ಜೇವರ್ಗಿ:ದಿನಾಂಕ 02-07 -2023 ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಸ್ಪರ್ಧಾ ಆಕಾಂಕ್ಷಿಗಳಿಗೆ ರವಿವಾರ ಏರ್ಪಡಿಸಿದ ವಾರಾಂತ್ಯದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುವ ಸ್ಪರ್ಧಾ ಆಕಾಂಕ್ಷಿಗಳಿಗೆ ದಿನಾಂಕ:05.07.2023 ರಂದು ಯುವಜನ ಜಾಗೃತಿ ವೇದಿಕೆಯ ಸಂಸ್ಥಾಪಕರಾದ ಸಿದ್ದು ಅಂಕುಶ್ ದೊಡ್ಡಿ ಗುರುಗಳಿಂದ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳಿಗೆ ಮೋಟಿವೇಷನ್ ಸ್ಕಿಲ್ ಮತ್ತು ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುವ ಅಭ್ಯರ್ಥಿಗಳಿಗೆ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯದ ವತಿಯಿಂದ ಬಹುಮಾನ ವಿಜೇತರಿಗೆ ಸಿದ್ದು ಅಂಕುಶ್ ದೊಡ್ಡಿಯವರು ಸನ್ಮಾನಿಸಿ ಸತ್ಕರಿಸಿ ಹಾರೈಸಿದರು ಇದೇ ಸಂದರ್ಭದಲ್ಲಿ ಯುವಜನ ಜಾಗೃತಿ ವೇದಿಕೆಯ ಸಂಸ್ಥಾಪಕರಾದ ಸಿದ್ದು ಅಂಕಶ್ ದೊಡ್ಡಿಯವರು ಸ್ಪರ್ಧಾರ್ಥಿಗಳಿಗೆ ಮೋಟಿವೇಶನ್ ಸ್ಕೀಲ್ ಮತ್ತು ಅವರ ಜೀವನ ಚರಿತ್ರೆ ಹೇಳುತ್ತಾ ಪ್ರಮುಖ ವ್ಯಕ್ತಿಗಳ ನಡೆದು ಬಂದ ದಾರಿ,ಸಾಧನೆ, ಜೀವನ ಚರಿತ್ರೆ,ಅಧ್ಯಯನ ಶೀಲತೆ ಎಂದರೇನು? ಸ್ಪರ್ಧಾರ್ತಿಗಳು ಹೇಗೆ ಅಧ್ಯಾಯನ ಮಾಡಬೇಕು,ಸ್ಪರ್ಧಾರ್ಥಿಗಳು ಏನನ್ನು ಪಾಲಿಸಬೇಕು,ಯಾವುದನ್ನು ಗೌರವಿಸಬೇಕು,ಯಾವುದನ್ನು ಪ್ರೀತಿಸಬೇಕು, ಬಡತನ,ಸಿರಿತನ ಹಾಗೂ ಸಾಧನೆ ಮಾಡಲು ಹೇಗೆ ಓದಬೇಕು? ಎಷ್ಟು ಓದಬೇಕು? ಏನನ್ನು ಮೆಲುಕು ಹಾಕಬೇಕು? ಮುಂತಾದ ಜ್ಞಾನಾರ್ಜನೆಯ ಆಶಯ ನುಡಿಗಳನ್ನು ಸ್ಪರ್ಧಾರ್ಥಿಗಳ ಬದುಕಿನ ಏಳಿಗೆಗಾಗಿ ಮತ್ತು ಸಾಧನೆಗೆ ಮುನ್ನುಗಲು ಹಲವಾರು ವಿಚಾರಗಳನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ 02-07-2023 ರವಿವಾರದ ವಿಜೇತರಾದ ಕುಮಾರ:ಗುರುನಾಥ ಬಿರೆದಾರ ಹಾಗೂ ಕುಮಾರಿ ಭಾಗ್ಯಶ್ರೀ ಪೂಜಾರಿರವರು ನಮ್ಮ ಈ ಸಾಧನೆಗೆ ನಿರಂತರ ಅಧ್ಯಯನ ಮತ್ತು ಸಾಧಕರ ಜೀವನ ಚರಿತ್ರೆ ಹಾಗೂ ಮೋಟಿವೇಷನಂಥ ಮುಂತಾದ ವಿಷಯ ಪ್ರಕ್ರಿಯೆಗಳಿಂದ ಸಾಧ್ಯವಾಗುವುದರ ಜೊತೆಗೆ ಜೀವನದಲ್ಲಿ ನಾವು ಒಳ್ಳೆಯ ಹುದ್ದೆ ಪಡೆಯುವಲ್ಲಿ ಧನಾತ್ಮಕವಾಗಿ ಅಧ್ಯಾಯನ ಮಾಡುತ್ತಿದ್ದೇವೆ.ಇದೇ ರೀತಿ ಪ್ರತಿ ರವಿವಾರ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಸರ್ಕಾರಿ ಹುದ್ದೆಗಳು ನಮ್ಮ ಮನೆಯ ಹೊಸ್ತಲಿಗೆ ಹುಡುಕಿಕೊಂಡು ಬರುವುದು ಸಂಶಯವೇ ಇಲ್ಲ ಎಂದು ಸಾಧಕರ ಮನದಾಳದ ಮಾತಾಗಿದ್ದವು.ಈ ಸಂದರ್ಭದಲ್ಲಿ ಯುವ ಜನ ಜಾಗೃತಿ ವೇದಿಕೆಯ ಸಂಸ್ಥಾಪಕರಾದ ಸಿದ್ದು ಅಂಕೂಶ್ ದೊಡ್ಡಿ,ಗ್ರಂಥಾಲಯದ ನಿರ್ದೇಶಕರಾದ ಚಂದ್ರಶೇಖರ ಪಾಟೀಲ್,ವಿನಾಯಕ ಹಡಪದ,ಸಿದ್ದು ಮದ್ದರಕಿ,ಅಂಬರೀಶ್ ಹೆಡಿಗಿಜೋಳ,ಯಲ್ಲಮ್ಮ ಯಲಗೋಡ,ಅನೀಲ್,ಪ್ರಕಾಶ,ನಾಗರಾಜ,ಬಸ್ಸು,
ಭೀಮಾಶಂಕರ,ಉಮೇಶ,ಕಿರಣ ಹಾಗೂ ಮುಂತಾದ ಅತಿಥಿಗಳು ಹಾಗೂ ಸ್ಪರ್ಧಾ ಆಕಾಂಕ್ಷಿಗಳು ಹಾಜರಿದ್ದರು. ವರದಿ:ಚಂದ್ರಶೇಖರ ಪಾಟೀಲ್