸಿರಿ ಫೌಂಡೇಶನ್ ಸದಸ್ಯರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ