ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅವಿರೋಧ ಅಭ್ಯರ್ಥಿಯಾಗಿ ತಾಯಮ್ಮ ಕಿರಣಗಿ ಮತ್ತು ಗುರು ಪಾಟೀಲ್ ಆಯ್ಕೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಶ್ರೀಮತಿ ತಾಯಮ್ಮ ಕಿರಣಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಗುರು ಪಾಟೀಲ್ ರನ್ನು ಆಯ್ಕೆ ಮಾಡಿದ್ದಕ್ಕಾಗಿ ನೆಲೋಗಿಯ ಸರ್ವ ಸದಸ್ಯರಿಗೂ ತಾಯಮ್ಮ ಕಿರಣಗಿ ಮತ್ತು ಗುರು ಪಾಟೀಲ್ ಗ್ರಾಮದ ಸರ್ವ ಸದಸ್ಯರಿಗೂ ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೂ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೂ,ಹಲವಾರು ಗಣ್ಯ ಮಾನ್ಯರಿಗೂ ಆಯ್ಕೆ ಮಾಡಿದ್ದಕ್ಕಾಗಿ ಅಭ್ಯರ್ಥಿ ಅನಂತ ಕೋಟಿ ಕೃತಜ್ಞತೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳ ವಿರಕ್ತ ಮಠ ನೆಲೋಗಿರವರು ದಿವ್ಯ ಸಾನಿದ್ಯವನ್ನು ವಹಿಸಿ ಸಭೆಯನ್ನುದ್ದೇಶಿಸಿ ಆಶಿರ್ವಚನವನ್ನು ಮಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಅಭಿವೃದ್ದಿ ನೋಡಿ ನನಗೆ ತುಂಬಾ ಖುಷಿಯಾಗಿದೆ ಇನ್ನಷ್ಟು ಅಭಿವೃಧ್ಧಿಯಾಗಿ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂದು ಆಯ್ಕೆಯಾದ ಅಭ್ಯಾರ್ಥಿಗಳಿಗೆ ಶುಭ ಕೋರಿದರು.
ಹಾಗೂ ಇನ್ನೋರ್ವ ರಾಜಕೀಯ ಕಾಂಗ್ರೇಸ್ ಧುರೀಣರಾದ ರಾಜಶೇಖರ ಸಾಹೂ ಸೀರಿಯವರು ನಾವು ರಾಜಕೀಯ ವಿಷಯಗಳನ್ನಾಗಲಿ,ಅಧಿಕಾರ ಮಾಡುವುದಾಗಲಿ,ಜನರ ಒಕ್ಕೂಟದ ಕಾರ್ಯಗಳನ್ನಾಗಲಿ ಕಲಿಯಬೇಕಾದರೆ ನೆಲೋಗಿ ಗ್ರಾಮವೇ ನಮಗೆ ಸ್ಪೂರ್ತಿ ಎಂದು ಆಶಾ ಭಾವದ ನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಗಳಾಗಿ ಭೀಮರಾಯ ಆರ್ ಗುಜಗೊಂಡರವರು ತಮ್ಮ ಆತಿಥ್ಯ ಸ್ಥಾನವನ್ನು ವಹಿಸಿದರು ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಭ್ಯಾರ್ಥಿಗಳನ್ನು ಶುಭ ಕೋರುತ್ತಾ
ವಸುದೈವ ಕುಟುಂಬಕಂ ಎಂದರೆ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ ಹಾಗಾಗಿ ನಮ್ಮ ನೆಲೋಗಿ ಗ್ರಾಮದ ಸರ್ವ ಸದಸ್ಯರು ಒಗ್ಗಟ್ಟಾಗಿರೋಣ ಎಂದು ತಮ್ಮ ನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಎಮ್ ಸಂಕಾಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಅರಳಗುಂಡಗಿ,ಬೈಲಪ್ಪ ಯುವ ಕಾಂಗ್ರೇಸ್ ಪಕ್ಷದ ಮುಖಂಡರು,ಶರಣು ಬಿಲ್ಲಾಡ,ಶರಭು ಕಲ್ಯಾಣಿ,ರವಿಕುಮಾರ ಕಿರಣಗಿ,ಮಲ್ಲಿ ಕಾರ್ಜುನ ಮಂಗಾ,ಬಸವರಾಜ ದಬಕಿ,ಧರೀಶ ಗುಳಗಿ ಹಾಗೂ ವಿವಿಧ ಸಂಘಟನಾ ಅಧ್ಯಕ್ಷರು ಮತ್ತು ಗ್ರಾಮದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಎಸ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ