ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಾಗೆವಾಡಿ ಗ್ರಾ.ಪಂ.ನಡೆದ ಹಗರಣಗಳು ಮುಚ್ಚಲು ಅಧಿಕಾರಿಗಳ ಹುನ್ನಾರ

ಸಿರುಗುಪ್ಪ:ಕಾಮಗಾರಿ ನಡೆಯದೇ ಬಿಲ್ ಮಾಡಿಕೊಂಡ ಪಂಚಾಯಿತಿ ಅಧಿಕಾರಿಗಳು?
ಎಗ್ಗಿಲ್ಲದೇ ನಡೆದ ಹಗರಣಗಳು ತಮ್ಮ ತಪ್ಪನ್ನು ಮುಚ್ಚಿಹಾಕಲು ಅನಧಿಕೃತ ಹಾದಿಯಲ್ಲಿ ಪ್ರಯತ್ನ ನಡೆದಿದೆ
ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಅಧಿಕೃತ ಮಾಹಿತಿ ಪಡೆದು ಹಗರಣಕ್ಕೆ ಸಂಬ0ದಿಸಿದ ದಾಖಲೆಗಳನ್ನು ನೀಡಿ ದೂರು ಸಲ್ಲಿಸಿದರೂ ವಿಳಂಬದ ತನಿಖೆಯು ತಾಲೂಕಿನ ಬಾಗೆವಾಡಿ ಗ್ರಾಮ ಪಂಚಾಯಿತಿಯ ನಡೆಯ ಬಗ್ಗೆ ದೂರುದಾರ ಎಮ್.ಪವನ್‌ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.
ನನಗಿನ್ನೂ ಅಧಿಕಾರ ಹಸ್ತಾಂತರದ ಪ್ರತಿಯಿಲ್ಲ ಎನ್ನುತ್ತಿರುವ ಅಭಿವೃದ್ದಿ ಅಧಿಕಾರಿ ರಮೇಶ್, ಈಗಾಗಲೇ ಅಧಿಕಾರ ನೀಡಲಾಗಿದೆ ಎನ್ನುತ್ತಿರುವ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರ ಗೊಂದಲದ ಹೇಳಿಕೆಯು ವರದಿಗಾರರಿಗೆ ನೀಡುತ್ತಿರುವುದು.ಅಧಿಕಾರ ದುರ್ಬಳಕೆಯ ಜೊತೆಗೆ ಈ ಹಿಂದೆ ಹಗರಣಗಳನ್ನು ನಡೆಸಿರುವ ಅಭಿವೃದ್ದಿ ಅಧಿಕಾರಿಯ ಬೆನ್ನಿಗೆ ನಿಂತು ರಕ್ಷಿಸಿಕೊಳ್ಳುವ ಅನುಮಾನ ಎದ್ದು ಕಾಣುತ್ತಿದೆ.
ಗೊಂದಲದ ಗೂಡಾಗಿರುವ ಬಾಗೆವಾಡಿ ಗ್ರಾಮವೊಂದರಲ್ಲೇ ಇಷ್ಟು ಸಮಸ್ಯೆಗಳಿದ್ದು ಇನ್ನುಳಿದ ಗ್ರಾ.ಪಂ.ಗಳಲ್ಲಿ ಎಷ್ಟಿರಬಹುದೆಂಬುದು ದೂರುದಾರರ ವಾದವಾಗಿದೆ.
ಖಾತ್ರಿಯಾಗದ ನರೆಗಾ,ಕೆರೆಗಳ ನಿರ್ವಹಣೆಯ ನಿರ್ಲಕ್ಷದಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸದೇ ರಕ್ಷಣೆ ಮುಂದಾಗುತ್ತಿರುವ ಅಧಿಕಾರಿ ಇದ್ದರೆಷ್ಟು ಬಿಟ್ಟರೆಷ್ಟೆಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ